ವೆಸ್ಟ್ ಇಂಡೀಸ್ ವಿರುದ್ಧ 205 ರನ್ ಗಳಿಸಿದ ಗಿಲ್
"2023ರ ಐಸಿಸಿ ವಿಶ್ವಕಪ್ ತಯಾರಿಯಲ್ಲಿ ಭಾರತ ತಂಡದ ಬ್ಯಾಕ್ಅಪ್ ಓಪನರ್ ಪಾತ್ರವನ್ನು ಶುಭ್ಮನ್ ಗಿಲ್ ನಿರ್ವಹಿಸಬಹುದು. ಆದರೆ ಸ್ಟ್ಯಾಂಡ್-ಇನ್ ನಾಯಕ ಕೆಎಲ್ ರಾಹುಲ್ ನಂ. 4ರಲ್ಲಿ ಬ್ಯಾಟಿಂಗ್ ಮಾಡಬೇಕು," ಎಂದು ಮಾಜಿ ಭಾರತೀಯ ಕ್ರಿಕೆಟ್ ಆಯ್ಕೆಗಾರ ಸಬಾ ಕರೀಮ್ ಲೆಕ್ಕ ಹಾಕಿದ್ದಾರೆ. ಶುಭ್ಮನ್ ಗಿಲ್ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಬಹುದಾದ ಆಯಾಮದ ಆಟಗಾರ ಎಂದು ಹೇಳಿದ್ದಾರೆ.
ಈ ಹಿಂದಿನ ವೆಸ್ಟ್ ಇಂಡೀಸ್ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ ಶುಭ್ಮನ್ ಗಿಲ್ 205 ರನ್ ಗಳಿಸಿ ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಶಿಖರ್ ಧವನ್ 168 ರನ್ ಗಳಿಸಿ ಎರಡನೇ ಸ್ಥಾನ ಪಡೆದರು. ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಮತ್ತು ಶುಭ್ಮನ್ ಗಿಲ್ ಜೋಡಿ ತಮ್ಮ ಆತ್ಯುತ್ತಮ ಆಟವನ್ನು ಮುಂದುವರೆಸಿದರು.
ಗಿಲ್ 82 ಮತ್ತು ಧವನ್ 81 ರನ್
ಧವನ್ -ಗಿಲ್ ಜೋಡಿ ಆಗಸ್ಟ್ 18, ಗುರುವಾರದಂದು 3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತವು 10 ವಿಕೆಟ್ಗಳ ಜಯ ಸಾಧಿಸಲು ಸಹಾಯ ಮಾಡಿದರು. ಗಿಲ್ 82 ಮತ್ತು ಧವನ್ 81 ರನ್ ಗಳಿಸಿ 192 ರನ್ ಸೇರಿಸಿದರು. ಏಕದಿನ ಪಂದ್ಯದಲ್ಲಿ ಜಿಂಬಾಬ್ವೆಯಲ್ಲಿ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಆರಂಭಿಕ ವಿಕೆಟ್ನಲ್ಲಿ ಅತ್ಯಧಿಕ ಪಾಲುದಾರಿಕೆ ನೀಡಿದರು.
"ಈ ಸಮಯದಲ್ಲಿ ಕೆಎಲ್ ರಾಹುಲ್ ಅವರ ಸ್ಥಾನವು ನಂ.4 ಆಗಿದೆ. ಹೀಗಾಗಿ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಬ್ಯಾಟಿಂಗ್ ತೆರೆಯಲು ಕಾರಣವಾಗಿದೆ. ಭಾರತದ ಆಯ್ಕೆಗಾರರು ಮತ್ತು ತಂಡದ ಆಡಳಿತವು 2023ರ ವಿಶ್ವಕಪ್ಗೆ ಬ್ಯಾಕ್ಅಪ್ ಓಪನರ್ಗಾಗಿ ಎದುರು ನೋಡುತ್ತಿದೆ," ಎಂದು ಮಾಜಿ ಆಯ್ಕೆಗಾರ ಸಬಾ ಕರೀಮ್ ತಿಳಿಸಿದರು.
ರೋಹಿತ್ ಶರ್ಮಾ, ಶಿಖರ್ ಧವನ್ ಮುಂಚೂಣಿ ಓಪನರ್
"ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮುಂಚೂಣಿಯ ಓಪನರ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ ಶುಭ್ಮನ್ ಗಿಲ್ ಬ್ಯಾಕ್ಅಪ್ ಓಪನರ್ ಪಾತ್ರವನ್ನು ನಿರ್ವಹಿಸಬಲ್ಲರು. ಸರಿಯಾದ ತಂತ್ರದೊಂದಿಗೆ ಮೂರು ಸ್ವರೂಪಗಳಲ್ಲಿ ಆಡುವುದು ತುಂಬಾ ಕಷ್ಟ, ಆದರೆ ಶುಭ್ಮನ್ ಗಿಲ್ ಆ ಎಲ್ಲಾ ಅಂಶಗಳನ್ನು ಹೊಂದಿದ್ದಾರೆ. ಅವರ ಮನೋಧರ್ಮ ಉತ್ತಮವಾಗಿದೆ. ಅವರು ರನ್ ಗಳಿಸಿಸಿಯೂ ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು," ಎಂದು ಮಾಜಿ ಕ್ರಿಕೆಟಿಗ ಸಬಾ ಕರೀಮ್ ಹೇಳಿದರು.
ಜಿಂಬಾಬ್ವೆ ವಿರುದ್ಧ ಭಾರತದ ಸಂಭಾವ್ಯ ತಂಡ
ಭಾರತ: ಕೆಎಲ್ ರಾಹುಲ್(ನಾಯಕ), ಶಿಖರ್ ಧವನ್ (ಉಪನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ದೀಪಕ್ ಚಾಹರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
ಬೆಂಚ್: ರಾಹುಲ್ ತ್ರಿಪಾಠಿ, ಶಾರ್ದೂಲ್ ಠಾಕೂರ್, ಅವೇಶ್ ಖಾನ್, ಶಬಾಜ್ ನದೀಮ್, ರುತುರಾಜ್ ಗಾಯಕ್ವಾಡ್