
ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಪಾಕಿಸ್ತಾನದ ವಿರುದ್ಧದ ಅದ್ಭುತ ವಿಜಯದ ನಂತರ ಟಿವಿ ವಾಹಿನಿ ಜೊತೆ ಮಾತನಾಡುವಾಗ ಭಾವುಕರಾದರು. ವಿಶೇಷ ಸಂದರ್ಭದಲ್ಲಿ ತನ್ನ ದಿವಂಗತ ತಂದೆಯನ್ನು ನೆನೆದು ಕಣ್ಣೀರಿಟ್ಟ ಪಾಂಡ್ಯ ಕಠಿಣ ಹೋರಾಟದ ಗೆಲುವನ್ನು ತನ್ನ ತಂದೆಗೆ ಅರ್ಪಿಸಿದರು.
ಬರೋಡಾ ಆಲ್ ರೌಂಡರ್ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡರಲ್ಲೂ ಕೊಡುಗೆಯೊಂದಿಗೆ ಗೆಲುವಿನಲ್ಲಿ ಅದ್ಭುತ ಪಾತ್ರವನ್ನು ವಹಿಸಿದರು. ಪಾಂಡ್ಯ ಮೂರು ನಿರ್ಣಾಯಕ ವಿಕೆಟ್ಗಳನ್ನು ಕಬಳಿಸಿ ಪಾಕಿಸ್ತಾನದ ಇನ್ನಿಂಗ್ಸ್ಗೆ ಅಡ್ಡಿಪಡಿಸಿದರು. ನಂತರ ಅವರು ವಿರಾಟ್ ಕೊಹ್ಲಿಯೊಂದಿಗೆ 113 ರನ್ಗಳ ಜೊತೆಯಾಟ ಆಡಿದರು. 40 ರನ್ ಗಳಿಸುವುದರೊಂದಿಗೆ ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.
ಪಂದ್ಯದ ಮುಕ್ತಾಯದ ನಂತರ ಪ್ರಸಾರ ತಂಡದೊಂದಿಗೆ ಹಾರ್ದಿಕ್ ಪಾಂಡ್ಯ ಮಾತನಾಡಿ, "ನನ್ನ ತಂದೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ನಾನು ನನ್ನ ತಂದೆಯ ಬಗ್ಗೆ ಅಳಲಿಲ್ಲ. ನಾನು ನನ್ನ ಮಗನನ್ನು ಪ್ರೀತಿಸುತ್ತೇನೆ, ಆದರೆ ನನ್ನ ತಂದೆ ನನಗಾಗಿ ಮಾಡಿದ್ದನ್ನು ನಾನು ಅವನಿಗೆ ಮಾಡಲು ಸಾಧ್ಯವಾಗುತ್ತದೆಯೇ ಎಂದು ನನಗೆ ತಿಳಿದಿಲ್ಲ. ಅವರು ಆರು ಬಾರಿ ನಗರಗಳನ್ನು ಬದಲಾಯಿಸಿದರು. ಈ ಗೆಲುವನ್ನು ಅವರಿಗೆ ಸಮರ್ಪಿಸಲು ಬಯಸುತ್ತೇನೆ" ಎಂದು ಹೇಳಿದರು.

ಹಾರ್ದಿಕ್-ಕೊಹ್ಲಿ ಜೊತೆಯಾಟಕ್ಕೆ ರೋಹಿತ್ ಶರ್ಮಾ ಮೆಚ್ಚುಗೆ
ಚೇಸಿಂಗ್ನಲ್ಲಿ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ 113 ರನ್ಗಳ ಜೊತೆಯಾಟದ ಮಹತ್ವವನ್ನು ನಾಯಕ ರೋಹಿತ್ ಶರ್ಮಾ ಶ್ಲಾಘಿಸಿದರು. ಒತ್ತಡದ ಕ್ಷಣಗಳಲ್ಲಿ ತಮ್ಮ ಹಿಡಿತವನ್ನು ಕಾಪಾಡಿಕೊಳ್ಳಲು ಮತ್ತು ಅಗ್ರ ಕ್ರಮಾಂಕ ಕುಸಿದ ನಂತರ ಆಟವನ್ನು ಕೊನೆಯವರೆಗೆ ತೆಗೆದುಕೊಂಡಿದ್ದಕ್ಕಾಗಿ ಅವರು ಜೋಡಿಯನ್ನು ಅಭಿನಂದಿಸಿದರು.
"ಹಾರ್ದಿಕ್ ಮತ್ತು ಕೊಹ್ಲಿ ನಡುವಿನ ನಿರ್ಣಾಯಕ 100 ರನ್ ಜೊತೆಯಾಟವು ನಮಗೆ ನಿರ್ಣಾಯಕವಾಗಿತ್ತು. ಆ ಇಬ್ಬರು ವ್ಯಕ್ತಿಗಳು (ಹಾರ್ದಿಕ್ ಮತ್ತು ಕೊಹ್ಲಿ) ಸಾಕಷ್ಟು ಅನುಭವಿಗಳಾಗಿದ್ದು, ಬಹಳ ಸಮಯದಿಂದ ಆಡುತ್ತಿದ್ದಾರೆ. ಶಾಂತವಾಗಿರುವುದು ಮತ್ತು ಆಟವನ್ನು ಕೊನೆಯವರೆಗೆ ತೆಗೆದುಕೊಂಡು ಹೋಗುವುದು ನಿರ್ಣಾಯಕ ಎಂದು ನಮಗೆ ತಿಳಿದಿತ್ತು ಮತ್ತು ಅವರು ಅದನ್ನು ಮಾಡಿದ್ದಾರೆ, ಈ ಗೆಲುವಿನಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ" ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 27 ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ತನ್ನ ಎರಡನೇ ಪಂದ್ಯವನ್ನಾಡಲಿದೆ.