For Quick Alerts
ALLOW NOTIFICATIONS  
For Daily Alerts
 

ಮನೀಷ್ ಪಾಂಡೆ ಮುಂದೆ ಧವನ್ ಮತ್ತು ಭುವನೇಶ್ವರ್‌ಗೆ ನಾಯಕರಾಗುವ ಅರ್ಹತೆ ಇಲ್ಲ ಎಂದ ಮಾಜಿ ಕ್ರಿಕೆಟಿಗ

Manish Pandey should have been named as captain of India for SL tour says Dodda Ganesh

ವಿರಾಟ್ ಕೊಹ್ಲಿ ನೇತೃತ್ವದ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಬಿಸಿಸಿಐ ಪ್ರತ್ಯೇಕ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಕಾರಣ ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳಲಿರುವ ತಂಡಕ್ಕೆ ಶಿಖರ್ ಧವನ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಘೋಷಣೆ ಮಾಡಿತು.

WTC Final: ಭಾರತ ತಂಡದ ಈ ಮೂವರಿಂದ ಗೆಲುವು ಖಚಿತ ಎಂದ ವಿರೇಂದ್ರ ಸೆಹ್ವಾಗ್

ಈ ತಂಡದಲ್ಲಿ ಕನ್ನಡಿಗ ಮನೀಷ್ ಪಾಂಡೆ ಕೂಡ ಅವಕಾಶವನ್ನು ಪಡೆದುಕೊಂಡಿದ್ದು ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯನ್ನಾಡಲು ಶ್ರೀಲಂಕಾಗೆ ಹಾರಲಿದ್ದಾರೆ. ಆದರೆ ಶ್ರೀಲಂಕಾ ಸರಣಿ ಕೈಗೊಳ್ಳಲಿರುವ ಭಾರತ ತಂಡಕ್ಕೆ ಶಿಖರ್ ಧವನ್ ನಾಯಕ ಮತ್ತು ಭುವನೇಶ್ವರ್ ಕುಮಾರ್ ಉಪನಾಯಕ ಎಂದು ಘೋಷಣೆ ಮಾಡಿರುವ ಬಿಸಿಸಿಐ ಆಯ್ಕೆಯ ವಿರುದ್ಧ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

WTC Finalನಲ್ಲಿ ಮೊಹಮ್ಮದ್ ಸಿರಾಜ್‌ಗೆ ಅವಕಾಶ ಸಿಗುವುದಿಲ್ಲ ಎನ್ನುತ್ತಿವೆ ಈ 3 ಕಾರಣಗಳು!

'ತಂಡದ ಹಿರಿಯರಿಗೆ ನಾಯಕ ಸ್ಥಾನ ಕೊಡುವುದಾದರೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡಕ್ಕೆ ಮನೀಷ್ ಪಾಂಡೆ ನಾಯಕನಾಗಬೇಕಿತ್ತು. ಉಪನಾಯಕನ ಸ್ಥಾನಕ್ಕೆ ಆಯ್ಕೆಯಾಗಿರುವ ಭುವನೇಶ್ವರ್ ಕುಮಾರ್ ಫಿಟ್‌ನೆಸ್ ಹೇಗಿದೆ? ಮನೀಷ್ ಪಾಂಡೆ ದೊಡ್ಡಮಟ್ಟದ ಅನುಭವವನ್ನು ಹೊಂದಿದ್ದು ಆಟಗಾರರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ವಯಸ್ಸಿನ ಆಧಾರದ ಮೇಲೆ ನಾಯಕತ್ವವನ್ನು ನೀಡುವುದಾದರೆ ಶಿಖರ್ ಧವನ್ ಬದಲು ಮನೀಷ್ ಪಾಂಡೆಗೆ ನಾಯಕತ್ವವನ್ನು ನೀಡಬೇಕು' ಎಂದು ದೊಡ್ಡ ಗಣೇಶ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮನೀಷ್ ಪಾಂಡೆಗೆ ಸರಿಯಾದ ಅವಕಾಶಗಳಿಲ್ಲ ಎಂದಿದ್ದ ಕೋಚ್

ಮನೀಷ್ ಪಾಂಡೆಗೆ ಸರಿಯಾದ ಅವಕಾಶಗಳಿಲ್ಲ ಎಂದಿದ್ದ ಕೋಚ್

ಇತ್ತೀಚೆಗಷ್ಟೇ ಮನೀಷ್ ಪಾಂಡೆಯ ಕೋಚ್ ಇರ್ಫಾನ್ ಸೇಠ್ ಕೂಡ ಮನೀಷ್ ಪಾಂಡೆಗೆ ಟೀಮ್ ಇಂಡಿಯಾದಲ್ಲಿ ಸರಿಯಾದ ಅವಕಾಶಗಳು ಸಿಗುತ್ತಿಲ್ಲ ಎಂಬುದರ ಕುರಿತು ಮಾತನಾಡಿದರು. ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ಪಟ್ಟಿಯಲ್ಲಿ ಮನೀಷ್ ಪಾಂಡೆ ಹೆಸರು ಕಂಡುಬಂದ ನಂತರ ಮಾತನಾಡಿದ ಇರ್ಫಾನ್ ಸೇಠ್ ಕೇವಲ ತಂಡಕ್ಕೆ ಆಯ್ಕೆ ಮಾಡಿಕೊಳ್ಳುವುದು ಮಾತ್ರವಲ್ಲದೇ ಉತ್ತಮ ಅವಕಾಶಗಳನ್ನು ಮನೀಷ್ ಪಾಂಡೆಗೆ ನೀಡಬೇಕು ಆತ ಮುಂಬರುವ ದಿನಗಳಲ್ಲಿ ಭಾರತದ ಸೂಪರ್ ಸ್ಟಾರ್ ಆಗುವಂತಹ ಆಟಗಾರ ಎಂದು ಹೇಳಿದ್ದರು.

ಮನೀಷ್ ಪಾಂಡೆಗೆ ಧವನ್ ಮತ್ತು ಭುವನೇಶ್ವರ್‌ಗಿಂತ ಅನುಭವ ಹೆಚ್ಚು

ಮನೀಷ್ ಪಾಂಡೆಗೆ ಧವನ್ ಮತ್ತು ಭುವನೇಶ್ವರ್‌ಗಿಂತ ಅನುಭವ ಹೆಚ್ಚು

ಇನ್ನು ಮನೀಷ್ ಪಾಂಡೆಗೆ ನಾಯಕ ಪಟ್ಟ ಸಿಗಬೇಕೆಂದು ಮಾತನಾಡಿರುವ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಶ್ರೀಲಂಕಾ ಪ್ರವಾಸಕ್ಕೆ ನಾಯಕನಾಗಿ ಘೋಷಿಸಲ್ಪಟ್ಟಿರುವ ಶಿಖರ್ ಧವನ್ ಮತ್ತು ಉಪನಾಯಕನಾಗಿ ಘೋಷಿಸಲ್ಪಟ್ಟಿರುವ ಭುವನೇಶ್ವರ್ ಕುಮಾರ್‌‌ಗಿಂತ ಮನೀಷ್ ಪಾಂಡೆಗೆ ಅನುಭವ ಹೆಚ್ಚಿದೆ ಎಂದು ಹೇಳಿದ್ದಾರೆ.

ಎಬಿಡಿ ಆರ್‌ಸಿಬಿಗೆ, ಮನೀಷ್ ಪಾಂಡೆ ಟೀಮ್ ಇಂಡಿಯಾಗೆ

ಎಬಿಡಿ ಆರ್‌ಸಿಬಿಗೆ, ಮನೀಷ್ ಪಾಂಡೆ ಟೀಮ್ ಇಂಡಿಯಾಗೆ

ಇನ್ನೂ ಮುಂದುವರಿದು ಮಾತನಾಡಿರುವ ದೊಡ್ಡ ಗಣೇಶ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಬಿ ಡಿವಿಲಿಯರ್ಸ್ ಆಡುವ ರೀತಿ ಟೀಮ್ ಇಂಡಿಯಾಗೆ ಮನೀಷ್ ಪಾಂಡೆ ಆಡಬೇಕು. ನಾಲ್ಕನೇ ಕ್ರಮಾಂಕದಲ್ಲಿ ಮನೀಷ್ ಪಾಂಡೆ ಅತ್ಯದ್ಭುತ ಪ್ರದರ್ಶನವನ್ನು ನೀಡಲಿದ್ದು ಶ್ರೀಲಂಕಾ ಪ್ರವಾಸದಲ್ಲಿ ಒಳ್ಳೆಯ ಆಟವನ್ನು ಆಡುವುದರ ಮೂಲಕ ಟಿ ಟ್ವೆಂಟಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲಿ ಎಂದು ದೊಡ್ಡ ಗಣೇಶ್ ಆಶಿಸಿದ್ದಾರೆ.

Story first published: Sunday, June 13, 2021, 23:28 [IST]
Other articles published on Jun 13, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+