
ಮೊದಲ ಎಸೆತದಲ್ಲೇ ವಾಸೀಂ ಅಕ್ರಂ ರನೌಟ್
ಕೊನೆಯ ಓವರಿನ ಮೊದಲ ಎಸೆತದಲ್ಲಿ ವಾಸೀಂ ಅಕ್ರಂ ರನೌಟ್, ಎರಡನೇ ಎಸೆತದಲ್ಲಿ ಮಿಯಾಂದಾದ್ ಬೌಂಡರಿ ಬಾರಿಸಿದರೆ, ಮೂರನೇ ಬಾಲ್ ನಲ್ಲಿ ಒಂದು ರನ್, ನಾಲ್ಕನೇ ಎಸೆತದಲ್ಲಿ ಜುಲ್ಕರೇನ್ ಕ್ಲೀನ್ ಬೌಲ್ಡ್, ಐದನೇ ಎಸೆತದಲ್ಲಿ ಅಜರದ್ದೀನ್ ಕೃಪೆಯಿಂದ ರನೌಟ್ ಚಾನ್ಸ್ ನಿಂದ ಬಚಾವ್ ಆದ ಪಾಕಿಸ್ತಾನಕ್ಕೆ ಮತ್ತೊಂದು ರನ್.

ಕೊನೆಯ ಎಸೆತದಲ್ಲಿ ಪಾಕಿಗೆ ಬೇಕಾಗಿದ್ದದ್ದು ನಾಲ್ಕು ರನ್
ಕೊನೆಯ ಎಸೆತದಲ್ಲಿ ಪಾಕಿಸ್ತಾನಕ್ಕೆ ಬೇಕಾಗಿದ್ದದ್ದು ನಾಲ್ಕು ರನ್, ಬ್ಯಾಟ್ ಮಾಡುತ್ತಿದ್ದದ್ದು ಜಾವೇದ್ ಮಿಯಾಂದಾದ್, ನಾನ್ ಸ್ಟ್ರೈಕರ್ ನಲ್ಲಿ ತೌಸೀಫ್ ಅಹಮದ್. ಕೊನೆಯ ಎಸೆತ ಎದುರಿಸಲು ಸುಮಾರು ಹತ್ತು ನಿಮಿಷ ತೆಗೆದುಕೊಂಡ ಮಿಯಾಂದಾದ್, ಮಿಡ್ ವಿಕೆಟ್ ಕಡೆ ಸಿಕ್ಸ್ ಬಾರಿ ಪಾಕಿಸ್ತಾನಕ್ಕೆ ಜಯ ತಂದುಕೊಟ್ಟರು.

ಅಭಿಮಾನಿಗಳಿಗೆ ಶಾಕ್
ಇನ್ಣೇನು ಪಂದ್ಯ ಗೆದ್ದೇ ಬಿಟ್ಟೆವು ಎನ್ನುವ ಭಾರತದ ಕೋಟ್ಯಾಂತರ ಅಭಿಮಾನಿಗಳಿಗೆ ಶಾಕ್, ಆ ಕೊನೆಯ ಒಂದೇ ಬಾಲ್ ನಲ್ಲಿ ಚೇತನ್ ಶರ್ಮಾ ಭಾರತದ ಕ್ರೀಡಾಭಿಮಾನಿಗಳ ಪಾಲಿಗೆ ವಿಲನ್ ಆದರು. ಫುಲ್ ಟಾಸ್ ಯಾಕೆ ಹಾಕಬೇಕಿತ್ತು, ಯಾರ್ಕರ್ ಹಾಕಬಹುದಿತ್ತಲ್ಲಾ ಅನ್ನೋ ಬಿಸಿಬಿಸಿ ಚರ್ಚೆ.

ಪಂದ್ಯ ಗೆಲ್ಲಿಸಿಕೊಟ್ಟ ಮಿಯಾಂದಾದ್
ಸೋಲುವ ಪಂದ್ಯವನ್ನು ಗೆದ್ದುಕೊಟ್ಟ ಜಾವೇದ್ ಮಿಯಾಂದಾದ್ ಗೆ ಅಂದಿನ ಪಾಕ್ ರಾಷ್ಟ್ರಪತಿ ಜಿಯಾ-ಉಲ್-ಹಕ್ ಅವರಿಂದ ಭರ್ಜರಿ ಬಹುಮಾನ ಸಿಕ್ಕರೆ, ಇತ್ತ ಚೇತನ್ ಶರ್ಮಾಗೆ ಎಲ್ಲರೂ ಉಗಿದಿದ್ದೇ ಉಗಿದಿದ್ದು. ಕ್ರಿಕೆಟ್ ಇತಿಹಾಸದಲ್ಲಿಅಚ್ಚಳಿಯದೇ ಉಳಿದ ಪಂದ್ಯ ಇದಾಗಿತ್ತು.

ನಾಳಿನ ಪಂದ್ಯಕ್ಕೆ ಭಾರತಕ್ಕೊಂದು ಆಲ್ ದಿ ಬೆಸ್ಟ್
ಭಾನುವಾರ, ಜೂನ್ ನಾಲ್ಕರಂದು ಮತ್ತೆ ಭಾರತ, ಪಾಕಿಸ್ತಾನವನ್ನು ಎದುರಿಸಲಿದೆ. ಇದೊಂದು ಕ್ರಿಕೆಟ್ ಪಂದ್ಯವಾದರೂ ಇದರಲ್ಲಿ ಎರಡು ದೇಶಗಳ ನಡುವಿನ ಭಾವನಾತ್ಮಕ ಸಂಬಂಧವಿದೆ. ಏನೇ ಆಗಲಿ, ನಮ್ಮ ತಂಡಕ್ಕೊಂದು ಆಲ್ ದಿ ಬೆಸ್ಟ್.


Click it and Unblock the Notifications