ಬೆಂಗಳೂರು, ಜುಲೈ 11 : ಕರ್ನಾಟಕದ ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ ಅವರನ್ನು ಭಾರತ 'ಎ' ತಂಡಕ್ಕೆ ಆಯ್ಕೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ 'ಎ' ತಂಡವನ್ನು ಸಮರ್ಥ್ ಸೇರಿಕೊಳ್ಳಲಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ, ಮನೀಶ್, ಕರುಣ್ ಕ್ಯಾಪ್ಟನ್ಸ್
ತಮಿಳುನಾಡಿನ ಆಟಗಾರ ಅಭಿನವ್ ಮುಕುಂದ್ ಅವರ ಬದಲಿಗೆ ಅರ್ ಸಮರ್ಥ್ ಅವರನ್ನು ಆಯ್ಕೆ ಮಾಡಲಾಗಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಸ್ಥಾನ ಮುಕುಂದ್ ಸ್ಥಾನಪಡೆದಿದ್ದಾರೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ
29 ಪಂದ್ಯಗಳಿಂದ 42.30 ರನ್ ಸರಾಸರಿಯಂತೆ 2073ರನ್ ಕಲೆ ಹಾಕಿದ್ದಾರೆ. 5 ಶತಕ ಹಾಗೂ 9 ಅರ್ಧಶತಕ ಬಾರಿಸಿದ್ದಾರೆ. 235ರನ್ ವೈಯಕ್ತಿಕ ಗರಿಷ್ಠ ಮೊತ್ತವನ್ನು ಜಾರ್ಖಂಡ್ ವಿರುದ್ಧ 2016ರ ರಣಜಿ ಋತುವಿನಲ್ಲಿ ದಾಖಲಿಸಿದ್ದಾರೆ.