ಶನಿವಾರ, ಮೇ 18ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್ಗಳಿಂದ ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟಾಪ್ 4 ಸ್ಥಾನ ಪಡೆದು ಪ್ಲೇಆಫ್ಗೆ ಅರ್ಹತೆ ಪಡೆಯಿತು.
ಪ್ರಸಕ್ತ ಆವೃತ್ತಿಯಲ್ಲಿ ತಮ್ಮ ಮೊದಲ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಸೋತು ಪಂದ್ಯಾವಳಿಯಿಂದಲೇ ಹೊರಬೀಳುವ ಭೀತಿಯಲ್ಲಿತ್ತು. ಆದರೆ, ನಂತರದ ಪಂದ್ಯಗಳಲ್ಲಿ ಅದ್ಭುತ ರೀತಿಯಲ್ಲಿ ಪುನರಾಗಮನ ಮಾಡಿದ ಕಾರಣ ಇದು ಆರ್ಸಿಬಿಗೆ ಸತತ ಆರನೇ ಗೆಲುವಾಗಿದೆ.

ಆರ್ಸಿಬಿ ಟಾಪ್ 4ರ ಸ್ಥಾನಕ್ಕೆ ಅರ್ಹತೆ ಪಡೆಯಲು ನಿರ್ಣಾಯಕ ಪಂದ್ಯದಲ್ಲಿ 18 ರನ್ಗಳಿಂದ ಗೆಲ್ಲಬೇಕಾಗಿತ್ತು. ಪಂದ್ಯದ ಅಂತಿಮ ಓವರ್ ಎಸೆದ ಯಶ್ ದಯಾಳ್ 35 ರನ್ಗಳನ್ನು ಆರಾಮವಾಗಿ ರಕ್ಷಿಸಿದರು ಮತ್ತು ಕೇವಲ 7 ರನ್ ಮಾತ್ರ ಬಿಟ್ಟುಕೊಟ್ಟರು.
ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಕ್ಯಾಮೆರಾನ್ ಗ್ರೀನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ತಂಡ ಮೊದಲ ಇನ್ನಿಂಗ್ಸ್ನಲ್ಲಿ 20 ಓವರ್ಗಳಲ್ಲಿ 5 ವಿಕೆಟ್ಗೆ 218 ರನ್ಗಳನ್ನು ಕಲೆಹಾಕಿತು.
ನಂತರ ಸಿಎಸ್ಕೆ ತಂಡ ರಚಿನ್ ರವೀಂದ್ರ ಅವರ ಸ್ಫೋಟಕದ ಅರ್ಧಶತಕ ಮತ್ತು ಕೊನೆಯಲ್ಲಿ ರವೀಂದ್ರ ಜಡೇಜಾ ಹಾಗೂ ಎಂಎಸ್ ಧೋನಿ ಅಬ್ಬರದ ಹೊರತಾಗಿಯೂ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 191 ರನ್ಗಳಿಗೆ ನಿಯಂತ್ರಣಗೊಂಡಿತು.

ಸಿಎಸ್ಕೆ ವಿರುದ್ಧ ರೋಚಕ ಗೆಲುವಿನ ನಂತರ ಆರ್ಸಿಬಿ ಫ್ರಾಂಚೈಸಿಯ ಡೈ-ಹಾರ್ಡ್ ಅಭಿಮಾನಿಗಳು ಮತ್ತು ಆಟಗಾರರು ರೋಮಾಂಚನಗೊಂಡಿದ್ದರು ಮತ್ತು ತಡರಾತ್ರಿಯವರೆಗೂ ಬೃಹತ್ ಸಂಭ್ರಮಾಚರಣೆಯಲ್ಲಿ ಮಿಂದೆದ್ದರು.
ಅಲ್ಪಕಾಲಿಕ ಮಳೆಯ ಬಳಿಕ ತಡರಾತ್ರಿಯವರೆಗೂ ಬೆಂಗಳೂರಿನ ಬೀದಿಗಳಲ್ಲಿಯೇ ಬೀಡುಬಿಟ್ಟಿದ್ದ ಆರ್ಸಿಬಿ ಅಭಿಮಾನಿಗಳು, ಪಂದ್ಯ ಗೆದ್ದ ನಂತರ ಬೀದಿ ಬೀದಿಗಳಲ್ಲಿ ಪರಸ್ಪರ ಅಪ್ಪಿಕೊಂಡು ವಿಜಯೋತ್ಸವ ಆಚರಿಸಿದರು.
ಅಭಿಮಾನಿಗಳ ಒಂದು ಗುಂಪು ತಡರಾತ್ರಿಯಲ್ಲಿ ಆರ್ಸಿಬಿ ತಂಡದ ಬಸ್ ಹೊರಬರಲು ಕಾಯುತ್ತಿದ್ದರು ಮತ್ತು ಸಿಎಸ್ಕೆ ವಿರುದ್ಧದ ಅದ್ಭುತ ಗೆಲುವಿಗಾಗಿ ರಸ್ತೆಯುದ್ದಕ್ಕೂ ಘೋಷಣೆ ಕೂಗಿ ಅಭಿನಂದಿಸಿದರು.
ಆರ್ಸಿಬಿ ಫ್ರಾಂಚೈಸಿಯು ಮಹಾಕಾವ್ಯ ಶೈಲಿಯಲ್ಲಿ ತನ್ನ ಅಗ್ರ 4 ಸ್ಥಾನವನ್ನು ದೃಢಪಡಿಸಿದ್ದನ್ನು ನೋಡಿದ ನಿಷ್ಠಾವಂತ ಅಭಿಮಾನಿಗಳು ತಮ್ಮ ತಂಡದ ವೀರೋಚಿತ ಗೆಲುವನ್ನು ಆಚರಿಸುತ್ತಲೇ ಮನೆಗಳಿಗೆ ಹಿಂದಿರುಗಿದರು ಮತ್ತು ರಸ್ತೆಗಳನ್ನು ನಿರ್ಬಂಧಿಸಿದರು.
"ಇದು ಇಂದು ಮಧ್ಯರಾತ್ರಿ 1:30 ಕ್ಕೆ... ಇದು ಹೆಚ್ಚು ವಿಶೇಷವಾದದ್ದು. ನಾವು ವಿಶ್ವದ ಅತ್ಯುತ್ತಮ ಅಭಿಮಾನಿಗಳನ್ನು ಹೊಂದಿದ್ದೇವೆ ಮತ್ತು ನಾವು ಅದರ ಬಗ್ಗೆ ಹೆಮ್ಮೆಪಡುತ್ತೇವೆ," ಎಂದು ಆರ್ಸಿಬಿ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಇದು ಆರ್ಸಿಬಿ ತಂಡ ಹಾಗೂ ಅಭಿಮಾನಿಗಳು ಗೆಲುವಿನೊಂದಿಗೆ ಭಾವಪರವಶವಾಗಿದ್ದರೂ, ಎಂಎಸ್ ಧೋನಿಯ ಅಭಿಮಾನಿಗಳ ದಂಡು ಹತಾಶೆಯಲ್ಲಿ ಮುಳುಗಿತು. ಕ್ರಿಕೆಟ್ ಲೆಜೆಂಡ್ ಕ್ರಿಕೆಟ್ ಮೈದಾನದಲ್ಲಿ ಅವರ 'ಥಲಾ' ಪ್ರದರ್ಶನವನ್ನು ಕೊನೆಯ ಬಾರಿಗೆ ವೀಕ್ಷಿಸಿದರು.
ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮ್ತತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಪ್ಲೇಆಫ್ ನಾಲ್ಕಕ್ಕೆ ಅರ್ಹತೆ ಗಳಿಸಿದ್ದರಿಂದ, ನಾಲ್ಕನೇ ಸ್ಥಾನಕ್ಕಾಗಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಸೆಣಸಾಡಿದವು. ಅದರಲ್ಲಿ ಆರ್ಸಿಬಿ ಯಶಸ್ವಿಯಾಗಿದ್ದರೆ, ಸಿಎಸ್ಕೆ ವಿಫಲಗೊಂಡಿತು.
ಅಗ್ರ 3 ತಂಡಗಳಾದ ಕೆಕೆಆರ್, ರಾಜಸ್ಥಾನ್ ರಾಯಲ್ಸ್ ಮತ್ತು ಎಸ್ಆರ್ಹೆಚ್ ತಂಡಗಳು ಭಾನುವಾರ, ಮೇ 18ರಂದು ತಮ್ಮ ಅಂತಿಮ ಗುಂಪು ಹಂತದ ಪಂದ್ಯವನ್ನು ಆಡುತ್ತವೆ.
ಕೆಕೆಆರ್ ತಂಡಕ್ಕೆ ಅಗ್ರಸ್ಥಾನದಲ್ಲಿ ಮುಗಿಸುವುದು ಖಚಿತವಾಗಿದೆ ಮತ್ತು ರಾಜಸ್ಥಾನ್ ರಾಯಲ್ಸ್ ಮತ್ತು ಎಸ್ಆರ್ಹೆಚ್ ತಂಡಗಳು ಇನ್ನೂ 2ನೇ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿವೆ. ಇದು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಲು ಹೆಚ್ಚುವರಿ ಅವಕಾಶ ನೀಡಲಿವೆ.