
ಹವಾಮಾನದಲ್ಲಿ ಬದಲಾವಣೆಯೇ ಕಾರಣ
ಇದಕ್ಕೆ ಕಾರಣವನ್ನು ವಿವರಿಸಿದ್ದಾರೆ ಸಚಿನ್ ತೆಂಡೂಲ್ಕರ್. ಯುಎಇನ ಹವಾಮಾನದಲ್ಲಿ ಬದಲಾವಣೆಯಾಗುತ್ತಿರುವುದು ಇದಕ್ಕೆ ಕಾರಣ ಎಂದಿದ್ದಾರೆ. ಟೂರ್ನಮೆಂಟ್ ಆರಂಭವಾದ ಸಂದರ್ಭದಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಪಿಚ್ನ ಉಷ್ಣಾಂಶ ಕಡೆಯಾಗುತ್ತಿತ್ತು.

ಏಳೆಂಟು ದಿನಗಳಿಂದ ಬದಲಾವಣೆ
"ನೀವು ಗಮನಿಸಿರಬಹುದು, ಮೊದಲಾರ್ಧದಲ್ಲಿ ಚೇಸ್ ಮಾಡುವ ತಂಡಗಳು ವಿಶೇಷವಾಗಿ ದುಬೈ ಹಾಗೂ ಅಬುಧಾಬಿಯಲ್ಲಿ ರನ್ ಬೆನ್ನಟ್ಟುವಾಗ ವಿಫಲವಾಗುತ್ತಿತ್ತು. ಆದರೆ ಕಳೆದ ಏಳೆಂಟು ದಿನಗಳಿಂದ ನಿರಂತರವಾಗಿ ತಂಡಗಳು ರನ್ ಬೆನ್ನಟ್ಟುವುದನ್ನು ಬಯಸುತ್ತಿದೆ" ಎಂದು ತೆಂಡೂಲ್ಕರ್ ವಿವರಿಸಿದ್ದಾರೆ.

ಸೂರ್ಯಾಸ್ತದಲ್ಲಿ ಬದಲಾವಣೆ
ಈಗ ಸೂರ್ಯಾಸ್ತದಲ್ಲಿ ಬಲಾವಣೆಯಾಗಿದ್ದು ಸೂರ್ಯ ಬೇಗನೆ ಅಸ್ತಮಿಸುತ್ತಿದ್ದಾನೆ. ಹೀಗಾಗಿ ಟೂರ್ನಿಯಲ್ಲಿ ಮೊದಲಾರ್ಧದಲ್ಲಿ ದೊರೆಯದ ಸಹಾಯ ಬೌಲರ್ಗಳಿಗೆ ಈಗ ದೊರೆಯುತ್ತಿದೆ. ಮೊದಲು ಚೆಂಡನ್ನು ಬಾರಿಸಲು ಸುಲಭವಾಗಿ ಸಾಧ್ಯವಾಗುತ್ತಿತ್ತು. ತಾಪಮಾನ ತಂಪಾಗಿದ್ದು ಉತ್ತಮವಾಗಿರುವುದರಿಂದ ಪಿಚ್ ಮೇಲ್ಮೈ ಚಲನೆಯಿಂದ ಈಗ ಅದು ಸಾಧ್ಯವಾಗುತ್ತಿಲ್ಲ" ಎಂದು ಸಚಿನ್ ತೆಂಡೂಲ್ಕರ್ ವಿಡಿಯೋದಲ್ಲಿ ತಿಳಿಸಿದ್ದಾರೆ.

ಪ್ಲೇಆಫ್ಗೆ ಚಾಲನೆ
ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇಆಫ್ಗೆ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಕ್ವಾಲಿಫೈಯರ್ನಲ್ಲಿ ಮುಂಬೈ ಹಾಗೂ ಡೆಲ್ಲಿ ಸೆಣೆಸಾಟ ನಡೆಸಲಿದ್ದು ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯಲಿದೆ.


Click it and Unblock the Notifications
