For Quick Alerts
ALLOW NOTIFICATIONS  
For Daily Alerts
 

IPL 2024: RCB ವಿರುದ್ಧ CSK ಸೋಲುತ್ತಿದ್ದಂತೆ ಸ್ಟುಡಿಯೋದಲ್ಲಿ ಕಣ್ಣೀರಿಟ್ಟ ಅಂಬಟಿ ರಾಯುಡು; ವಿಡಿಯೋ

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ರೋಚಕ ಪಂದ್ಯದ ಬಳಿಕ ಸಿಎಸ್‌ಕೆ ಮಾಜಿ ಬ್ಯಾಟರ್ ಅಂಬಟಿ ರಾಯುಡು ಕಣ್ಣೀರು ಹಾಕಿದರು.

ಪ್ಲೇಆಫ್ ನಿರ್ಣಾಯಕ ಪಂದ್ಯದಲ್ಲಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾಮೆಂಟರಿ ಮಾಡುತ್ತಿದ್ದ ಅಂಬಟಿ ರಾಯುಡು, ಮೇ 18ರ ಶನಿವಾರದಂದು ಎಂ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ವಿರುದ್ಧ ಸೋತು ಸಿಎಸ್‌ಕೆ ತಂಡ ಹೊರಬಿದ್ದಿರುವುದನ್ನು ನಂಬಲಾಗದೆ ಭಾವುಕರಾದರು.

IPL 2024 Ambati Rayudu in Tears in Studio After CSK s Lost Against RCB Video Goes Viral

ಪಂದ್ಯದುದ್ದಕ್ಕೂ ಸಿಎಸ್‌ಕೆ ತಂಡವನ್ನು ಬೆಂಬಲಿಸುತ್ತಿದ್ದ ಅಂಬಟಿ ರಾಯುಡು, ಆವೃತ್ತಿಯ ದ್ವಿತೀಯಾರ್ಧದಲ್ಲಿ ಅದ್ಭುತ ಪುನರಾಗಮನ ಮಾಡಿದ ಉತ್ಸಾಹಭರಿತ ಆರ್‌ಸಿಬಿ ಆಟಗಾರರು ಸಿಎಸ್‌ಕೆ ವಿರುದ್ಧ ಗೆಲ್ಲುತ್ತಿದ್ದಂತೆಯೇ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

ಈ ವೇಳೆ ಕೊಂಚ ಕಸಿವಿಸಿಗೊಂಡ ಅಂಬಟಿ ರಾಯುಡು ಸಿಎಸ್‌ಕೆ ಸೋಲಿನಿಂದ ಅತ್ತರು. ಈ ಕ್ಷಣವನ್ನು ಕಾಮೆಂಟರಿ ಬಾಕ್ಸ್‌ನಲ್ಲಿ ಕ್ಯಾಮೆರಾಗಳು ಸೆರೆಹಿಡಿದವು. ಅಲ್ಲಿ ಸಿಎಸ್‌ಕೆ ಮಾಜಿ ಆಟಗಾರ ಅಂಬಟಿ ರಾಯುಡು ಪಂದ್ಯದ ನಂತರ ಕಣ್ಣೀರು ಸುರಿಸುವುದನ್ನು ಕಾಣಬಹುದು.

IPL 2024 Ambati Rayudu in Tears in Studio After CSK s Lost Against RCB Video Goes Viral

ಪಂದ್ಯದ ಆರಂಭಕ್ಕೂ ಮುನ್ನವೇ ಅಂಬಟಿ ರಾಯುಡು ಆರ್‌ಸಿಬಿ ತಂಡವನ್ನು ನಿರ್ಲಕ್ಷಿಸಿದ್ದಕ್ಕಾಗಿ, ಭಾವೋದ್ರಿಕ್ತ ಆರ್‌ಸಿಬಿ ಅಭಿಮಾನಿಗಳು ಟೀಕಿಸಲು ಪ್ರಾರಂಭಿಸಿದ ನಂತರ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.

ಭಾನುವಾರದ ಪಂದ್ಯದಲ್ಲಿ ಕಾಮೆಂಟರಿ ಮಾಡುವಾಗ ಅಂಬಟಿ ರಾಯುಡು ವಿವಾದ ಅಲ್ಲಿಗೆ ನಿಲ್ಲಲಿಲ್ಲ. ಐಪಿಎಲ್‌ನ ಅಂತಿಮ ಪಂದ್ಯದ ದಿನದಂದು ಸಿಎಸ್‌ಕೆ ವಿರುದ್ಧ ಗೆಲುವಿನ ನಂತರ ಆರ್‌ಸಿಬಿ ತಂಡವನ್ನು ಹೀಯಾಳಿಸಿದರು.

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವರ್ಚುವಲ್ ನಾಕೌಟ್ ಆಡುವ ಮೂಲಕ ಆರ್‌ಸಿಬಿ ಕೇವಲ ಸಿಎಸ್‌ಕೆ ತಂಡವನ್ನು ಸೋಲಿಸಲಿಲ್ಲ. ಆದರೆ ಪಂದ್ಯಾವಳಿಯ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಹೆಚ್ಚು ರನ್‌ಗಳಿಂದ ಸೋಲಿಸಿತು.

ಪಂದ್ಯದ ಅಂತಿಮ ಎಸೆತವನ್ನು ಯಶ್ ದಯಾಳ್ ಬೌಲಿಂಗ್ ಮಾಡಿದ ನಂತರ, ಆರ್‌ಸಿಬಿ ಆಟಗಾರರು ನಾಳೆ ಇಲ್ಲ ಎಂಬಂತೆ ಜಿಗಿದು ಸಂಭ್ರಮಿಸಿದರು ಎಂದು ಅಂಬಟಿ ರಾಯುಡು ಮತ್ತೊಂದು ವಿವಾದಾತ್ಮಕ ಹೇಲಿಕೆ ನೀಡಿದರು.

ಆರ್‌ಸಿಬಿ vs ಸಿಎಸ್‌ಕೆ ವಿವಾದ

ಐಪಿಎಲ್ 2024ರ ಆವೃತ್ತಿಯಲ್ಲಿ ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಒಂದು ಅವಿಸ್ಮರಣೀಯ ಮುಖಾಮುಖಿಯಾಗಿದೆ. ಅಂತಿಮ ಓವರ್‌ನಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಿಎಸ್‌ಕೆ ತಂಡಕ್ಕೆ ಕೇವಲ 17 ರನ್ ಬೇಕಿತ್ತು. ಅದು ಪಂದ್ಯವನ್ನು ಸೋಲುವುದು ಖಚಿತವಾಗಿದ್ದ 6 ಎಸೆತಗಳಲ್ಲಿ 35 ರನ್ ಬೇಕಾಗಿದ್ದವು.

ಆದರೆ, ಅಂತಿಮ 6 ಎಸೆತಗಳಲ್ಲಿ ಎಂಎಸ್ ಧೋನಿ, ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಮೂವರು ಯಶ್ ದಯಾಲ್ ಅವರ ಬೌಲಿಂಗ್‌ನಲ್ಲಿ ಕೇವಲ 7 ರನ್ ಮಾತ್ರ ಗಳಿಸಿದರು. ಈ ಮೂಲಕ 27 ರನ್‌ಗಳ ಹೀನಾಯ ಸೋಲು ಅನುಭವಿಸಿತು.

ಪಂದ್ಯದ ನಂತರ, ಆರ್‌ಸಿಬಿ ಆಟಗಾರರು ಬಂದು ಕೈಕುಲುಕುತ್ತಾರೆ ಎಂದು ಎಂಎಸ್ ಧೋನಿ ತಮ್ಮ ಸಿಎಸ್‌ಕೆ ತಂಡದೊಂದಿಗೆ ಕಾಯುತ್ತಿದ್ದರು. ಆದರೆ ಆರ್‌ಸಿಬಿ ಆಟಗಾರರು ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದನ್ನು ನೋಡಿ ನಿರ್ಗಮಿಸಿದರು.

ಈ ಘಟನೆಯ ಬಗ್ಗೆ ಅಭಿಮಾನಿಗಳು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಕೆಲವರು ಆರ್‌ಸಿಬಿ ಆಟಗಾರರು ಭಾರತದ ಮಾಜಿ ನಾಯಕನಿಗೆ ಹೆಚ್ಚಿನ ಗೌರವವನ್ನು ತೋರಿಸಲಿಲ್ಲ ಎಂದು ಟೀಕಿಸಿದರೆ, ಇನ್ನು ಕೆಲವರು ಎಂಎಸ್ ಧೋನಿ ಅರ್ಧಕ್ಕೆ ನಿರ್ಗಮಿಸಿರುವುದು ಅಹಂಕಾರ ಎಂದು ಹೇಳುತ್ತಿದ್ದಾರೆ.

ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ ಇದೀಗ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ಮೇ 22ರಂದು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

Story first published: Monday, May 20, 2024, 11:33 [IST]
Other articles published on May 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+