
ಕೊಹ್ಲಿ, ಧೋನಿಯನ್ನು ಹಿಂದಿಕ್ಕಲಿದ್ದಾರೆ ಪಂತ್
ಗುರುವಾರ ಸಂಜೆ ಭಾರತ ತಂಡದ ನಾಯಕತ್ವದ ಟೋಪಿ ಧರಿಸುವುದರೊಂದಿಗೆ ರಿಷಭ್ ಪಂತ್, ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರನ್ನು ಹಿಂದಿಕ್ಕಲಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಎರಡನೇ ಕಿರಿಯ ಭಾರತೀಯ ನಾಯಕ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.
ಸುರೇಶ್ ರೈನಾ ಭಾರತದ ಅತ್ಯಂತ ಕಿರಿಯ ಟಿ20 ನಾಯಕ ಎಂಬ ದಾಖಲೆಯನ್ನು ಮಾಜಿ ಆಟಗಾರ ಸುರೇಶ್ ರೈನಾ ಹೊಂದಿದ್ದಾರೆ. ಅವರು 23 ವರ್ಷ ಮತ್ತು 197 ದಿನಗಳಿದ್ದಾಗ ಭಾರತ ಟಿ20 ತಂಡವನ್ನು ಮುನ್ನಡೆಸಿದ್ದರು ಮತ್ತು ಸದ್ಯಕ್ಕೆ ಅವರೇ ಆ ದಾಖಲೆಯನ್ನು ಮುಂದುವರಿಸಲಿದ್ದಾರೆ. ರಿಷಭ್ ಪಂತ್ 2ನೇ ಸ್ಥಾನದಲ್ಲಿ ನಾಯಕತ್ವ ಆರಂಭಿಸಲಿದ್ದಾರೆ. ರಿಷಭ್ ಪಂತ್ ಅಕ್ಟೋಬರ್ 1997 ರಲ್ಲಿ ಜನಿಸಿದ್ದು, 24 ವರ್ಷ ವಯಸ್ಸಿನವರಾಗಿದ್ದಾರೆ.

ರೈನಾ, ರಿಷಭ್ ಪಂತ್ ನಂತರದ ಸ್ಥಾನದಲ್ಲಿ ಎಂಎಸ್ ಧೋನಿ
ಸುರೇಶ್ ರೈನಾ ಮತ್ತು ರಿಷಭ್ ಪಂತ್ ನಂತರದ ಸ್ಥಾನದಲ್ಲಿ ಎಂಎಸ್ ಧೋನಿ ಇರಲಿದ್ದಾರೆ. ಅವರು 2007ರ ಟಿ20 ವಿಶ್ವಕಪ್ನಲ್ಲಿ ಭಾರತವನ್ನು ಮುನ್ನಡೆಸಿದ್ದ 26 ವರ್ಷ ವಯಸ್ಸಾಗಿತ್ತು. ನಂತರ 2006ರಲ್ಲಿ ಮೆನ್-ಇನ್-ಬ್ಲೂ ದಕ್ಷಿಣ ಆಫ್ರಿಕಾವನ್ನು ಎದುರಿಸಿದಾಗ ಭಾರತದ ಮೊದಲ ಟಿ20 ನಾಯಕ ವೀರೇಂದ್ರ ಸೆಹ್ವಾಗ್ 28 ವರ್ಷ ವಯಸ್ಸಿನವರಾಗಿದ್ದರು.
ವಿರಾಟ್ ಕೊಹ್ಲಿ ಮೊದಲ ಬಾರಿಗೆ ಟಿ20ಯಲ್ಲಿ ಭಾರತವನ್ನು ಮುನ್ನಡೆಸಿದಾಗ 28 ವರ್ಷ ವಯಸ್ಸಾಗಿತ್ತು. ಕುತೂಹಲಕಾರಿ ಅಂಶವೆಂದರೆ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 2013ರಲ್ಲಿ ಅವರ ಚೊಚ್ಚಲ ಏಕದಿನ ಮತ್ತು 2014ರಲ್ಲಿ ಮೊದಲ ಬಾರಿಗೆ ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸಿದರು. ಆದರೆ ಜನವರಿ 2017ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ನಾಯಕನಾಗುವ ಅವಕಾಶ ಒದಗಿಬಂದಿತ್ತು.

ಭಾರತಟಿ20 ತಂಡವನ್ನು ಮುನ್ನಡೆಸಿದ ಹಿರಿಯ ನಾಯಕ ಕೆಎಲ್ ರಾಹುಲ್
2015ರಲ್ಲಿ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡದ ನಾಯಕರಾಗಿದ್ದ ಅಜಿಂಕ್ಯಾ ರಹಾನೆಗೆ ಆಗ 28 ವರ್ಷ ವಯಸ್ಸಾಗಿತ್ತು ಮತ್ತು ಕೆಎಲ್ ರಾಹುಲ್ ತಮ್ಮ 30ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಭಾರತ ಟಿ20 ತಂಡವನ್ನು ಮುನ್ನಡೆಸಿದ ಹಿರಿಯ ನಾಯಕರಾಗಿದ್ದಾರೆ.
ರಿಷಭ್ ಪಂತ್ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ತಂಡದ ಚೊಚ್ಚಲ ನಾಯಕತ್ವದ ಮುನ್ನಾದಿನದಂದು ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. 24 ವರ್ಷ ವಯಸ್ಸಿನ ಪಂತ್, ತಮ್ಮನ್ನು ನಾಯಕನನ್ನಾಗಿ ಮಾಡಿದ್ದರ ಬಗ್ಗೆ ಸಂತೋಷಪಟ್ಟರು ಮತ್ತು ಆದರ್ಶವಲ್ಲದ ಪರಿಸ್ಥಿತಿಯನ್ನು ಒಪ್ಪಿಕೊಂಡರು.

ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದ
"ಇದು ತುಂಬಾ ಒಳ್ಳೆಯ ಭಾವನೆ. ಆದರೆ ಇದು ತುಂಬಾ ಒಳ್ಳೆಯ ಸಂದರ್ಭಗಳಲ್ಲಿ ಬರಲಿಲ್ಲ. ಇದೇ ಸಮಯದಲ್ಲಿ ನಾನು ಸಂತೋಷವನ್ನು ಅನುಭವಿಸುತ್ತೇನೆ. ಭಾರತ ತಂಡವನ್ನು ಮುನ್ನಡೆಸಲು ಈ ಅವಕಾಶ ನೀಡಿದ ಬಿಸಿಸಿಐಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಶಕ್ತಿ ಮೀರಿ ತಂಡದ ಗೆಲುವಿಗೆ ಪ್ರಯತ್ನಿಸುತ್ತೇನೆ," ಎಂದು ರಿಷಭ್ ಪಂತ್ ಬುಧವಾರ ಹೇಳಿದರು.
"ಮೊದಲನೆಯದಾಗಿ, ನನ್ನ ಕ್ರಿಕೆಟ್ ವೃತ್ತಿಜೀವನ ಪ್ರಯಾಣದ ಉದ್ದಕ್ಕೂ ಏರಿಳಿತದ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲಾ ಹಿತೈಷಿಗಳಿಗೆ ಧನ್ಯವಾದಗಳು. ಆದರೆ ಪ್ರತಿ ದಿನವೂ ನನ್ನ ಜೀವನವನ್ನು ಸುಧಾರಿಸಲು ಮತ್ತು ಉತ್ತಮಗೊಳಿಸಲು ನಾನು ಇದನ್ನು ಆಧಾರವಾಗಿಸಲು ಬಯಸುತ್ತೇನೆ," ಎಂದು ರಿಷಭ್ ಪಂತ್ ತಿಳಿಸಿದರು.


Click it and Unblock the Notifications
