ಸೋಲಿಗೆ ಕಾರಣ ಮಧ್ಯಮ ಕ್ರಮಾಂಕದ ಆಟಗಾರರು
ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೋಲಿಗೆ ಭಾರತ ಬ್ಯಾಟಿಂಗ್ ವಿಭಾಗದ ಮಧ್ಯಮ ಕ್ರಮಾಂಕ ಹಾಗೂ ಪಂದ್ಯದ ಮಧ್ಯದ ವೇಳೆ ಬೌಲರ್ಗಳು ವಿಕೆಟ್ ತೆಗೆಯಲಾಗದೇ ಇದ್ದದ್ದು ಎಂದು ಕೆಎಲ್ ರಾಹುಲ್ ತಿಳಿಸಿದ್ದಾರೆ. 20-25 ಓವರ್ಗಳವರೆಗೂ ಸಮಬಲವನ್ನು ಸಾಧಿಸಿದ್ದ ಟೀಮ್ ಇಂಡಿಯಾ ನಂತರದಲ್ಲಿ ಮಧ್ಯಮ ಕ್ರಮಾಂಕದ ಆಟಗಾರರು ಉತ್ತಮ ಜತೆಯಾಟ ನೀಡುವಲ್ಲಿ ವಿಫಲವಾದ ಕಾರಣದಿಂದ ಸೋಲನುಭವಿಸಿತು ಎಂದು ರಾಹುಲ್ ತಿಳಿಸಿದ್ದಾರೆ. ಇನ್ನು ಪಂದ್ಯದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿಕೆಟ್ಗಳನ್ನು ವೇಗವಾಗಿ ಕಬಳಿಸಿದ ಬೌಲಿಂಗ್ ವಿಭಾಗ ಪಂದ್ಯದ ಮಧ್ಯ ವಿಕೆಟ್ ಪಡೆಯದೇ ಇದ್ದದ್ದು ಸೋಲಿಗೆ ಮತ್ತೊಂದು ಕಾರಣ ಎಂದು ರಾಹುಲ್ ತಿಳಿಸಿದ್ದಾರೆ.
ಕೊಡುಗೆ ನೀಡದ ರಾಹುಲ್, ಪಂತ್
ಇನ್ನು ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ನಾಯಕ ಕೆಎಲ್ ರಾಹುಲ್ ( 12 ರನ್ ) , ರಿಷಭ್ ಪಂತ್ (16 ರನ್), ಶ್ರೇಯಸ್ ಅಯ್ಯರ್ (17 ರನ್) ಹಾಗೂ ವೆಂಕಟೇಶ್ ಅಯ್ಯರ್ (2 ರನ್) ತಂಡಕ್ಕೆ ಉತ್ತಮ ರನ್ ಗಳಿಸಿಕೊಡುವಲ್ಲಿ ವಿಫಲವಾಗಿದ್ದಾರೆ.
ದ.ಆಫ್ರಿಕಾ ಪರ ಮಿಂಚಿದ ಬವುಮಾ, ವಾನ್ ಡರ್ ಡಸನ್
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತನ್ನ ಮೊದಲ 3 ವಿಕೆಟ್ಗಳನ್ನು ವೇಗವಾಗಿ ಕರೆದುಕೊಂಡರೂ ಸಹ ಟೆಂಬಾ ಬವುಮಾ ( 110 ರನ್ ) ಮತ್ತು ವಾನ್ ಡರ್ ಡಸನ್ ( ಅಜೇಯ 129 ರನ್ ) ಅದ್ಭುತ ಆಟದ ನೆರವಿನಿಂದ ಎದುರಾಳಿ ಟೀಮ್ ಇಂಡಿಯಾಗೆ ಪೈಪೋಟಿಯುತ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಯಿತು.