
ಹಾರ್ದಿಕ್ ಪಟೇಲ್ ರಿಂದ ಪ್ರತಿಭಟನೆ ಘೋಷಣೆ
ಪಾಟೀದಾರ್ ಅನಾಮತ್ ಆಂದೋಳನ್ ಸಮಿತಿ ಮುಖಂಡತ್ವವನ್ನು ವಹಿಸಿಕೊಂಡಿರುವ ಹಾರ್ದಿಕ್ ಪಟೇಲ್ ಅವರು ಭಾರಿ ಸಂಖ್ಯೆಯಲ್ಲಿ ಮೈದಾನ ಪ್ರವೇಶಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುವುದಾಗಿ ಹೇಳಿದ್ದಾರೆ. ಪಟೇಲ್ ಸಮುದಾಯಕ್ಕೆ ಒಬಿಸಿ ಕೆಟಗರಿಯಲ್ಲಿ ಮೀಸಲಾತಿ ಸಿಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಬಿಸಿಸಿಐ ಮನವಿ
ಬಿಸಿಸಿಐ ಪರವಾಗಿ ಎಸ್ ಇಎ ಗೌರವ ಕಾರ್ಯದರ್ಶಿ ನಿರಂಜನ್ ಶಾ ಅವರು 22 ವರ್ಷದ ಹಾರ್ದಿಕ್ ಪಟೇಲ್ ಅವರಲ್ಲಿ ಮನವಿ ಮಾಡಿಕೊಂಡು, ಪ್ರತಿಭಟನೆ ಕೈ ಬಿಡುವಂತೆ ಕೇಳಿಕೊಂಡಿದ್ದಾರೆ.

ಟೀಂ ಇಂಡಿಯಾ ತಂಗಲಿರುವ ಹೋಟೆಲ್
ಮುಖ್ಯಮಂತ್ರಿ ಆನಂದಿಬೇನ್ ಅವರು ಪಂದ್ಯ ವೀಕ್ಷಣೆ ಬರುವುದರಿಂದ ಹೆಚ್ಚಿನ ರೀತಿಯಲ್ಲಿ ಭದ್ರತೆ ಕೈಗೊಳ್ಳಲಾಗಿದೆ ಎಂದು ರಾಜ್ ಕೋಟ್ ಎಸ್ ಪಿ ಗಗನ್ ದೀಪ್ ಗಂಭೀರ್ ಹೇಳಿದ್ದಾರೆ.

ಧೋನಿ ಪಡೆಗೆ ಆತ್ಮೀಯ ಸ್ವಾಗತ ಸಿಕ್ಕಿದೆ
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಇಂದೋರ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಎಂಎಸ್ ಧೋನಿ ಪಡೆಗೆ ರಾಜ್ ಕೋಟ್ ನಲ್ಲಿ ಆತ್ಮೀಯ ಸ್ವಾಗತ ಸಿಕ್ಕಿದೆ. ಟೆಸ್ಟ್ ಆಟಗಾರ ಚೇತೇಶ್ವರ್ ಪೂಜಾರಾ ಅವರು ಟೀಂ ಇಂಡಿಯಾ ಸದಸ್ಯರಿಗೆ 'ಪ್ರೀತಿಯ ಭೋಜನ' ಬಡಿಸಿದ್ದಾರೆ.

ಮೂರನೇ ಏಕದಿನ ಪಂದ್ಯಕ್ಕಾಗಿ ತಯಾರಿ
ರಾಜ್ ಕೋಟ್ ಗೆ ಬಂದಿಳಿದಿರುವ ಎಂಎಸ್ ಧೋನಿ ನಾಯಕತ್ವದ ಭಾರತ ತಂಡ, ಭಾನುವಾರ (ಅಕ್ಟೋಬರ್ 18) ಮೂರನೇ ಏಕದಿನ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿದೆ.

ಮೈದಾನದ ಸುತ್ತಾ ಸ್ವಾಗತ ಕಮಾನು
ಮೈದಾನದ ಸುತ್ತಾ ಸ್ವಾಗತ ಕಮಾನು, ಫ್ಲೆಕ್ಸ್, ಬ್ಯಾನರ್ ಗಳು ಹಾಕಲಾಗಿದ್ದು, ಟೀಂ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರ ಚಿತ್ರಗಳನ್ನು ಹಾಕಿ ಸ್ವಾಗತಿಸಲಾಗಿದೆ.

ರಾಜ್ ಕೋಟ್ ನ ಪ್ರಮುಖ ಹೋಟೆಲ್
ರಾಜ್ ಕೋಟ್ ನ ಪ್ರಮುಖ ಹೋಟೆಲ್ ನಲ್ಲಿ ಎರಡು ತಂಡದ ಆಟಗಾರರು ನೆಲೆಸಲಿದ್ದಾರೆ. ವಿಶೇಷ ಆತಿಥ್ಯ ಅವರಿಗಾಗಿ ಕಾದಿದೆ.

ಹೋಟೆಲ್ ನ ಒಳಾಂಗಣ
ಟೀಂ ಇಂಡಿಯಾ ನೆಲೆಸಲಿರುವ ಹೋಟೆಲ್ ನ ಒಳಾಂಗಣ ಚಿತ್ರ.


Click it and Unblock the Notifications











