ಮೊಹಾಲಿ, ಮೇ 1: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ವರುಣ್ ಚಕ್ರವರ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹೊರಬಿದ್ದಿದ್ದಾರೆ. ಸ್ಪಿನ್ ಬೌಲರ್ ಆಗಿದ್ದ ವರುಣ್ ಗಾಯದಿಂದ ಚೇತರಿಸಿಕೊಳ್ಳದಿರುವುದರಿಂದ ಇನ್ನುಳಿದ ಪಂದ್ಯಗಳಿಂದ ಹೊರಗಿರಲಿದ್ದಾರೆ.
ಗಂಭೀರ್ ಮಾನಸಿಕವಾಗಿ ಸರಿಯಿಲ್ಲ: ಮೆಂಟಲ್ ಕಂಡೀಷನಿಂಗ್ ಕೋಚ್
ಬೆರಳಿನ ಗಾಯಕ್ಕೀಡಾಗಿದ್ದ ತಮುಳುನಾಡು ಆಟಗಾರ ವರುಣ್, ಈ ಐಪಿಎಲ್ ಸೀಸನ್ನ ಹೆಚ್ಚಿನ ಪಂದ್ಯಗಳಲ್ಲಿ ಆಡಿರಲಿಲ್ಲ. ಮಾರ್ಚ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಒಂದೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಲೆಗ್ ಸ್ಪಿನ್ನರ್ ಚಕ್ರವರ್ತಿ, 35 ರನ್ಗೆ 1 ವಿಕೆಟ್ ಪಡೆದಿದ್ದರು.
From Corporate sector 📊 to professional cricket 🏏
— Kings XI Punjab (@lionsdenkxip) March 20, 2019
Renowned for his 'mystery spin', Varun Chakravarthy sheds light on his interesting journey 📽#SaddaPunjab pic.twitter.com/vQZobyB05g
'ಐಪಿಎಲ್ ಅಂತಿಮ ಪಂದ್ಯಗಳಲ್ಲಾದರೂ ವರುಣ್ ಚೇತರಿಸಿಕೊಳ್ಳಲಿದ್ದಾರೆ ಎನ್ನುವ ಆಶಯ ನಮ್ಮದು. ಆದರೆ ಅವರ ಗಾಯ ಬೇಗ ಗುಣವಾಗುವ ಲಕ್ಷಣ ಕಾಣುತ್ತಿಲ್ಲ' ಎಂದು ಕೆXIಪಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ಕಳೆದ ತಿಂಗಳು ಪಂಜಾಬ್ ತಂಡದ ಚೆನ್ನೈ ಭೇಟಿ ವೇಳೆ ಗಾಯ ಮಾಡಿಕೊಂಡ ವರುಣ್ ಅನಂತರ ಆಡುವ ತಂಡದಿಂದ ಹೊರಗುಳಿದಿದ್ದರು.