
ರಜೆ ಕೇಳಿರುವ ಕೆಎಲ್ ರಾಹುಲ್
ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಎಲ್ ರಾಹುಲ್ ವೈಯಕ್ತಿಕ ಕಾರಣಗಳಿಗಾಗಿ ರಜೆ ಕೇಳಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕೆಎಲ್ ರಾಹುಲ್ ಯಾವುದೇ ಗಾಯದ ಕಾಳಜಿ ಅಥವಾ ವಿರಾಮವನ್ನು ಹೊಂದಿಲ್ಲ. ಅವರಿಗೆ ಕೆಲವು ಕೌಟುಂಬಿಕ ಬದ್ಧತೆಗಳಿವೆ. ಅವರು ಮದುವೆಯಾಗುತ್ತಿದ್ದಾರೆಯೇ ಅಥವಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ ಎಂಬುದು ನನಗೆ ತಿಳಿದಿಲ್ಲ. ಆದರೆ, ಅವರಿಗೆ ಕೆಲವು ವೈಯಕ್ತಿಕ ಬದ್ಧತೆ ಇದೆ ಎಂದು ಹೇಳಬಲ್ಲೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮ್ಯಾಥ್ಯೂ ವೇಡ್

ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಜೋಡಿ
ಕಳೆದ ಮೂರು ವರ್ಷಗಳಿಂದ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರೆ. ಅಥಿಯಾ ಶೆಟ್ಟಿ ತಂದೆ ಸುನಿಲ್ ಶೆಟ್ಟಿ ಮೂಲತಃ ಮಂಗಳೂರಿನವರು, ಇನ್ನು ಕೆ.ಎಲ್.ರಾಹುಲ್ ಕೂಡ ಮಂಗಳೂರಿನವರು ಎನ್ನುವುದು ವಿಶೇಷ.
ಮಗಳ ಪ್ರೇಮಕ್ಕೆ ಸುನಿಲ್ ಶೆಟ್ಟಿ ಒಪ್ಪಿಗೆ ನೀಡಿದ್ದು, ಯಾವಾಗ ಮದುವೆಯಾಗಬೇಕು ಎಂದು ನಿರ್ಧರಿಸುವ ಜವಾಬ್ದಾರಿಯನ್ನು ಅವರಿಗೆ ಬಿಟ್ಟಿದ್ದಾರೆ. ಇಬ್ಬರು ಯಾವಾಗ ಮದುವೆಯಾಗುತ್ತಾರೋ ಅದು ಅವರ ನಿರ್ಧಾರ ಅವರಿಗೆ ನನ್ನ ಆಶಿರ್ವಾದ ಯಾವಾಗಲೂ ಇರುತ್ತದೆ ಎಂದು ಸುನಿಲ್ ಶೆಟ್ಟಿ ಹೇಳಿದ್ದು, ಮಗಳ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಫಾರ್ಮ್ ಕಂಡುಕೊಂಡ ಕೆಎಲ್ ರಾಹುಲ್
ಇನ್ನು ಗಾಯದ ಸಮಸ್ಯೆಯಿಂದ ವಾಪಸಾದ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಟಿ20 ವಿಶ್ವಕಪ್ನ ಮೊದಲ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದ ರಾಹುಲ್ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಫಾರ್ಮ್ಗೆ ಮರಳಿದ್ದಾರೆ.
ಅಡಿಲೇಡ್ ಓವಲ್ನಲ್ಲಿ ನಡೆದ ಪಂದ್ಯದಲ್ಲಿ 32 ಎಸೆತಗಳಲ್ಲಿ 50 ರನ್ ಗಳಿಸಿದರು. ಮಾತ್ರವಲ್ಲದೆ, ಲಿಟ್ಟನ್ ದಾಸ್ರನ್ನು ರನ್ಔಟ್ ಮಾಡುವಲ ಮೂಲಕ ಫೀಲ್ಡಿಂಗ್ನಲ್ಲಿ ಕೂಡ ಮಿಂಚಿದ್ದರು.


Click it and Unblock the Notifications












