ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾಶ್ಮೀರ ಬಿಟ್ಟುಬಿಡಿ, ಸೋತ ಪಾಕ್‌ ಕಡೆ ನೋಡಿ: ಅಫ್ರಿದಿಗೆ ರೈನಾ ಟಾಂಗ್

Leave Kashmir alone, do something for your failed nation: Suresh Raina to Shahid Afridi

ನವದೆಹಲಿ, ಮೇ 18: ಗೌತಮ್ ಗಂಭೀರ್, ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್‌ ಗುಡುಗಿದ ಬಳಿಕ ಪಾಕಿಸ್ತಾನ ಮಾಜಿ ಆಲ್ ರೌಂಡರ್ ಶಾಹೀದ್ ಅಫ್ರಿದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಭಾರತೀಯ ಕ್ರಿಕೆಟಿಗರ ಸಾಲಿನಲ್ಲಿ ಸುರೇಶ್ ರೈನಾ, ಶಿಖರ್ ಧವನ್ ಸೇರಿಕೊಂಡಿದ್ದಾರೆ.

ಐಪಿಎಲ್‌ ಇತಿಹಾಸದ ಐಪಿಎಲ್‌ ಇತಿಹಾಸದ "ಚೂಸಿ" ಭಾರತೀಯ ಬೌಲರ್‌ಗಳು ಇವರು!

ಶಾಹಿದ್ ಅಫ್ರಿದಿ ಇತ್ತೀಚೆಗೆ ಭಾರತವನ್ನು ದೂರಿ ಮಾತನಾಡಿದ್ದರು. ಇದೇ ಕಾರಣಕ್ಕೆ ಗಂಭೀರ್, ಹರ್ಭಜನ್, ಯುವರಾಜ್ ಅಫ್ರಿದಿ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ರೈನಾ ಕೂಡ, ಕಾಶ್ಮೀರದ ವಿಚಾರವನ್ನು ಭಾರತ ಸರ್ಕಾರಕ್ಕೆ ಬಿಡಿ, ನೀವು ನಿಮ್ಮ ಸೋತ ದೇಶಕ್ಕೇನಾದರೂ ಮಾಡಿ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಭಾರತ ವಿರುದ್ಧದ 17 ವರ್ಷಗಳ ಹಿಂದಿನ ಪಂದ್ಯ ನೆನೆದು ಮರುಕ ಪಟ್ಟ ಅಖ್ತರ್!ಭಾರತ ವಿರುದ್ಧದ 17 ವರ್ಷಗಳ ಹಿಂದಿನ ಪಂದ್ಯ ನೆನೆದು ಮರುಕ ಪಟ್ಟ ಅಖ್ತರ್!

'ದೇಶವೊಂದು ಭಿಕ್ಷೆಯಿಂದ ಬದುಕುವ ಸ್ಥಿತಿಗೆ ಬಂದಿರುವಾಗ ಎಲ್ಲಾ ವ್ಯಕ್ತಿಗಳು ಬೇರೇನು ಮಾಡಲು ಸಾಧ್ಯ? ಕಾಶ್ಮೀರದ ವಿಚಾರವನ್ನು ಅದರ ಪಾಡಿಗೆ ಬಿಟ್ಟು ಸೋತ ರಾಷ್ಟ್ರಕ್ಕೆ ಏನಾದರೂ ಮಾಡೋದು ಒಳ್ಳೇದು' ಎಂಬರ್ಥದಲ್ಲಿ ಟ್ವೀಟ್ ಮಾಡಿರುವ ರೈನಾ, ಅಫ್ರಿದಿಗೆ ಕುಟುಕಿದ್ದಾರೆ.

ಕೊಹ್ಲಿಗೆ ಬಾಬರ್‌ ಅಝಾಮ್ ಹೋಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ಯೂನಿಸ್ ಖಾನ್ಕೊಹ್ಲಿಗೆ ಬಾಬರ್‌ ಅಝಾಮ್ ಹೋಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ಯೂನಿಸ್ ಖಾನ್

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಧಾರ್ಮಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಫ್ರಿದಿ ಇತ್ತೀಚೆಗೆ ಆರೋಪಿಸಿದ್ದರು. ಅಫ್ರಿದಿಯ ಈ ಹೇಳಿಕೆಗೆ ಭಾರತದ ಕ್ರಿಕೆಟಿಗರಾದ ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಮತ್ತು ಶಿಖರ್ ಧವನ್ ಆಕ್ರೋಶ ವ್ಯಕ್ತಪಡಿಸಿದ್ದರು.

Story first published: Monday, May 18, 2020, 17:58 [IST]
Other articles published on May 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X