For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ ವಿಶೇಷ : ವಿನಯ್ ಕುಮಾರ್ ಜತೆ ಮಾತುಕತೆ

By Mahesh

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನಲ್ಲಿ ಹುಬ್ಳಿ ಟೈಗರ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ಕರ್ನಾಟಕ ತಂಡದ ರಣಜಿ ನಾಯಕ ಆರ್ ವಿನಯ್ ಕುಮಾರ್ ಅವರು ತಮ್ಮ ತಂಡದ ಬಗ್ಗೆ ಮೈಖೇಲ್/ಒನ್ಇಂಡಿಯಾ ಜತೆ ಮಾತನಾಡಿದ್ದಾರೆ. ಯುವಕರ ಪ್ರತಿಭೆ ಅನ್ವೇಷಣೆಗೆ ಕೆಪಿಎಲ್ ಉತ್ತಮ ವೇದಿಕೆ ಎಂದಿದ್ದಾರೆ.

ಯುವಕರಿಗೆ ಹೆಚ್ಚೆಚ್ಚು ಅವಕಾಶ ನೀಡುವುದು ನನ್ನ ಉದ್ದೇಶ, ಯುವ ಆಟಗಾರರು ಹೆಚ್ಚು ಸ್ವಾತಂತ್ರ್ಯ ಪಡೆದು ಆಡುವಂತಾದರೆ ನಿಜವಾದ ಪ್ರತಿಭೆ ಹೊರ ಬರುತ್ತದೆ. ತಂಡದಲ್ಲಿ ಈಗಾಗಲೇ ಕೆಲ ಆಟಗಾರರಿಗೆ ಕೆಪಿಎಲ್ ನಲ್ಲಿ ಆಡಿದ ಅನುಭವವಿದೆ. ಹಿರಿಯ ಆಟಗಾರರಿಂದ ಕಿರಿಯ ಆಟಗಾರರು ಸಾಕಷ್ಟು ಕಲಿತುಕೊಳ್ಳಬಹುದು.

My job is to give freedom to youngsters to express themselves: Vinay

ಹಂತ ಹಂತವಾಗಿ ಬೆಳೆಯಬೇಕು: ಕೆಪಿಎಲ್ ನಲ್ಲಿ ಉತ್ತಮವಾಗಿ ಆಡುವ ಮೂಲಕ ಕರ್ನಾಟಕ ರಣಜಿ ತಂಡಕ್ಕೆ ಸೇರುವ ಅವಕಾಶ ಹೆಚ್ಚಿಸಿಕೊಳ್ಳಬೇಕು. ಕಳೆದ ವರ್ಷ ಸ್ಟಾಲಿನ್ ಹೂವರ್, ಮೊಹಮ್ಮದ್ ತಾಹರಂಥ ಆಟಗಾರರು ಕೆಪಿಎಲ್ ನಲ್ಲಿ ಉತ್ತಮವಾಗಿ ಆಡಿದರು. ನಾನು ಇಂಥ ಯುವ ಆಟಗಾರರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತೇನೆ. ಇದರಿಂದ ಕರ್ನಾಟಕ ತಂಡಕ್ಕೆ ಅನುಕೂಲ ಎಂದರು.

ಟಿ20 ಮಾದರಿ ಮಾತ್ರ ಸೀಮಿತವಾಗಬಾರದು. ಎಲ್ಲಾ ಮಾದರಿಯಲ್ಲಿ ಆಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. 13 ರಿಂದ 14 ವರ್ಷ ಗಳ ಕಾಲ ದೇಶಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಲ್ಲದೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿಗ್ಗಜರ ಜತೆ ಆಡಿದ ಅನುಭವ ಹೊಂದಿರುವ ದಾವಣಗೆರೆ ಮೂಲದ ವಿನಯ್ ಕುಮಾರ್ ಅವರು ಈ ಬಾರಿ ಯುವಕರಿಗೆ ಹೆಚ್ಚು ಅದ್ಯತೆ ನೀಡುವುದೇ ನನ್ನ ಗುರಿ ಎಂದು ಮತ್ತೊಮ್ಮೆ ಹೇಳಿದರು.

ಹುಬ್ಳಿ ಟೈಗರ್ಸ್ ತಂಡದಲ್ಲಿ ಹೆಚ್ಚು ಯುವಕರಿದ್ದು, ಕೆಪಿಎಲ್ ಉತ್ತಮ ಅನುಭವ ನೀಡಲಿದೆ. ಹೆಚ್ಚೆಚ್ಚು ಹಿರಿಯ ಆಟಗಾರರ ಜತೆ ಬೆರೆತರೆ ಕಲಿಯುವುದು ಸಾಧ್ಯ ಎಂದರು.(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+