ಆಟಗಾರರ ಪ್ರತಿಕ್ರಿಯೆಗಳು
ಕಳೆದ ಮೂರು ವರ್ಷಗಳ ಕಾಲ ಕಂಡ ಕೆಟ್ಟ ಕನಸು ಈಗ ಕೊನೆಗೊಂಡೆ. ಕಷ್ಟಕಾಲದಲ್ಲಿ ನನ್ನ ಕುಟುಂಬ ನನ್ನ ಜೊತೆಯಲ್ಲಿತ್ತು. ನನ್ನ ಅಭಿಮಾನಿಗಳಿಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ ಎಂದು ಅಜಿತ್ ಚಂಡೀಲಾ ಪ್ರತಿಕ್ರಿಯಿಸಿದ್ದಾರೆ.
ಅತ್ಯಂತ ಭಾವನಾತ್ಮಕ ದಿನ ಇದಾಗಿದೆ. ನನ್ನ ಕುಟುಂಬ ಹಾಗೂ ಆಪ್ತರಿಗೆ ಸಂತಸಮಯ ದಿನ, ಎಲ್ಲರಿಗೂ ನನ್ನ ಧನ್ಯವಾದಗಳು, ಮತ್ತೆ ಟೀಂ ಇಂಡಿಯಾ ಪರ ಆಡುವ ಕನಸಿದೆ ಎಂದು ಶ್ರೀಶಾಂತ್ ಅವರು ಪ್ರತಿಕ್ರಿಯಿಸಿದ್ದಾರೆ
ಮೂವರು ಜಾಮೀನು ಪಡೆದುಕೊಂಡಿದ್ದಾರೆ
ಈ ಹಿಂದೆ ಈ ಮೂವರು ಕ್ರಿಕೆಟರ್ಸ್ ವಿರುದ್ಧ ಮಹಾರಾಷ್ಟ್ರದ MCOCA ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಅದರೆ, ಸರಿಯಾದ ಸಾಕ್ಷಿ ಆಧಾರ ಇಲ್ಲದ ಕಾರಣ ಬಂಧನಕ್ಕೊಳಗಾದರೂ ಎಲ್ಲಾ ಮೂವರು ಕ್ರಿಕೆಟರ್ಸ್ ಗಳು ಜಾಮೀನು ಪಡೆದು ಹೊರ ಬಂದಿದ್ದರು.
ಚಾರ್ಜ್ ಶೀಟ್ ನಲ್ಲಿ ದಾವೂದ್ ಹೆಸರು
ಪಾಕಿಸ್ತಾನ, ದುಬೈ ಹಾಗೂ ಇಂಗ್ಲೆಂಡ್ ನಿಂದ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಸ್ಪಾಟ್ ಫಿಕ್ಸಿಂಗ್ ನಿಯಂತ್ರಿಸುತ್ತಿದ್ದರು. ಪಾಕಿಸ್ತಾನ ಬುಕ್ಕಿ ಸಲ್ಮಾನ್, ದುಬೈ ಬುಕ್ಕಿ ಜಾವೇದ್ aka ಡಾಕ್ಟರ್ aka ಜಾವೇದ್ ಛೂಟನಿ ಅವರು ಭಾರತದ ಬುಕ್ಕಿಗಳಾದ ರಮೇಶ್ ವ್ಯಾಸ್ ಹಾಗೂ ಟಿಂಕು ಮಂಡಿ ಮೂಲಕ ಫಿಕ್ಸಿಂಗ್ ಮಾಡುತ್ತಿದ್ದರು ಎಂದು ಅರೋಪಪಟ್ಟಿಯಲ್ಲಿ ಹೇಳಲಾಗಿತ್ತು. [ದಾವೂದ್ ಜತೆ ಶ್ರೀಶಾಂತ್ ಮೇಲೂ ಚಾರ್ಜ್ ಶೀಟ್]
ಆರ್.ಎಂ. ಲೋಧಾ ಸಮಿತಿ ನೀಡಿದ ತೀರ್ಪು
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ತ್ರಿಸದಸ್ಯ ಪೀಠ ಜುಲೈ 14ರಂದು ತೀರ್ಪು ನೀಡಿ ಚೆನೈ ಸೂಪರ್ ಕಿಂಗ್ಸ್ , ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಐಪಿಎಲ್ ನಿಂದ 2 ವರ್ಷ ನಿಷೇಧ ಹೇರಿದ್ದಲ್ಲದೆ, ರಾಜ್ ಕುಂದ್ರಾ ಹಾಗೂ ಗುರುನಾಥ್ ಮೇಯಪ್ಪನ್ ಅವರಿಗೆ ಅಜೀವ ನಿಷೇಧ ಹಾಕಲಾಗಿದೆ.[ವಿವರ ಇಲ್ಲಿ ಓದಿ]
|
ಶ್ರೀಶಾಂತ್ ಅವರ ತಾಯಿ ನೀಡಿದ ಪ್ರತಿಕ್ರಿಯೆ
ಶ್ರೀಶಾಂತ್ ಅವರ ತಾಯಿ ಸಾವಿತ್ರಿ ದೇವಿ ಅವರು ನೀಡಿದ ಪ್ರತಿಕ್ರಿಯೆ ಹೀಗಿದೆ...
|
ಇನ್ನೂ ಕ್ರಿಕೆಟ್ ಆಡುವ ಹಸಿವಿದೆ: ಶ್ರೀಶಾಂತ್.
ಇನ್ನೂ ಕ್ರಿಕೆಟ್ ಆಡುವ ಹಸಿವಿದೆ, ಇಂದಿನಿಂದಲೇ ಮತ್ತೆ ತರಬೇತಿ ಶುರು ಮಾಡುತ್ತೇನೆ. ಬಿಸಿಸಿಐ ಪ್ರತಿಕ್ರಿಯೆಗೆ ಕಾದಿದ್ದೇನೆ: ಶ್ರೀಶಾಂತ್.
|
ಅಂಕಿತ್ ಚೌಹಾಣ್ ನೀಡಿದ ಪ್ರತಿಕ್ರಿಯೆ
ತೀರ್ಪು ಹೊರ ಬಂದ ಮೇಲೆ ಕ್ರಿಕೆಟರ್ ಅಂಕಿತ್ ಚೌಹಾಣ್ ನೀಡಿದ ಪ್ರತಿಕ್ರಿಯೆ ಹೀಗಿದೆ