
ಮನ್ದೀಪ್ ಹಾಗೂ ಎಬಿಡಿ ಜೊತೆಯಾಟ
ಮನ್ದೀಪ್ ಕಣಕ್ಕಿಳಿದಾಗ ಆರ್ ಸಿಬಿ 55/3 ಸ್ಕೋರ್ ಮಾಡಿತ್ತು. ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಎಬಿ ಡಿ ವಿಲೆಯರ್ಸ್ ಜೊತೆಯಲ್ಲಿ 113ರನ್ ಜೊತೆಯಾಟವಾಡಿದ ಮನ್ದೀಪ್ ಆಟ ಮೆಚ್ಚಿದ ಎಬಿಡಿ, ಪಂದ್ಯ ನಂತರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ನಾವು ಆಡುವಾಗ 140 ರನ್ ದಾಟುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅದರೆ, 180 ರನ್ ಹೇಗೆ ಗಳಿಸಿದೆವು ಗೊತ್ತಿಲ್ಲ ಎಂದರು.
ನುಡಿದಂತೆ ನಡೆದ ಎಬಿ ಡಿ ವಿಲೆಯರ್ಸ್
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನಂತರ ನುಡಿದಂತೆ ಎಬಿಡಿ ಅವರು ಪ್ರಶಸ್ತಿಯನ್ನು ಮನ್ದೀಪ್ ಕೈಗೆತ್ತಿದ್ದಾರೆ.

ಮನದೀಪ್ ಆಟದಿಂದ ಸಾಧ್ಯವಾಯಿತು
ನಾನಂತೂ ಕೆಲ ಪಂದ್ಯಗಳಿಂದ ಉತ್ತಮ ಆಟ ಪ್ರದರ್ಶಿಸಿಲ್ಲ. ಇದೆಲ್ಲ ಮನದೀಪ್ ಆಟದಿಂದ ಸಾಧ್ಯವಾಯಿತು. ಆತನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಬೇಕು ಎಂದಿದ್ದರು.
2012ರಲ್ಲೂ ಎಬಿಡಿ ಅಪ್ಪಣ್ಣನಿಗೆ ಪ್ರಶಸ್ತಿ ಕೊಟ್ಟಿದ್ರು
ಈ ಹಿಂದೆ 2012ರಲ್ಲೂ ಎಬಿಡಿ ತಮಗೆ ಸಿಕ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸ್ಪಿನ್ನರ್ ಕೆಪಿ ಅಪ್ಪಣ್ಣ ಅವರಿಗೆ ನೀಡಿ ಗೌರವಿಸಿದ್ದರು. ಈಗ ಮನ್ದೀಪ್ ಗೆ ನೀಡಿದ್ದಾರೆ.
ವಿಜಯ್ ಮಲ್ಯರಿಂದ ಮನ್ದೀಪ್ ಹೊಗಳಿಕೆ
ವಿಜಯ್ ಮಲ್ಯರಿಂದ ಮನ್ದೀಪ್ ಹಾಗೂ ಎಬಿಡಿ ಉತ್ತಮ ನಡೆಗೆ ಹೊಗಳಿಕೆ.
ಎಬಿಡಿ ನಿಜಕ್ಕೂ ಗ್ರೇಟ್
ಎಬಿ ಡಿ ವಿಲೆಯರ್ಸ್ ನಿಜಕ್ಕೂ ಗ್ರೇಟ್. ಇಂಥ ಬುದ್ಧಿ ಎಷ್ಟು ಜನಕ್ಕಿರುತ್ತದೆ.


Click it and Unblock the Notifications