
ಕೆಎಲ್ ರಾಹುಲ್ ಬೌಲರ್ಗಳಿಗೆ ಸಾಕಷ್ಟು ಸ್ವಾತಂತ್ರ್ಯವನ್ನು ನೀಡುತ್ತಾರೆ
"ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ನಲ್ಲಿ ನಾನು ಚೆನ್ನಾಗಿ ಬೌಲಿಂಗ್ ಮಾಡಿದ್ದೇನೆ, ಮೊದಲ ಪಂದ್ಯದಲ್ಲೂ ನನ್ನ ಲಯ ಚೆನ್ನಾಗಿತ್ತು. ಆದ್ದರಿಂದ ನಾನು ವಿಕೆಟ್ ಪಡೆಯುತ್ತೇನೋ ಇಲ್ಲವೋ ಎಂದು ಚಿಂತಿಸದೆ ಸ್ಥಿರವಾಗಿ ಏರಿಯಾವನ್ನು ಹುಡುಕುವುದು ನನ್ನ ಯೋಜನೆ," ಎಂದು ಮೊಹಮ್ಮದ್ ಸಿರಾಜ್ ಪಂದ್ಯದ ನಂತರ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. ಎಂಟು ಓವರ್ಗಳಲ್ಲಿ 16 ರನ್ಗಳನ್ನು ನೀಡಿ ಒಂದು ವಿಕೆಟ್ ಪಡೆದರು.
"ಮೊದಲಿಗೆ ಧನ್ಯವಾದಗಳು, ನಾವು ಸರಣಿಯನ್ನು ಗೆದ್ದಿದ್ದೇವೆ. ವಾತಾವರಣವು ತುಂಬಾ ಚೆನ್ನಾಗಿದೆ. ಕೆಎಲ್ ರಾಹುಲ್ ಭಾಯ್ ಬೌಲರ್ಗಳಿಗೆ ಸಾಕಷ್ಟು ಸ್ವಾತಂತ್ರ್ಯವನ್ನು ನೀಡುತ್ತಾರೆ, ಆದ್ದರಿಂದ ತಂಡದ ವಾತಾವರಣವು ತುಂಬಾ ಚೆನ್ನಾಗಿದೆ," ಎಂದರು.

ಈಗ ನಾನು ಸೀಮ್ನಲ್ಲಿ ಹೆಚ್ಚು ಕೆಲಸ ಮಾಡಿದ್ದೇನೆ
"ನನ್ನ ಬೌಲಿಂಗ್ ಅನ್ನು ನಾನು ತುಂಬಾ ಆನಂದಿಸುತ್ತಿದ್ದೇನೆ, ಏಕೆಂದರೆ ನಾನು ಮೊದಲಿನಿಂದಲೂ ಔಟ್ಸ್ವಿಂಗ್ ಹೊಂದಿದ್ದೆ. ಆದರೆ ಅದರ ಬಗ್ಗೆ ನನಗೆ ಹೆಚ್ಚು ವಿಶ್ವಾಸವಿರಲಿಲ್ಲ. ಈಗ ನಾನು ಸೀಮ್ನಲ್ಲಿ ಹೆಚ್ಚು ಕೆಲಸ ಮಾಡಿದ್ದೇನೆ ಮತ್ತು ನನಗೆ ಆತ್ಮವಿಶ್ವಾಸವೂ ಸಿಕ್ಕಿದೆ. ಬೌಲ್ ನನ್ನ ಕೈಯಿಂದ ಚೆನ್ನಾಗಿ ಬಿಡುಗಡೆಯಾಗುವುದನ್ನು ನೀವು ನೋಡುತ್ತಿರಬೇಕು. ನಾನು ಆ ಲಯದೊಂದಿಗೆ ಬೌಲಿಂಗ್ ಮಾಡುತ್ತಿದ್ದೆ," ಎಂದು ಮೊಹಮ್ಮದ್ ಸಿರಾಜ್ ತಿಳಿಸಿದರು.
13 ಟೆಸ್ಟ್ಗಳಲ್ಲಿ 40 ವಿಕೆಟ್ಗಳೊಂದಿಗೆ ಮೊಹಮ್ಮದ್ ಸಿರಾಜ್ ಕೆಂಪು ಬಾಲ್ ಕ್ರಿಕೆಟ್ನಲ್ಲಿ ಪ್ರಭಾವ ಬೀರಿದ್ದಾರೆ, ಆದರೆ ಅವರು ಬಿಳಿ ಚೆಂಡಿನ ಆಟದಲ್ಲಿ ಸ್ಥಿರತೆಯ ಕೊರತೆಯನ್ನು ಎದುರಿಸುತ್ತಿದ್ದಾರೆ.

10 ಏಕದಿನ ಪಂದ್ಯಗಳಲ್ಲಿ 13 ವಿಕೆಟ್ ಪಡೆದಿರುವ ಸಿರಾಜ್
ವೈಟ್ ಬಾಲ್ ಕ್ರಿಕೆಟ್ಗೆ ನೀವು ಯಾವುದೇ ಬದಲಾವಣೆಗಳನ್ನು ಮಾಡಿದ್ದೀರಾ ಎಂದು ಕೇಳಿದಾಗ, "ನಾನು ನನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ, ಏಕೆಂದರೆ ಏರಿಳಿತಗಳು ಪ್ರತಿಯೊಬ್ಬರ ಜೀವನದ ಭಾಗವಾಗಿದೆ, ಆದ್ದರಿಂದ ನಾನು ಅದನ್ನು ಮಾಡಬಲ್ಲೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿದ್ದೇನೆ. ಬಿಳಿ ಚೆಂಡು ಅಥವಾ ಕೆಂಪು ಚೆಂಡು ಇರಬಹುದು," ಎಂದು ಮೊಹಮ್ಮದ್ ಸಿರಾಜ್ ಹೇಳಿದರು.
ಈವರೆಗೆ ಐದು ಟಿ20 ಪಂದ್ಯಗಳಲ್ಲಿ ಮೊಹಮ್ಮದ್ ಸಿರಾಜ್ ಕೇವಲ ಐದು ವಿಕೆಟ್ ಪಡೆದರೆ, 10 ಏಕದಿನ ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ.
ಎರಡನೇ ಪಂದ್ಯದಲ್ಲಿ ಗೆಲುವಿಗೆ 162 ರನ್ಗಳ ಗುರಿ ಬೆನ್ನತ್ತಿದ ಭಾರತ 14ನೇ ಓವರ್ನ ಅಂತ್ಯಕ್ಕೆ 4 ವಿಕೆಟ್ಗೆ 97 ರನ್ ಗಳಿಸಿತ್ತು. ಆಗ ಸಂಜು ಸ್ಯಾಮ್ಸನ್ 39 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿ 24.2 ಓವರ್ಗಳು ಬಾಕಿ ಇರುವಂತೆಯೇ ಪ್ರವಾಸಿ ತಂಡಕ್ಕೆ ಸರಣಿ ಗೆದ್ದುಕೊಟ್ಟರು.

ಏಷ್ಯಾಕಪ್ಗೆ ಮುಂಚಿತವಾಗಿ ರಾಹುಲ್ ದ್ರಾವಿಡ್ಗೆ ವಿಶ್ರಾಂತಿ
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಪ್ರಸ್ತುತ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಜಿಂಬಾಬ್ವೆ ಪ್ರವಾಸಕ್ಕಾಗಿ ಭಾರತದ ಮುಖ್ಯ ಕೋಚ್ ಪಾತ್ರವನ್ನು ವಹಿಸಿಕೊಂಡರು ಮತ್ತು ಏಷ್ಯಾಕಪ್ಗೆ ಮುಂಚಿತವಾಗಿ ರಾಹುಲ್ ದ್ರಾವಿಡ್ಗೆ ವಿಶ್ರಾಂತಿ ನೀಡಲಾಗಿದೆ.
ವಿವಿಎಸ್ ಲಕ್ಷ್ಮಣ್ ಅವರ ಪಾತ್ರದ ಬಗ್ಗೆ ಕೇಳಿದಾಗ, "ನಾನು ಮೊದಲ ಬಾರಿಗೆ ಆಯ್ಕೆಯಾದಾಗ ವಿವಿಎಸ್ ಲಕ್ಷ್ಮಣ್ ಸರ್ ಅವರು ಸನ್ರೈಸರ್ಸ್ ಹೈದರಾಬಾದ್ (ಐಪಿಎಲ್ನಲ್ಲಿ) ಭಾಗವಾಗಿದ್ದರು. ಅವರು ನನ್ನ ಕೌಶಲ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನನಗೆ ಸಾಕಷ್ಟು ಆತ್ಮವಿಶ್ವಾಸವನ್ನು ನೀಡುತ್ತಾರೆ ಮತ್ತು ಕೋಚ್ ಹತ್ತಿರದಲ್ಲಿದ್ದಾಗ ಅದು ತುಂಬಾ ಒಳ್ಳೆಯದು," ಎಂದು ಮೊಹಮ್ಮದ್ ಸಿರಾಜ್ ತಿಳಿಸಿದರು.


Click it and Unblock the Notifications












