ಆರಂಭಿಕ ಆಟಗಾರ : ರೋಹಿತ್ ಶರ್ಮ
ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ರೋಹಿತ್ ಅವರು ನಂತರ ವೈಜಾಗ್ ನಲ್ಲಿ 4 ಹಾಗೂ ಪುಣೆಯಲ್ಲಿ 8ರನ್ ಗಳಿಸಿ, ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ನಾಲ್ಕನೇ ಪಂದ್ಯದಲ್ಲಿ ರೋಹಿತ್ ಅವರು ವೈಯಕ್ತಿಕವಾಗಿ ಹಾಗೂ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿ, 162ರನ್ ಚೆಚ್ಚಿದರು. ಐದನೇ ಪಂದ್ಯದಲ್ಲೂ ವಿಂಡೀಸ್ ಬೌಲರ್ ಗಳನ್ನು ಕಾಡುವ ನಿರೀಕ್ಷೆಯಿದೆ.
ಶಿಖರ್ ಧವನ್
ಏಷ್ಯಾಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಅದೇ ರೀತಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಪುಣೆಯಲ್ಲಿ ಉತ್ತಮ ಆರಂಭ ಪಡೆದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಧವನ್ ಅವರು ಶೀಘ್ರದಲ್ಲಿ ತಮ್ಮ ದೋಷಗಳನ್ನು ಸರಿಪಡಿಸಿಕೊಂಡು ತಂಡಕ್ಕೆ ಉತ್ತಮ ಆರಂಭ ನೀಡಬೇಕಿದೆ ಇಲ್ಲದಿದ್ದರೆ ಆರಂಭಿಕ ಸ್ಥಾನಕ್ಕೆ ಈಗಾಗಲೇ ಪೈಪೋಟಿ ಶುರುವಾಗಿದ್ದು, ಸ್ಥಾನ ಉಳಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ.
ಮಧ್ಯಮ ಕ್ರಮಾಂಕ
ವಿರಾಟ್ ಕೊಹ್ಲಿ, ಅಂಬಟಿ ರಾಯುಡು, ರನ್ ಮಷಿನ್, ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿದ್ದು ಸತತವಾಗಿ ಶತಕ ಬಾರಿಸಿ ಉತ್ತಮ ಲಯದಲ್ಲಿದ್ದಾರೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಉಳಿದ ಬ್ಯಾಟ್ಸ್ ಮನ್ ಗಳು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಮುಖ್ಯವಾಗಿ 4ನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟ್ಸ್ ಮನ್ ಸಿಗುತ್ತಿಲ್ಲ ರಾಯುಡು ಅವರು ವೈಜಾಗ್ ನಲ್ಲಿ 73ರನ್ ಚೆಚ್ಚಿದ್ದರು. ಆದರೆ, ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು. ಆದರೆ, ಮುಂಬೈ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಡಬ್ಬಲ್ ವಿಕೆಟ್ ಕೀಪರ್ಸ್ ಇರಲ್ಲ
ಎಂಎಸ್ ಧೋನಿ
ರಿಷಬ್ ಪಂತ್ ಗೆ ಸ್ಥಾನದ ನೀಡುವ ಗೊಂದಲ ಇದ್ದಂತೆ ಕಾಣುತ್ತಿದೆ. 5ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕಿದ್ದರೂ ಎರಡು ಇನ್ನಿಂಗ್ಸ್ ಗಳಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಬ್ಯಾಟಿಂಗ್ ಗಿಂತ ಕೀಪಿಂಗ್ ಮುಖ್ಯವಾಗಿದ್ದು, ಧೋನಿ ಮಾತ್ರ ಆಡಲಿದ್ದಾರೆ.
ಧೋನಿ ಅವರ ವೃತ್ತಿ ಬದುಕಿನಲ್ಲಿ 2018ರಲ್ಲೇ ಅತ್ಯಂತ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ್ದಾರೆ ಎಂದು ಅಂಕಿ ಅಂಶ ಹೇಳುತ್ತಿದೆ. ಆದರೆ, ಧೋನಿ ಮನಸ್ಸು ಮಾಡಿದರೆ, ಪಂದ್ಯದ ಗತಿ ಬದಲಿಸಬಲ್ಲರು.
ಆಲ್ ರೌಂಡರ್ಸ್
ಕೇದಾರ್ ಜಾಧವ್, ರವೀಂದ್ರ ಜಡೇಜ
ಕೇದಾರ್ ಜಾಧವ್ ಜತೆ ರವೀಂದ್ರ ಜಡೇಜ ಕೂಡಾ ಆಲ್ ರೌಂಡರ್ ರೂಪದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಜೊತೆಯಾಟ ಮುರಿಯುವ ಸ್ಪಿನ್ನರ್ ಎನಿಸಿಕೊಂಡಿರುವ ಜಾಧವ್ ರನ್ ನಿಯಂತ್ರಿಸುವಲ್ಲೂ ಸಹಕಾರಿ. ಬ್ಯಾಟಿಂಗ್ ಸಮರ್ಥಕ್ಕೆ ಹೋಲಿಸಿದರೆ ನಂ.7 ಕ್ರಮಾಂಕ ತೀರಾ ಕೆಳಕ್ರಮಾಂಕ ಎನ್ನಬಹುದು. ಆದರೆ, ತಂಡದ ಬಾಲಂಗೋಚಿಗಳನ್ನು ಕಾಯ್ದುಕೊಂಡು ಆಡಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ಜಡೇಜ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದು, ಚಾಹಲ್ ಬದಲಿಗೆ ಆಡಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಬೌಲರ್ಸ್
ಭುವನೇಶ್ವರ್ ಕುಮಾರ್
ಪ್ರಮುಖ ಬೌಲರ್ ಭುವನೇಶ್ವರ್ ಅವರು ತಮ್ಮ ಎಂದಿನ ಲಯಕ್ಕೆ ಮರಳಬೇಕಿದ್ದು, ಸ್ಲಾಗ್ ಓವರ್ ಗಳಲ್ಲಿ ರನ್ ನಿಯಂತ್ರಣದ ಹೊಣೆ ಹೊರಬೇಕಿದೆ. ನಾಲ್ಕನೇ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದರು.
ಕುಲದೀಪ್ ಯಾದವ್ ರನ್ ಕೊಟ್ಟರೂ ವಿಕೆಟ್ ಕೀಳುವ ಸಾಮರ್ಥ್ಯ ಹೊಂದಿದ್ದಾರೆ. ಅದರಲ್ಲೂ ಸ್ಟಾರ್ ಬ್ಯಾಟ್ಸ್ ಮನ್ ಗಳ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಜಸ್ ಪ್ರೀತ್ ಬೂಮ್ರಾ : ಉತ್ತಮ ಲಯದಲ್ಲಿದ್ದು, ತಂಡಕ್ಕೆ ಆಧಾರವಾಗಿದ್ದಾರೆ. ಜತೆಗೆ ಯುವ ಎಡಗೈ ವೇಗಿ ಖಲೀಲ್ ಅಹ್ಮದ್ ಗೆ ಮತ್ತೊಮ್ಮೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.