
ಬಾಯಲ್ಲಿ ನೀರು ಬಂದ ಕ್ಷಣ
'20ನೇ ಓವರ್ ಬೌಲಿಂಗ್ ಮಾಡಲು ಆಫ್ ಸ್ಪಿನ್ನರ್ ಬರುತ್ತಿದ್ದಾರೆ ಎಂದರೆ ನನಗೆ ಅದೊಂದು ರೀತಿ ಬಾಯಲ್ಲಿ ನೀರೂರಿಸುವಂತಹ ಕ್ಷಣ. ನನ್ನ ಹಾಗೂ ಪೊಲಾರ್ಡ್ ನಡುವೆ ಹೇಗೆಂದರೆ, ಯಾರು ಈ ಅವಕಾಶ ತಪ್ಪಿಸಿಕೊಳ್ಳುತ್ತಾರೋ ಅವರು ನಾನ್ ಸ್ಟ್ರೈಕರ್ ತುದಿಯಲ್ಲಿ ನಿಂತು ನೋಡುತ್ತಾ ಇರಬೇಕು. ನಾನು ಎರಡು ಎಸೆತಗಳನ್ನು ಮಿಸ್ ಮಾಡಿಕೊಂಡೆ. ಆದರೆ ಪೊಲಾರ್ಡ್ ಹೆಚ್ಚಿನ ಅವಕಾಶ ಗಿಟ್ಟಿಸಿದರು' ಎಂದು ಹಾರ್ದಿಕ್ ಹೇಳಿದ್ದಾರೆ.

ಹೀಗೆ ಹಲವು ಬಾರಿ ಆಡಿದ್ದೇವೆ
ಕೊನೆಯ ಆರು ಓವರ್ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ 104 ರನ್ಗಳನ್ನು ಬಾರಿಸಿತ್ತು. ಪೊಲಾರ್ಡ್ 20 ಎಸೆತಗಳಲ್ಲಿ ಅಜೇಯ 47 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ ಕೇವಲ 11 ಎಸೆತಗಳಲ್ಲಿ 30 ರನ್ ಗಳಿಸಿದ್ದರು. ಈ ರೀತಿ ನಾನು ಮತ್ತು ಪೊಲಾರ್ಡ್ ಹಲವು ಬಾರಿ ಅಮೋಘವಾಗಿ ಆಡಿದ್ದೇವೆ. ನಾನು ಮೈದಾನ ಪ್ರವೇಶಿಸುವಾಗ ಇದ್ದ ಸ್ಪಷ್ಟ ಸಂದೇಶ ಏನೆಂದರೆ ಬೌಲರ್ಗಳ ಮೇಲೆ ಸವಾರಿ ಮಾಡಬೇಕೆಂದು ಎಂದಿದ್ದಾರೆ ಪಾಂಡ್ಯ.
ಐಪಿಎಲ್ 2020: ಗಮನ ಸೆಳೆದ ಭಾರತದ 5 ಯುವ ಪ್ರತಿಭೆಗಳು

ನಮಗೆ ಹೆಮ್ಮೆ ಇದೆ
'ನಮಗೆ ಇದ್ದದ್ದು ಕೊನೆಯಲ್ಲಿ ದೊಡ್ಡ ಮೊತ್ತ ಸೇರಿಸಬೇಕು ಎಂದು. ಕಿಂಗ್ಸ್ ತಂಡಕ್ಕೆ ಚೇಸಿಂಗ್ಗೆ ಕಷ್ಟವಾಗುವಷ್ಟು ರನ್ ಪೇರಿಸಬೇಕಿತ್ತು. 192ರಷ್ಟು ರನ್ ಆಗುತ್ತದೆ ಎಂದು ಊಹಿಸಿರಲಿಲ್ಲ. ಆದರೆ ಅದೃಷ್ಟ ನಮ್ಮ ಜತೆಗಿತ್ತು. ಆ ದೊಡ್ಡ ಮನುಷ್ಯ (ಕೀರನ್ ಪೊಲಾರ್ಡ್) ಮತ್ತೆ ಅದನ್ನು ಸಾಧಿಸಿದರು. ನಾವು ಬ್ಯಾಟಿಂಗ್ ಮಾಡಿದ ರೀತಿ ಬಗ್ಗೆ ನಮಗೆ ಹೆಮ್ಮೆ ಇದೆ' ಎಂದು ತಿಳಿಸಿದ್ದಾರೆ.

ಕೊನೆಗೂ ವಿಕೆಟ್ ಪಡೆದ ಗೌತಮ್
ಕೃಷ್ಣಪ್ಪ ಗೌತಮ್ ಮೊದಲ 3 ಓವರ್ಗಳಲ್ಲಿ 20 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಆದರೆ ಮುಂಬೈ ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ 25 ರನ್ ನೀಡಿದರು. ಅದರಲ್ಲಿ ನಾಲ್ಕು ಭರ್ಜರಿ ಸಿಕ್ಸರ್ಗಳಿದ್ದವು. ಹಾರ್ದಿಕ್ ಪಾಂಡ್ಯ ಒಂದು ಹಾಗೂ ಕೀರನ್ ಪೊಲಾರ್ಡ್ ಕೊನೆಯ ಮೂರೂ ಎಸೆತಗಳನ್ನು ಸಿಕ್ಸರ್ ಬಾರಿಸಿದ್ದರು. ಈ ಪಂದ್ಯದಲ್ಲಿ ಗೌತಮ್, ಇಶಾನ್ ಕಿಶನ್ ವಿಕೆಟ್ ಪಡೆದಿದ್ದರು. ಕಳೆದ ಎಂಟು ಐಪಿಎಲ್ ಪಂದ್ಯಗಳಲ್ಲಿ ಇದು ಅವರ ಮೊದಲ ವಿಕೆಟ್.


Click it and Unblock the Notifications