
ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಕ್ರಿಕೆಟಿಗ
ಈ ಗೆಲುವಿನ ಮೊದಲ ಶ್ರೇಯಸ್ಸು ಅಯ್ಯರ್ ಅವರಿಗೇ ಸಲ್ಲಬೇಕು. ದೊಡ್ಡ ಮೊತ್ತವನ್ನು ಬೆನ್ನಟ್ಟುವ ಭರದಲ್ಲಿ ಆರಂಭಿಕರಾದ ಸಂಜು ಸ್ಯಾಮ್ಸನ್ ಹಾಗೂ ಮೂರನೇ ಕ್ರಮಾಂಕದ ರಿಷಬ್ ಪಂತ್ ಬೇಗನೇ ವಿಕೆಟ್ ಚೆಲ್ಲಿದರೂ, 4ನೇ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದ ಅವರು, ಮತ್ತೊಬ್ಬ ಆರಂಭಿಕ ಕರುಣ್ ನಾಯರ್ ಜತೆಗೆ 3ನೇ ವಿಕೆಟ್ ಗೆ 57 ರನ್ ಪೇರಿಸಿದರು. ಇನಿಂಗ್ಸ್ ಗೆ ಕೊನೆಯ ಓವರ್ ನವರೆಗೂ ಕ್ರೀಸ್ ನಲ್ಲಿದ್ದು ಆರ್ಭಟಿಸಿದ ಅವರು ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು.

ಉತ್ತಮ ಪ್ರಯತ್ನದಿಂದ ತಂಡಕ್ಕೆ ಗೆಲುವು
8ನೇ ಓವರ್ ನಲ್ಲಿ ಕರುಣ್ ಔಟಾದ ನಂತರ, ಕ್ರೀಸ್ ನಲ್ಲಿದ್ದ ಅಯ್ಯರ್ ಗೆ ತಂಡದ ಮಿಕ್ಕವರಿಂದ ಸರಿಯಾದ ಬೆಂಬಲ ಸಿಗಲಿಲ್ಲ. ಕ್ರೀಸ್ ನ ಮತ್ತೊಂದು ತುದಿಯಲ್ಲಿ ಒಂದರ ಹಿಂದೊಂದರಂತೆ ವಿಕೆಟ್ ಉರುಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದ ಅವರು, ತಂಡವನ್ನು ಗೆಲುವಿನ ಗೆರೆಯತ್ತ ತಂದು ನಿಲ್ಲಿಸುವಲ್ಲಿ ಯಶಸ್ವಿಯಾದರು.

ತಂಡವನ್ನು ಗೆಲುವಿನಂಚಿಗೆ ತಂದರು
ವೈಯಕ್ತಿಕ ಶತಕದಂಚಿನಲ್ಲಿದ್ದಾಗ ಔಟಾದರೂ (96 ರನ್, 57 ಎಸೆತ, 15 ಬೌಂಡರಿ, 2 ಸಿಕ್ಸರ್) ತಂಡಕ್ಕೆ ವೀರೋಚಿತ ಜಯ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಯ್ಯರ್ ಬ್ಯಾಟಿಂಗ್ ಗೆ ಸಾರ್ಥಕತೆ ತಂದ ಮಿಶ್ರಾ
ಶ್ರೇಯಸ್ ಔಟಾದಾಗ ತಂಡದ ಮೊತ್ತ 189 ರನ್. ಆಗ ಕ್ರೀಸ್ ಗೆ ಆಗಮಿಸಿದ ಅಮಿತ್ ಮಿಶ್ರಾ ಅವರು ತಂಡವನ್ನು ಗೆಲುವಿನ ಗೆರೆ ದಾಟಿಸಿದರು. ಶ್ರೇಯಸ್ ಔಟಾದ ನಂತರ ಡೆಲ್ಲಿ ಪಾಲಿಗೆ, ಪಂದ್ಯ ಗೆಲ್ಲಲು 4 ಎಸೆತಗಳಲ್ಲಿ ಆರು ರನ್ ಗಳ ಅಗತ್ಯವಿತ್ತು. ಈ ಓವರ್ ಮಾಡಿದ್ದು ಬಾಸಿಲ್ ಥಂಪಿ. ಆದರೆ, ಅದೇ ಓವರ್ ನ 3 ಮತ್ತು 4ನೇ ಎಸೆತಗಳಲ್ಲಿ ಎರಡು ಭರ್ಜರಿ ಬೌಂಡರಿ ಸಿಡಿಸಿದ ಅಮಿತ್ ಮಿಶ್ರಾ ತಂಡಕ್ಕೆ ರೋಚಕ ಗೆಲುವನ್ನು ತಂದುಕೊಟ್ಟರು. ಹಾಗೊಂದು ವೇಳೆ, ಮಿಶ್ರಾ ಈ ಎರಡು ಬೌಂಡರಿ ಬಾರಿಸಿದೇ ಇದ್ದಿದ್ದರೆ, ಅಯ್ಯರ್ ಅವರ ಬ್ಯಾಟಿಂಗ್ ಸಾರ್ಥಕವಾಗುತ್ತಿರಲಿಲ್ಲ.

ಶ್ರೇಯಸ್ ಬ್ಯಾಟಿಂಗ್ ಮುಂದೆ ಬೌಲಿಂಗ್ ಶಕ್ತಿ ನಿಲ್ಲಲಿಲ್ಲ
ಅತ್ತ, ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗುಜರಾತ್ ತಂಡವು ಬೌಲಿಂಗ್ ನಲ್ಲಿ ಅಂಥ ಕಟ್ಟುನಿಟ್ಟಾದ ಪ್ರದರ್ಶನ ನೀಡಲಿಲ್ಲ. ಅದಕ್ಕಿಂತ ಮಿಗಿಲಾಗಿ, ಅಯ್ಯರ್ ಮುಂದೆ ಗುಜರಾತ್ ತಂಡದ ಬೌಲಿಂಗ್ ಆಟ ನಡೆಯಲಿಲ್ಲ. ಅಂತಿಮವಾಗಿ, ಡೆಲ್ಲಿ ತಂಡ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.


Click it and Unblock the Notifications

