
ಇದು ಕ್ರಿಕೆಟ್ ಅಲ್ಲವೇ ಅಲ್ಲ!
ಮೊಹಮ್ಮದ್ ಸಿರಾಜ್ ಅವರ ಆಟವನ್ನು ನಾನು ಮೆಚ್ಚಿಕೊಂಡಿದ್ದೆ ಮತ್ತು ಬೌಲಿಂಗ್ ಮಾಡುವ ವೇಳೆ ಆತನಲ್ಲಿ ಇರುತ್ತಿದ್ದ ಉದ್ವೇಗ ನನಗೆ ಇಷ್ಟವಾಗುತ್ತಿತ್ತು. ಆದರೆ ಇದೀಗ ಟೆಂಬಾ ಬವುಮಾ ವಿರುದ್ಧ ಬೇಕಂತಲೇ ಚೆಂಡನ್ನು ಎಸೆದಿರುವ ಮೊಹಮ್ಮದ್ ಸಿರಾಜ್ ಅವರ ನಡೆ ನಿಜಕ್ಕೂ ಬೇಸರ ಮೂಡಿಸಿದೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಆಟಗಾರನಿಗೆ ಉದ್ದೇಶಪೂರ್ವಕವಾಗಿ ಚೆಂಡನ್ನು ಬೀಸುವುದು ಕ್ರಿಕೆಟ್ ಅಲ್ಲವೇ ಅಲ್ಲ ಎಂದು ನೆಟ್ಟಿಗನೋರ್ವ ಕಿಡಿಕಾರಿದ್ದಾನೆ.

ವಿಕೆಟ್ ಪಡೆಯಲು ಆಗುವುದಿಲ್ಲ ಎಂದು ನೋಯಿಸಲು ಮುಂದಾದ ಸಿರಾಜ್
ಸಿರಾಜ್ ಟೆಂಬಾ ಬವುಮಾ ಅವರನ್ನು ನೋಯಿಸಲು ಪ್ರಯತ್ನಿಸುತ್ತಿದ್ದಾರೆ ಏಕೆಂದರೆ ಆತನಿಗೆ ಟೆಂಬಾ ಬವುಮಾ ಅವರ ವಿಕೆಟ್ ಪಡೆಯಲು ಆಗುವುದಿಲ್ಲ ಎಂಬ ವಿಷಯ ಚೆನ್ನಾಗಿ ಅರಿತಿದೆ ಎಂದು ನೆಟ್ಟಿಗನೋರ್ವ ಮೊಹಮ್ಮದ್ ಸಿರಾಜ್ ವಿರುದ್ಧ ಚಾಟಿ ಬೀಸಿದ್ದಾನೆ.

ಬವುಮಾ ರನ್ ಓಡಲು ಯತ್ನಿಸಿಯೇ ಇಲ್ಲ
ಮತ್ತೋರ್ವ ನೆಟ್ಟಿಗ ಮೊಹಮ್ಮದ್ ಸಿರಾಜ್ ನಡೆಯ ಕುರಿತು ಬೇಸರ ವ್ಯಕ್ತಪಡಿಸಿದ್ದು ಟೆಂಬಾ ಬವುಮಾ ರನ್ ಓಡಲು ಇನ್ನೂ ಕ್ರೀಸ್ ಬಿಟ್ಟೇ ಇರಲಿಲ್ಲ, ಆಗಲೇ ಮೊಹಮ್ಮದ್ ಸಿರಾಜ್ ಕಾರಣವಿಲ್ಲದೆ ಸುಖಾಸುಮ್ಮನೆ ಚೆಂಡನ್ನು ಎಸೆದದ್ದು ತುಂಬಾ ಹೀನವಾದದ್ದು ಎಂದು ಬರೆದುಕೊಂಡಿದ್ದಾರೆ. ಹೀಗೆ ಇನ್ನೂ ಮುಂತಾದ ಹಲವಾರು ನೆಟ್ಟಿಗರು ಮೊಹಮ್ಮದ್ ಸಿರಾಜ್ ವಿರುದ್ಧ ಕಿಡಿಕಾರುತ್ತಿದ್ದು ಸುಮ್ಮನೆ ಇರಲಾರದೇ ಈ ವಿವಾದವೆಲ್ಲಾ ನಿನಗೆ ಬೇಕಿತ್ತಾ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications
