ಮೊದಲ ಬಾರಿಗೆ ಪ್ರವೇಶ ತಂಡಕ್ಕೆ ನಂಬಲಾಗದ ಸಾಧನೆ
ಗುಜರಾತ್ ಟೈಟನ್ಸ್ 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಮಂಗಳವಾರ ಕ್ವಾಲಿಫೈಯರ್ 1 ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ. ತಂಡವು 14 ಲೀಗ್ ಪಂದ್ಯಗಳಲ್ಲಿ 10 ಅನ್ನು ಗೆದ್ದುಕೊಂಡಿದ್ದು, ಇದು ಮೆಗಾ ಹರಾಜಿನ ನಂತರ ಮೊದಲ ಬಾರಿಗೆ ಪ್ರವೇಶ ತಂಡಕ್ಕೆ ನಂಬಲಾಗದ ಸಾಧನೆಯಾಗಿದೆ.
ಹಾರ್ದಿಕ್ ಪಾಂಡ್ಯ ಅವರು 'ಗಟ್ಟಿ ವ್ಯಕ್ತಿತ್ವ' ಹೊಂದಿದ್ದಾರೆ ಮತ್ತು ಆಟಗಾರರ ಮೇಲೆ ತಮ್ಮ ಇಚ್ಛೆಯನ್ನು ಎಂದಿಗೂ ಹೇರುವುದಿಲ್ಲ ಎಂದು ಸಾಯಿಕಿಶೋರ್ ಹೇಳಿದರು.
ಹಾರ್ದಿಕ್ ಅವರಲ್ಲಿ ತುಂಬಾ ಗಟ್ಟಿ ವ್ಯಕ್ತಿತ್ವ ಇದೆ
"ಹಾರ್ದಿಕ್ ಪಾಂಡ್ಯ ನನಗೆ ತುಂಬಾ ಸರಳವಾಗಿರುವಂತೆ ಕಾಣುತ್ತಾರೆ. ಕೊನೆಯ ಆಟದಲ್ಲಿ ಅವರು ನನ್ನ ಬಳಿಗೆ ಬಂದು, ಎಡಗೈ ಬ್ಯಾಟಿಂಗ್ ಮಾಡುತ್ತಿದ್ದಾನೆ, ನಾನು ನಿಮಗೆ ಏನಾದರೂ ಹೇಳಲು ಬಯಸುತ್ತೀಯಾ ಅಥವಾ ನಿನಗೆ ತಿಳಿದಿದೆಯೇ?"ಎಂದರು. ಅದಕ್ಕೆ ನಾನು, "ನನಗೆ ಗೊತ್ತು, ನಾನು ನೋಡಿಕೊಳ್ಳುತ್ತೇನೆ," ಎಂದು ಹೇಳಿದೆ.
ಹಾರ್ದಿಕ್ ಅವರಲ್ಲಿ ತುಂಬಾ ಗಟ್ಟಿ ವ್ಯಕ್ತಿತ್ವವನ್ನು ನಾನು ಕಂಡುಕೊಂಡಿದ್ದೇನೆ, ಅವರು ತನ್ನನ್ನು ತುಂಬಾ ಆತ್ಮವಿಶ್ವಾಸದಿಂದ ಸಾಗಿಸುತ್ತಾನೆ ಮತ್ತು ತನ್ನ ಆಟಗಾರರ ಮೇಲೆಯೂ ವಿಶ್ವಾಸ ಹೊಂದಿದ್ದಾನೆ. ತನ್ನ ನಿರ್ಧಾರವನ್ನು ಎಲ್ಲಾ ಆಟಗಾರರ ಮೇಲೆ ಹೇರಲು ಪ್ರಯತ್ನಿಸುವುದಿಲ್ಲ. ಅವರಿಗೆ ಅವರ ಜಾಗ ಮತ್ತು ಅವರ ಸ್ವಾತಂತ್ರ್ಯವನ್ನು ನೀಡಿ ಮತ್ತು "ನೀವು ವ್ಯಕ್ತಪಡಿಸಿ, ಏನಾದರೂ ತಪ್ಪಾದಲ್ಲಿ ನಾನು ಅಲ್ಲಿರುತ್ತೇನೆ' ಎನ್ನುತ್ತಾರೆ ಎಂದು ಸಾಯಿಕಿಶೋರ್ gujarattitansipl.com ನಲ್ಲಿ ಹೇಳಿದ್ದಾರೆ.
ಸೀಮಿತ ಅವಕಾಶದಲ್ಲೇ ಪ್ರಭಾವಿತರಾದ ಸಾಯಿಕಿಶೋರ್
25 ವರ್ಷದ ಸಾಯಿಕಿಶೋರ್, ಈ ಋತುವಿನಲ್ಲಿ ಸಿಕ್ಕಿರುವ ಸೀಮಿತ ಅವಕಾಶದಲ್ಲೇ ಪ್ರಭಾವಿತರಾಗಿದ್ದಾರೆ. ಮುಖ್ಯ ಕೋಚ್ ಆಶಿಶ್ ನೆಹ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರು ಬಲವಾದ ಬಾಂಧವ್ಯವನ್ನು ಬೆಸೆಯುತ್ತಾರೆ, ಇದರಿಂದಾಗಿ ತಂಡದ ಪ್ರತಿಯೊಬ್ಬರೂ 'ಸುರಕ್ಷಿತ' ಎಂದು ಭಾವಿಸುತ್ತಾರೆ.
"ಅಶು ಪಾ ಮತ್ತು ಹಾರ್ದಿಕ್ ಅವರೊಂದಿಗೆ ಇಲ್ಲಿ ಇರುವುದು ಅದ್ಭುತವಾಗಿದೆ. ಈ ತಂಡದಲ್ಲಿ ಎಲ್ಲರೂ ಸುರಕ್ಷಿತವಾಗಿರುವಂತೆ ಆಶು ಪಾ ಅವರು ನೋಡಿಕೊಂಡಿದ್ದಾರೆ. ನಾನು ಋತುವಿನ 12ನೇ ಪಂದ್ಯವನ್ನು ಆಡುತ್ತಿದ್ದಾಗಲೂ, ನಾನು ಇನ್ನೂ ಏನಾದರೂ ಕೊಡುಗೆ ನೀಡಬೇಕೆಂದು ನನಗೆ ಅನಿಸಿತು. ತಂಡದಿಂದ ನಾನು ಹೊರಗುಳಿದಿದ್ದೇನೆ ಅಂತ ಅನಿಸಲಿಲ್ಲ. ನಾವೆಲ್ಲರೂ ತುಂಬಾ ಸುರಕ್ಷಿತವೆಂದು ಭಾವಿಸಿದ್ದೇವೆ ಮತ್ತು ಪರಿಸರವನ್ನು ಆ ರೀತಿ ಮಾಡಿದ ಇಬ್ಬರಿಗೆ ಸಾಕಷ್ಟು ಕ್ರೆಡಿಟ್ ನೀಡಬೇಕಾಗಿದೆ," ಎಂದು ತಿಳಿಸಿದರು.
ತನ್ನ ಇಚ್ಛೆಯನ್ನು ಆಟಗಾರರ ಮೇಲೆ ಹೇರಬಾರದು
ನಾಯಕನು ತನ್ನ ಇಚ್ಛೆಯನ್ನು ಆಟಗಾರರ ಮೇಲೆ ಹೇರಿದರೆ, ಸ್ವಾಭಾವಿಕ ಆಟ ಮೂಡಿಬರುವುದಿಲ್ಲ. ಆದರೆ ಗುಜರಾತ್ ಟೈಟನ್ಸ್ನ ಸೆಟಪ್ನಲ್ಲಿ, ನಾಯಕ ಯಾವಾಗಲೂ ತನ್ನ ಸಹ ಆಟಗಾರರನ್ನು ಬೆಂಬಲಿಸುವುದರಿಂದ ಆಟವಾಡುವುದು ಯಾವಾಗಲೂ ಖುಷಿಯಾಗುತ್ತದೆ ಎಂದು ಸಾಯಿ ಕಿಶೋರ್ ಹೇಳಿದರು.
"ಯಾವಾಗಲೂ ನಿರ್ಧಾರ ಹೇರುವ ಬದಲು ಆಟಗಾರನಿಗೆ ಜವಾಬ್ದಾರಿಯನ್ನು ನೀಡುವ ನಾಯಕರನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ. ಅಂತಹ ನಾಯಕರಿಗೆ ಕ್ರೆಡಿಟ್ ಯಾವಾಗಲೂ ಸಲ್ಲಿಸುತ್ತೇನೆ ಎಂದರು.
ಗುಜರಾತ್ ಟೈಟನ್ಸ್ ಪ್ರತಿ ಪಂದ್ಯಕ್ಕೂ ಮುನ್ನ ನಿಖರವಾದ ಬೌಲಿಂಗ್ ಯೋಜನೆಯನ್ನು ಹೊಂದಿತ್ತು ಎಂಬ ವರದಿಗಳಿಗೆ ವಿರುದ್ಧವಾಗಿ, ಅವರವರ ಪಾತ್ರವನ್ನು ಎಲ್ಲರಿಗೂ ಚೆನ್ನಾಗಿ ತಿಳಿದಿರುವ ಕಾರಣ ಅಂತಹ ವಿಸ್ತೃತ ಸಭೆ ಇರಲಿಲ್ಲ ಎಂದು ಕಿಶೋರ್ ಹೇಳಿದರು.