
ಪಿವಿ ಸಿಂಧು ಸೂಪರ್
ಚೀನಾ ಓಪನ್ ಸೀರಿಸ್, ಹಾಂಕಾಂಗ್ ಓಪನ್ ಫೈನಲ್, ಪ್ರೀಮಿಯರ್ ಬಾಡ್ಮಿಂಟನ್ ಲೀಗ್ (ಪಿಬಿಎಲ್) ನಲ್ಲಿ ಚೆನ್ನೈ ಸ್ಮಾಶರ್ಸ್ ಗೆ ಕಪ್ ಗೆಲ್ಲಿಸಿದರು. ಸೈಯದ್ ಮೋದಿ ಇಂಟರ್ ನ್ಯಾಷನಲ್ ಗ್ರಾನ್ ಪ್ರೀಯಲ್ಲಿ ಜಯದೊಂದಿಗೆ ವರ್ಷಾರಂಭ ಮಾಡಿದ ಸಿಂಧು ಈಗ ಚೊಚ್ಚಲ ಬಾರಿಗೆ ಇಂಡಿಯನ್ ಓಪನ್ ಸೀರಿಸ್ ಫೈನಲ್ ತಲುಪಿ, ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದಿಗ್ಗಜ, ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಅಲ್ಲದೆ ಇತರೆ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಪಿವಿ ಸಿಂಧು ಅವರ ಆಟವನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ ಕೋಚ್ ಅನಿಲ್ ಕುಂಬ್ಳೆ
ಕ್ರಿಕೆಟ್ ದಿಗ್ಗಜ, ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಅವರು ಟ್ವೀಟ್ ಮಾಡಿ, ಅದ್ಭುತ ಗೆಲುವು, ಇನ್ನೂ ಹೆಚ್ಚಿನ ಸಾಧನೆ ನಿಮ್ಮಿಂದ ಬರಲಿ ಎಂದು ಹಾರೈಸಿದ್ದಾರೆ.
ವಸುಂಧರಾ ರಾಜೆರಿಂದ ಟ್ವೀಟ್
ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರು ಟ್ವೀಟ್ ಮಾಡಿ, ಇನ್ನೂ ಹೆಚ್ಚಿನ ಶಕ್ತಿ ಸಿಗಲಿ, ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದು ಸಿಂಧು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸಿಂಧು ಐಕ್ಯತಾ ಸಂಕೇತ
ಕ್ರೀಡೆಯ ಮೂಲಕ ಹಿಂದೂ, ಕ್ರೈಸ್ತ, ಸಿಖ್, ಮುಸಲ್ಮಾನ ಎಲ್ಲರಲ್ಲೂ ಐಕ್ಯತೆ ಮೂಡಿಸುವ ಶಕ್ತಿ ಇದೆ. ಸಿಂಧು ಇದು ನಿಮ್ಮಿಂದ ಸಾಧ್ಯವಾಗಿದೆ ಎಂದು ಕ್ರಿಕೆಟ್ ಲೆಜೆಂಡ್ ಸೆಹ್ವಾಗ್
ಜ್ವಾಲಾ ಗುಟ್ಟಾರಿಂದ ಟ್ವೀಟ್
ಸಿಂಧು-ಬಿಂದು ಸೂಪರ್ ಆಟ, ಇನ್ನಷ್ಟು ಪ್ರಶಸ್ತಿಗಳು ಬರಲಿ ಎಂದ ಡಬ್ಬಲ್ಸ್ ತಾರೆ ಜ್ವಾಲಾ ಗುಟ್ಟಾ


Click it and Unblock the Notifications