For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿ: ಸುನಾಮಿ ಎಬ್ಬಿಸಿದ ಗೌತಮ್; 12 ಓವರ್‌ಗಳಲ್ಲಿ 137 ಚೇಸ್ ಮಾಡಿದ ಶಿವಮೊಗ್ಗ!

Maharaja Trophy 2022: K Gowthams 72 off 32 helps Shivamogga Strikers to beat Mangalore United

ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಇಂದು ( ಆಗಸ್ಟ್ 20 ) ಟೂರ್ನಿಯ ಲೀಗ್ ಹಂತದ 25ನೇ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ಹಾಗೂ ಶಿವಮೊಗ್ಗ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಿದ್ದು, ಮಂಗಳೂರು ಯುನೈಟೆಡ್‌ ತಂಡವನ್ನು ಸೋಲಿಸಿದ ಶಿವಮೊಗ್ಗ ಸ್ಟ್ರೈಕರ್ಸ್ ಟೂರ್ನಿಯಲ್ಲಿ ತನ್ನ ಎರಡನೇ ಗೆಲುವನ್ನು ದಾಖಲಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್ ತಂಡದ ನಾಯಕ ಕೃಷ್ಣಪ್ಪ ಗೌತಮ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಮಂಗಳೂರು ಯುನೈಟೆಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅತ್ತ ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಯುನೈಟೆಡ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್ ಕಲೆಹಾಕಿ ಎದುರಾಳಿ ಶಿವಮೊಗ್ಗ ಸ್ಟ್ರೈಕರ್ಸ್ ತಂಡಕ್ಕೆ 137 ರನ್‌ಗಳ ಗುರಿಯನ್ನು ನೀಡಿತು.

ಇನ್ನು ಈ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಶಿವಮೊಗ್ಗ ಸ್ಟ್ರೈಕರ್ಸ್ 12.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 137 ರನ್ ಚಚ್ಚಿ ಅಬ್ಬರಿಸಿ 8 ವಿಕೆಟ್‌ಗಳ ಭರ್ಜರಿ ಗೆಲುವನ್ನು ಕಂಡಿದೆ.

ಮಂಗಳೂರು ಯುನೈಟೆಡ್ ಇನ್ನಿಂಗ್ಸ್

ಮಂಗಳೂರು ಯುನೈಟೆಡ್ ಇನ್ನಿಂಗ್ಸ್

ಮಂಗಳೂರು ಯುನೈಟೆಡ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಸಮರ್ಥ್ ಆರ್ 12 ರನ್ ಹಾಗೂ ರಘುವೀರ್ ಪಾವಲೂರ್ 1 ರನ್ ಕಲೆಹಾಕಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕಿನ್ ಜೋಸ್ 38, ಅಮಿತ್ ವರ್ಮಾ 10, ಅಭಿನವ್ ಮನೋಹರ್ 36, ಅನೀಶ್ವರ್ ಗೌತಮ್ ಗೋಲ್ಡನ್ ಡಕ್ಔಟ್, ಯಶೋವರ್ಧನ್ ಪರಂತಾಪ್ 16, ಎಂ ವೆಂಕಟೇಶ್ 4, ಎಚ್ ಎಸ್ ಶರತ್ ಅಜೇಯ 5 ಹಾಗೂ ವಿಜಯ್‌ಕುಮಾರ್ ವೈಶಾಖ್ ಅಜೇಯ 5 ರನ್ ಬಾರಿಸಿದರು. ಹೀಗೆ ನಿಕಿನ್ ಜೋಸ್ ಹಾಗೂ ಅಭಿವನ್ ಮನೋಹರ್ ಹೊರತುಪಡಿಸಿದರೆ ಮಂಗಳೂರು ಯುನೈಟೆಡ್ ತಂಡದ ಉಳಿದ ಯಾವುದೇ ಆಟಗಾರ ಕೂಡ ಇಪ್ಪತ್ತರ ಗಡಿ ದಾಟಲಿಲ್ಲ.

ಶಿವಮೊಗ್ಗ ಸ್ಟ್ರೈಕರ್ಸ್ ಪರ ನಾಯಕ ಕೃಷ್ಣಪ್ಪ ಗೌತಮ್, ಕಾರಿಯಪ್ಪ ಹಾಗೂ ಅವಿನಾಶ್ ಡಿ ತಲಾ ಎರಡು ವಿಕೆಟ್ ಪಡೆದರೆ, ಸ್ಟಾಲಿನ್ ಹೂವರ್ ಮತ್ತು ಉತ್ತಮ್ ಐಯ್ಯಪ್ಪ ತಲಾ ಒಂದೊಂದು ವಿಕೆಟ್ ಪಡೆದರು.

ಶಿವಮೊಗ್ಗ ಪರ ಅಬ್ಬರಿಸಿದ ಕೆ ಗೌತಮ್

ಶಿವಮೊಗ್ಗ ಪರ ಅಬ್ಬರಿಸಿದ ಕೆ ಗೌತಮ್

ಇನ್ನು ಟೂರ್ನಿಯಲ್ಲಿ ಸತತವಾಗಿ ಆಟಗಾರನಾಗಿ ಹಾಗೂ ನಾಯಕನಾಗಿ ಮಂಕಾಗಿದ್ದ ಕೃಷ್ಣಪ್ಪ ಗೌತಮ್ ಈ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದ್ದಾರೆ. ಬೌಲಿಂಗ್‌ನಲ್ಲಿ ಎರಡು ವಿಕೆಟ್ ಪಡೆದು ಮಿಂಚಿದ ಗೌತಮ್ ತಂಡ 3 ರನ್‌ಗೆ 1 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 32 ಎಸೆತಗಳಲ್ಲಿ 72 ರನ್ ಚಚ್ಚಿ ತಂಡ ವೇಗವಾಗಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಕೃಷ್ಣಪ್ಪ ಗೌತಮ್ 7 ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದರು. ಇನ್ನು ಶಿವಮೊಗ್ಗ ಸ್ಟ್ರೈಕರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಶರತ್ ಬಿಆರ್ ಕೇವಲ ಒಂದು ರನ್ ಕಲೆಹಾಕಿ ಔಟ್ ಆದರೆ, ಮತ್ತೋರ್ವ ಆರಂಭಿಕ ಆಟಗಾರ ಸ್ಟಾಲಿನ್ ಹೂವರ್ 35 ಎಸೆತಗಳಲ್ಲಿ ಅಜೇಯ 53 ರನ್ ಕಲೆಹಾಕಿದರು. ಮೂರನೇ ವಿಕೆಟ್‌ಗೆ ಜತೆಯಾದ ಕೆ ಗೌತಮ್ ಹಾಗೂ ಸ್ಟಾಲಿನ್ ಹೂವರ್ 129 ರನ್‌ಗಳ ಜತೆಯಾಟವನ್ನು ಆಡಿದರು. ಅಂತಿಮ ಹಂತದಲ್ಲಿ ಗೌತಮ್ ಔಟ್ ಆದ ನಂತರ ಕಣಕ್ಕಿಳಿದ ಕೃಷ್ಣಮೂರ್ತಿ ಸಿದ್ಧಾರ್ಥ್ 3 ಎಸೆತಗಳಲ್ಲಿ ಅಜೇಯ 3 ರನ್ ಕಲೆಹಾಕಿದರು.

ಮಂಗಳೂರು ಯುನೈಟೆಡ್ ಪರ ಶಶಿಕುಮಾರ್ ಕೆ ಹಾಗೂ ಹೆಚ್ ಎಸ್ ಶರತ್ ತಲಾ ಒಂದೊಂದು ವಿಕೆಟ್ ಪಡೆದರು.

ಆಡುವ ಬಳಗ

ಆಡುವ ಬಳಗ

ಮಂಗಳೂರು ಯುನೈಟೆಡ್: ರವಿಕುಮಾರ್ ಸಮರ್ಥ್ (ನಾಯಕ), ನಿಕಿನ್ ಜೋಸ್, ಅನೀಶ್ವರ್ ಗೌತಮ್, ಅಭಿನವ್ ಮನೋಹರ್, ಅಮಿತ್ ವರ್ಮಾ, ರಘುವೀರ್ ಪಾವಲೂರ್ (ವಿಕೆಟ್ ಕೀಪರ್), ಮುರಳೀಧರ ವೆಂಕಟೇಶ್, ಎಚ್‌ಎಸ್ ಶರತ್, ವಿಜಯಕುಮಾರ್ ವೈಶಾಕ್, ಶಶಿಕುಮಾರ್ ಕೆ, ಯಶೋವರ್ಧನ್ ಪರಂತಪ್

ಶಿವಮೊಗ್ಗ ಸ್ಟ್ರೈಕರ್ಸ್: ಶರತ್ ಬಿಆರ್ (ವಿಕೆಟ್ ಕೀಪರ್), ಸ್ಟಾಲಿನ್ ಹೂವರ್, ಕೃಷ್ಣಮೂರ್ತಿ ಸಿದ್ಧಾರ್ಥ್, ವಿನಯ್ ಸಾಗರ್, ಚೈತನ್ಯ ಎಸ್, ಕೃಷ್ಣಪ್ಪ ಗೌತಮ್ (ನಾಯಕ), ಅವಿನಾಶ್ ಡಿ, ರಾಜವೀರ್ ವಾಧ್ವಾ, ಶ್ರೇಯಸ್ ಬಿಎಂ, ಕೆಸಿ ಕಾರಿಯಪ್ಪ, ಉತ್ತಮ್ ಅಯ್ಯಪ್ಪ

Story first published: Saturday, August 20, 2022, 19:27 [IST]
Other articles published on Aug 20, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+