ಹುಬ್ಬಳ್ಳಿ ಟೈಗರ್ಸ್ ಇನ್ನಿಂಗ್ಸ್
ಈ ಪಂದ್ಯದಲ್ಲಿ ಟಾಸ್ ಗೆದ್ದ ಮೈಸೂರು ವಾರಿಯರ್ಸ್ ಮೊದಲು ಬೌಲಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡು ಎದುರಾಳಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಲುವ್ನಿತ್ ಸಿಸೋಡಿಯಾ 38 ರನ್ ಕಲೆಹಾಕಿದರೆ, ಬಿಯು ಶಿವಕುಮಾರ್ 6 ರನ್ ಕಲೆಹಾಕಿದರು. ಇನ್ನುಳಿದಂತೆ ನವೀನ್ ಎಂಜಿ 5 ರನ್, ಲಿಯಾನ್ ಖಾನ್ 26, ಶಿಶಿರ್ ಭವಾನೆ 1 ( ರಿಟೈರ್ಡ್ ಹರ್ಟ್), ಸಾಗರ್ ಸೋಲಂಕಿ 8 ರನ್, ನಾಯಕ ಅಭಿಮನ್ಯು ಮಿಥುನ್ 7 ರನ್ ಕಲೆಹಾಕಿದರು. ಅಂತಿಮವಾಗಿ ತುಷಾರ್ ಸಿಂಗ್ 18 ಎಸೆತಗಳಲ್ಲಿ 36 ರನ್ ಸಿಡಿಸಿ ಅಬ್ಬರಿಸಿದ ಅಜೇಯರಾಗಿ ಉಳಿದರೆ, ಸೌರಭ್ ಶ್ರೀವಾಸ್ತವ್ ಅಜೇಯ 3 ರನ್ ಕಲೆಹಾಕಿದರು.
ವಿಕೆಟ್ ನಷ್ಟವಿಲ್ಲದೇ ಗೆದ್ದ ಮೈಸೂರು
ಇನ್ನು ಹುಬ್ಬಳ್ಳಿ ಟೈಗರ್ಸ್ ನೀಡಿದ ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಮೈಸೂರು ವಾರಿಯರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ನಿಹಾಲ್ ಉಳ್ಳಾಲ್ ಮತ್ತು ನಾಯಕ ಕರುಣ್ ನಾಯರ್ ವಿಕೆಟ್ ಕಳೆದುಕೊಳ್ಳದೇ ಇನ್ನೂ 4.1 ಓವರ್ ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿದರು. ನಿಹಾಲ್ ಉಳ್ಳಾಲ್ 43 ಎಸೆತಗಳಲ್ಲಿ ಅಜೇಯ 48 ರನ್ ಕಲೆಹಾಕಿದರೆ, ನಾಯಕ ಕರುಣ್ ನಾಯರ್ 11 ಫೋರ್ ಮತ್ತು 3 ಸಿಕ್ಸರ್ ಸೇರಿದಂತೆ 52 ಎಸೆತಗಳಲ್ಲಿ ಅಜೇಯ 91 ರನ್ ಕಲೆಹಾಕಿದರು. ಈ ಮೂಲಕ ಮೈಸೂರು ವಾರಿಯರ್ಸ್ ಭರ್ಜರಿ ಜಯ ಸಾಧಿಸಿದೆ.
ಆಡುವ ಬಳಗಗಳು
ಮೈಸೂರು ವಾರಿಯರ್ಸ್: ನಿಹಾಲ್ ಉಳ್ಳಾಲ್ (ವಿಕೆಟ್ ಕೀಪರ್), ಕರುಣ್ ನಾಯರ್ (ನಾಯಕ), ನಾಗ ಭರತ್, ಪವನ್ ದೇಶಪಾಂಡೆ, ಶ್ರೇಯಸ್ ಗೋಪಾಲ್, ಶಿವರಾಜ್ ಎಸ್, ಶುಭಾಂಗ್ ಹೆಗ್ಡೆ, ವಿದ್ಯಾಧರ್ ಪಾಟೀಲ್, ಪ್ರತೀಕ್ ಜೈನ್, ಆದಿತ್ಯ ಗೋಯಲ್, ಲೋಚನ್ ಅಪ್ಪಣ್ಣ
ಹುಬ್ಬಳ್ಳಿ ಟೈಗರ್ಸ್: ಲುವ್ನಿತ್ ಸಿಸೋಡಿಯಾ, ಬಿಯು ಶಿವ ಕುಮಾರ್, ಲಿಯಾನ್ ಖಾನ್, ನವೀನ್ ಎಂಜಿ, ತುಷಾರ್ ಸಿಂಗ್, ಶಿಶಿರ್ ಭವಾನೆ (ವಿಕೆಟ್ ಕೀಪರ್), ಅಭಿಮನ್ಯು ಮಿಥುನ್ (ನಾಯಕ), ವಾಸುಕಿ ಕೌಶಿಕ್, ಜಹೂರ್ ಫಾರೂಕಿ, ಸೌರಭ್ ಶ್ರೀವಾಸ್ತವ್, ಸಾಗರ್ ಸೋಲಂಕಿ