For Quick Alerts
ALLOW NOTIFICATIONS  
For Daily Alerts
 

'ಇಂದಿರಾ ನಗರ್ ಕಾ ಗೂಂಡಾ'; ಪಾಕ್‌ನ ಅಮೀರ್ ಸೊಹೈಲ್ ಜೊತೆಗಿನ ಟಾಕ್ ವಾರ್‌ಗೆ ವೆಂಕಿಯ ಒನ್‌ಲೈನ್ ಉತ್ತರ!

1996ರ ಏಕದಿನ ವಿಶ್ವಕಪ್ ಕ್ವಾರ್ಟರ್-ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈ-ವೋಲ್ಟೇಜ್ ಪಂದ್ಯದ ಸಂದರ್ಭದಲ್ಲಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಮತ್ತು ಅಮೀರ್ ಸೊಹೈಲ್ ನಡುವಿನ ಮೈದಾನದ ಜಗಳ ಇತಿಹಾಸದ ಪುಸ್ತಕಗಳಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಯಾವುದೇ ಪಂದ್ಯವು ಸ್ಪರ್ಧಾತ್ಮಕ ವಾತಾವರಣವನ್ನು ಖಾತರಿಪಡಿಸುತ್ತದೆ. ಈ ಇಬ್ಬರು ಕ್ರಿಕೆಟಿಗರು ತಮ್ಮ ಸನ್ನೆ ಹಾಗೂ ಮಾತಿನ ಯುದ್ಧದ ಮೂಲಕ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರು.

ವೆಂಕಟೇಶ್ ಪ್ರಸಾದ್ ಬೌಲಿಂಗ್‌ನಲ್ಲಿ ಆಫ್-ಸೈಡ್‌ನಲ್ಲಿ ಬೌಂಡರಿ ಬಾರಿಸಿದ ಅಮೀರ್ ಸೊಹೈಲ್, ಮುಂದಿನ ಎಸೆತದಲ್ಲಿ ಇದೇ ರೀತಿಯ ಶಾಟ್ ಅನ್ನು ಪುನರಾವರ್ತಿಸುವುದಾಗಿ ಸೂಚಿಸಲು ಮತ್ತೊಮ್ಮೆ ಆ ದಿಕ್ಕಿನ ಕಡೆಗೆ ಬ್ಯಾಟ್ ತೋರಿಸಿದರು.

Indira Nagar Ka Goonda; Venkatesh Prasad One-line Answer to Talk War With Paks Aamir Sohail

ಆದರೆ, ವೆಂಕಟೇಶ್ ಪ್ರಸಾದ್ ಅವರ ಮುಂದಿನ ಎಸೆತವು ಅಮೀರ್ ಸೊಹೈಲ್ ಅವರ ಸ್ಟಂಪ್ ಎಗರಿಸಿದ ಕಾರಣ, ಭಾರತೀಯ ವೇಗಿ ಸಿಟ್ಟಿನಿಂದಲೇ ಮೈದಾನ ಬಿಟ್ಟು ತೊಲಗು ಎಂದು ಸೂಚಿಸಿದರು. ಆ ಕ್ಷಣ ಎಟಿಗೆ ಎದಿರೇಟು ಎಂಬಂತಿತ್ತು.

ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬರು ಐತಿಹಾಸಿಕ ಔಟ್ ಬಗ್ಗೆ ಪ್ರತಿಕ್ರಿಯಿಸಲು ವೆಂಕಟೇಶ್ ಪ್ರಸಾದ್ ಅವರನ್ನು ಕೇಳಿದರು. ಇದಕ್ಕೆ ಭಾರತೀಯ ಮಾಜಿ ವೇಗದ ಬೌಲರ್ ಅತ್ಯಂತ ಹಾಸ್ಯದ ಉತ್ತರದೊಂದಿಗೆ ಬಂದರು.

'ಇಂದಿರಾ ನಗರ್ ಕಾ ಗೂಂಡಾ ಕ್ಷಣ' ಎಂದು ಅವರು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಬರೆದಿದ್ದಾರೆ. ಇದು ಮಾಜಿ ಸಹ ಆಟಗಾರ ರಾಹುಲ್ ದ್ರಾವಿಡ್ ಅವರು ಜಾಹೀರಾತಿನಲ್ಲಿ ಬಳಸಿದ ಪದಗುಚ್ಛದ ಉಲ್ಲೇಖವಾಗಿದೆ.

ಇನ್ನು ಮುಂಬರುವ ವರ್ಷದಲ್ಲಿ ಟೀಮ್ ಇಂಡಿಯಾ ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲಲು ಪ್ರಾರಂಭಿಸುತ್ತದೆ ಎಂದು ವೆಂಕಟೇಶ್ ಪ್ರಸಾದ್ ಆಶಯ ವ್ಯಕ್ತಪಡಿಸಿದರು.

ವೆಂಕಟೇಶ್ ಪ್ರಸಾದ್ ಅವರು ಟ್ವಿಟ್ಟರ್‌ನಲ್ಲಿ 2023ರ ವರ್ಷ ರೋಹಿತ್ ಶರ್ಮಾ ನಾಯಕತ್ವದ ತಂಡಕ್ಕೆ 'ಏನಾಗಿರಬಹುದು' ಎಂದು ಹೇಳಿದರು.

2023ರ ಇಡೀ ಏಕದಿನ ವಿಶ್ವಕಪ್‌ನಲ್ಲಿ 'ಮೆನ್ ಇನ್ ಬ್ಲೂ' ಪ್ರಾಬಲ್ಯ ಸಾಧಿಸಿತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಕೆಟ್ಟ ದಿನವನ್ನು ಹೊಂದಿತ್ತು ಎಂದು ವೆಂಕಿ ಹೇಳಿದರು.

ಅಲ್ಲದೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಕಳಪೆ ಪ್ರದರ್ಶನವನ್ನು ಸಹ ಮಾಜಿ ಕ್ರಿಕೆಟಿಗ ಎತ್ತಿ ತೋರಿಸಿದರು.

"ಟೀಮ್ ಇಂಡಿಯಾಕ್ಕೆ ಇದು ಒಂದು ವರ್ಷ ಏನಾಗಿರಬಹುದು?. ವಿಶ್ವಕಪ್‌ ಪಂದ್ಯಾವಳಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿದ್ದರೂ, ಮುಖ್ಯವಾದ ಫೈನಲ್‌ನಲ್ಲಿ ಅತ್ಯಂತ ಕೆಟ್ಟ ದಿನವನ್ನು ಹೊಂದಿತ್ತು. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಸೋತರು".

"ಈ ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅದ್ಭುತ ಪ್ರದರ್ಶನ ನೀಡಿದರು. ಮುಂಬರುವ ವರ್ಷದಲ್ಲಿ ಭಾರತವು ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲಲು ಪ್ರಾರಂಭಿಸುತ್ತದೆ ಎಂದು ಭಾವಿಸುತ್ತೇವೆ. ಇದು ಈಗ ಒಂದು ದಶಕಕ್ಕೂ ಹೆಚ್ಚು ಕಾಲ ಐಸಿಸಿ ಪ್ರಶಸ್ತಿ ಬರ ಎದುರಿಸುತ್ತಿದೆ".

"ಮುಂಬರುವ ವರ್ಷದಲ್ಲಿ ಮತ್ತು ಯಾವಾಗಲೂ ಟೀಮ್ ಇಂಡಿಯಾಕ್ಕೆ ಶುಭ ಹಾರೈಸುತ್ತೇನೆ," ಎಂದು ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಬರೆದುಕೊಂಡಿದ್ದಾರೆ.

Story first published: Sunday, December 31, 2023, 19:25 [IST]
Other articles published on Dec 31, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+