
ಶಿಖರ್ ಧವನ್ಗೆ ಅವಕಾಶ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದ ಸಬಾ ಕರೀಮ್
ಶಿಖರ್ ಧವನ್ ಅವರಿಗೆ ಭಾರತ ತಂಡದಲ್ಲಿ ಅವಕಾಶ ನೀಡುವುದರ ಕುರಿತು ಪ್ರತಿಕ್ರಿಯಿಸಿರುವ ಸಬಾ ಕರೀಮ್ "ಶಿಖರ್ ಧವನ್ ಅವರಿಗೆ ಭಾರತ ಏಕದಿನ ತಂಡದಲ್ಲಿ ಸ್ಥಾನ ನೀಡಿದರೂ ಸಹ ಆತನಿಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿದೆಯಾ? ಈಗಾಗಲೇ ಕೆ ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಜೋಡಿ ಟೆಸ್ಟ್ ಮತ್ತು ಟಿ ಟ್ವೆಂಟಿ ಪಂದ್ಯಗಳಲ್ಲಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದು, ಏಕದಿನ ಪಂದ್ಯಗಳಲ್ಲಿಯೂ ಕೂಡ ಇದೇ ಜೋಡಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಹೀಗಾಗಿ ಶಿಖರ್ ಧವನ್ ಅವರನ್ನು ಆಯ್ಕೆ ಮಾಡಿ ಆಡುವ ಬಳಗದಲ್ಲಿ ಅವಕಾಶ ನೀಡದೇ ಇರುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

ಈ ಕಾರಣಕ್ಕೆ ಶಿಖರ್ ಧವನ್ ಅವರಿಗೆ ಅವಕಾಶ ಸಿಗಬಹುದು
ಇನ್ನೂ ಮುಂದುವರೆದು ಈ ವಿಷಯದ ಕುರಿತಾಗಿ ಮಾತನಾಡಿರುವ ಸಬಾ ಕರೀಮ್ "ಶಿಖರ್ ಧವನ್ ಎಡಗೈ ಆಟಗಾರ ಎಂಬುದು ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗಲು ಇರುವ ಏಕೈಕ ಸಾಧ್ಯತೆ. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಎಡಗೈ ಮತ್ತು ಬಲಗೈ ಕಾಂಬಿನೇಷನ್ ಇಲ್ಲಿ ಧವನ್ ಅವರಿಗೆ ಅವಕಾಶವನ್ನು ಒದಗಿಸಬಹುದು" ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಿಖರ್ ಧವನ್ ಅವರಿಗೆ ಮತ್ತೊಂದು ಅವಕಾಶ ನೀಡಬೇಕು
ಶಿಖರ್ ಧವನ್ ಅವರನ್ನು ಆಯ್ಕೆ ಮಾಡಿದರೂ ಸಹ ಆಡುವ ಬಳಗದಲ್ಲಿ ಅವಕಾಶ ನೀಡುವುದು ಅನುಮಾನ ಎಂದು ಹೇಳಿಕೆ ನೀಡಿರುವ ಸಬಾ ಕರೀಮ್ ಶಿಖರ್ ಧವನ್ ಅವರಿಗೆ ಮತ್ತೊಂದು ಅವಕಾಶ ನೀಡುವ ಅಗತ್ಯತೆ ಇದೆ ಎಂದೂ ಸಹ ಅಭಿಪ್ರಾಯಪಟ್ಟಿದ್ದಾರೆ. ಶಿಖರ್ ಧವನ್ ಸಾಕಷ್ಟು ಅನುಭವವನ್ನು ಹೊಂದಿರುವಂತಹ ಆಟಗಾರನಾಗಿರುವ ಕಾರಣ ಮತ್ತೊಂದು ಅವಕಾಶವನ್ನು ನೀಡಬೇಕಿದೆ ಎಂದು ಸಬಾ ಕರೀಮ್ ಹೇಳಿಕೆ ನೀಡಿದ್ದಾರೆ.


Click it and Unblock the Notifications
