2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಅದ್ಭುತ ಮತ್ತು ಕಾಲ್ಪನಿಕ ಓಟ ಬುಧವಾರದಂದು ಅಹಮದಾಬಾದ್ನಲ್ಲಿ ಕೊನೆಗೊಂಡಿತು.
ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ 4 ವಿಕೆಟ್ಗಳ ಅಂತರದಿಂದ ಸೋಲಿಸಲ್ಪಟ್ಟಿತು. ಸಂಜು ಸ್ಯಾಮ್ಸನ್ ನಾಯಕತ್ವದ ತಂಡ ಇದೀಗ ಕ್ವಾಲಿಫೈಯರ್ 2 ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿತು.

ಇನ್ನು ಈ ಸೋಲಿನೊಂದಿಗೆ, ಚೊಚ್ಚಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಎತ್ತುವ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್ಸಿಬಿ ತಂಡದ ಆಶಯವೂ ಕೊನೆಗೊಂಡಿತು. ಜನಪ್ರಿಯ ಫ್ರಾಂಚೈಸಿಯು ಸತತ 17ನೇ ಋತುವಿನಲ್ಲಿ ಚಾಂಪಿಯನ್ ಪಟ್ಟಕ್ಕೇರಲು ವಿಫಲವಾಗಿದೆ.
ಬುಧವಾರ, ಮೇ 22ರಂದು ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೋಲಿನ ನಂತರ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಆರ್ಸಿಬಿ ತಂಡವು ಹೊರಬಿದ್ದ ನಂತರ, ಸಿಎಸ್ಕೆ ವಿರುದ್ಧದ ಆರ್ಸಿಬಿ ತಂಡದ ಆಕ್ರಮಣಕಾರಿ ಸಂಭ್ರಮಾಚರಣೆ ಮಾಡಿದ ಬಗ್ಗೆ ಭಾರತ ಮತ್ತು ಸಿಎಸ್ಕೆ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಟೀಕಿಸಿದರು.

ಗಮನಾರ್ಹವೆಂದರೆ, ಆರ್ಸಿಬಿ ಫ್ರಾಂಚೈಸಿ ಇದುವರೆಗೆ ಎಲ್ಲಾ 17 ಆವೃತ್ತಿಗಳನ್ನು ಆಡಿದ ಹೊರತಾಗಿಯೂ, ಒಂದೇ ಒಂದು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ ಮತ್ತು ಮೂರು ಬಾರಿ ರನ್ನರ್-ಅಪ್ ಆಗಿ ಮುಗಿಸಿದೆ.

"ನಾವು ಇಂದು ಆರ್ಸಿಬಿ ಬಗ್ಗೆ ಮಾತನಾಡುವುದಾದರೆ, ಉತ್ಸಾಹ ಮತ್ತು ಆಕ್ರಮಣಕಾರಿ ಆಚರಣೆಗಳು ನಿಮಗೆ ಟ್ರೋಫಿಗಳನ್ನು ಗೆಲ್ಲುವುದಿಲ್ಲ ಎಂದು ತೋರಿಸುತ್ತದೆ. ನೀವು ಯೋಜಿಸಬೇಕಾಗಿದೆ. ಪ್ಲೇಆಫ್ ತಲುಪಿದ ಮಾತ್ರಕ್ಕೆ ನೀವು ಐಪಿಎಲ್ ಟ್ರೋಫಿಯನ್ನು ಪಡೆಯುವುದಿಲ್ಲ. ಅದೇ ಹಸಿವಿನಿಂದ ಆಟವಾಡಬೇಕು. ಸಿಎಸ್ಕೆ ತಂಡವನ್ನು ಸೋಲಿಸಿದ ಮಾತ್ರಕ್ಕೆ ಐಪಿಎಲ್ ಟ್ರೋಫಿ ಗೆಲ್ಲುತ್ತೀರಿ ಎಂದು ಭಾವಿಸಬೇಡಿ. ನೀವು ಮುಂದಿನ ವರ್ಷ ಮತ್ತೊಮ್ಮೆ ಬರಬೇಕು," ಎಂದು ಅಂಬಟಿ ರಾಯುಡು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಕಿಡಿಕಾರಿದರು.
ಗಮನಾರ್ಹವಾಗಿ, ಸಿಎಸ್ಕೆ ವಿರುದ್ಧದ ಗೆಲುವಿನ ನಂತರ ಆರ್ಸಿಬಿ ತಂಡವನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಟೀಕಿಸಲಾಯಿತು. ಆ ಗೆಲುವು ಅವರಿಗೆ ಪ್ಲೇಆಫ್ಗೆ ಅರ್ಹತೆ ಪಡೆಯಲು ಸಹಾಯ ಮಾಡಿತು.
ಆರ್ಸಿಬಿ ಆಟಗಾರರು ಮೈದಾನದಲ್ಲಿ ತಮ್ಮ ಅತಿರೇಕದ ಅಂಭ್ರಮಾಚರಣೆಗಾಗಿ ಸಿಎಸ್ಕೆ ಅಭಿಮಾನಿಗಳ ಕೋಪವನ್ನು ಎದುರಿಸಿತು. ವೃತ್ತಿಪರ ವೃತ್ತಿಜೀವನದ ಕೊನೆಯ ಪಂದ್ಯವನ್ನು ಆಡುತ್ತಿದ್ದ ಸಿಎಸ್ಕೆ ಲೆಜೆಂಡ್ ಎಂಎಸ್ ಧೋನಿ ಅವರನ್ನು ನಿರ್ಲಕ್ಷಿಸಿದೆ ಎಂದು ವರದಿಯಾಯಿತು.
ಇದೇ ವೇಳೆ ಮಾತು ಮುಂದುವರೆಸಿದ ಅಂಬಟಿ ರಾಯುಡು, ಭಾರತದ ಪ್ರತಿಭೆಗಳಲ್ಲಿ ಆರ್ಸಿಬಿ ತಂಡದ ನಂಬಿಕೆಯ ಕೊರತೆಯನ್ನು ಎತ್ತಿ ತೋರಿಸಿದರು ಮತ್ತು ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಯಾವುದೇ ಭಾರತೀಯ ಆಟಗಾರ ಫ್ರಾಂಚೈಸಿಗಾಗಿ 1000 ರನ್ ಗಳಿಸಿಲ್ಲ ಎಂದು ತಿಳಿಸಿದರು.
"ಆರ್ಸಿಬಿ ಫ್ರಾಂಚೈಸಿ ಆಟಗಾರರ ಮೇಲೆ, ವಿಶೇಷವಾಗಿ ಭಾರತೀಯ ಪ್ರತಿಭೆಗಳಲ್ಲಿ ಹೆಚ್ಚಿನ ನಂಬಿಕೆಯನ್ನು ತೋರಿಸಬೇಕಾಗಿದೆ. ಕಳೆದ 16 ವರ್ಷಗಳಲ್ಲಿ ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಯಾವುದೇ ಭಾರತೀಯ ಬ್ಯಾಟರ್ 1000ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ ಮತ್ತು ವಿರಾಟ್ ಕೊಹ್ಲಿ ಅತಿ ಹೆಚ್ಚು 8000 ರನ್ ಗಳಿಸಿದ್ದಾರೆ. ಇದು ನಿಮಗೆ ಭಾರತೀಯ ಪ್ರತಿಭೆಯ ಮೇಲೆ ಯಾವುದೇ ವಿಶ್ವಾಸವಿಲ್ಲ ಎಂದು ತೋರಿಸುತ್ತದೆ," ಎಂದು ಅಂಬಟಿ ರಾಯುಡು ಹೇಳಿದರು.
ಆರ್ಸಿಬಿ ತನ್ನ ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ ಕಳಪೆ ಅಭಿಯಾನ ಪ್ರಾರಂಭಿಸಿತು ಮತ್ತು ನಂತರ ತನ್ನ ಕೊನೆಯ ಆರು ಪಂದ್ಯಗಳನ್ನು ಗೆದ್ದು ಪ್ಲೇಆಫ್ಗೆ ಅದ್ಭುತ ಪ್ರವೇಶ ಪಡೆಯಿತು.
ಆದರೆ, ಸತತ ನಾಲ್ಕು-ಪಂದ್ಯಗಳ ಸೋಲಿನ ಸರಣಿಯನ್ನು ಕೊನೆಗೊಳಿಸಿದ ರಾಜಸ್ಥಾನ್ ರಾಯಲ್ಸ್ ಮೂಲಕ ಎಲಿಮಿನೇಟರ್ನಲ್ಲಿ ಆರ್ಸಿಬಿ ಸೋಲಿಸಿ ಕ್ವಾಲಿಫೈಯರ್ 2 ಪ್ರವೇಶಿಸಿತು. ಮೂರು ಬಾರಿಯ ರನ್ನರ್-ಅಪ್ ಆರ್ಸಿಬಿ ಇದೀಗ ಮುಂದಿನ ಆವೃತ್ತಿಗೂ ಮುನ್ನ ಮೆಗಾ ಹರಾಜಿನಲ್ಲಿ ತಮ್ಮ ತಂಡವನ್ನು ಮರುನಿರ್ಮಾಣ ಮಾಡಬೇಕಿದೆ ಮತ್ತು ಅಂತಿಮವಾಗಿ ಅವರ 17 ವರ್ಷಗಳ ಟ್ರೋಫಿ ಬರವನ್ನು ಕೊನೆಗೊಳಿಸಬೇಕಿದೆ.