
1. ಚೆಂಡಿಗೆ ಎಂಜಲು ಸವರುವ ಹಾಗಿಲ್ಲ
ಕೊವಿಡ್ ಬರುವುದಕ್ಕೂ ಮುಂಚಿನ ಪಂದ್ಯಗಳನ್ನು ವೀಕ್ಷಿಸಿದರೆ ಆ ಪಂದ್ಯಗಳಲ್ಲಿ ಬೌಲರ್ ಹಾಗೂ ಫೀಲ್ಡರ್ಗಳು ಚೆಂಡು ಹೊಳೆಯುವ ಹಾಗೆ ಕಾಣುವಂತೆ ಮಾಡಲು ತಮ್ಮ ಎಂಜಲನ್ನು ಚೆಂಡಿಗೆ ಸವರುತ್ತಿದ್ದ ದೃಶ್ಯಗಳನ್ನು ಕಾಣಬಹುದು. ಆದರೆ, ಕೊರೊನಾ ವೈರಸ್ ಬಂದ ನಂತರ ಚೆಂಡಿಗೆ ಎಂಜಲು ಹಾಕುವ ನಿಯಮಕ್ಕೆ ತಾತ್ಕಾಲಿಕವಾಗಿ ಹಾಕಲಾಗಿದ್ದ ಬ್ರೇಕ್ ಇದೀಗ ಶಾಶ್ವತ ನಿಯಮವಾಗಿ ಬದಲಾಗಿದೆ. ಹೌದು, ಎಂಸಿಸಿ ಘೋಷಿಸಿರುವ ನೂತನ ನಿಯಮದ ಪ್ರಕಾರ ಯಾವುದೇ ಆಟಗಾರ ಕೂಡ ಚೆಂಡಿಗೆ ಎಂಜಲನ್ನು ಸವರುವ ಹಾಗಿಲ್ಲ ಹಾಗೂ ಈ ಚಟುವಟಿಕೆಯನ್ನು ಚೆಂಡಿನ ಪರಿಸ್ಥಿತಿ ಬದಲಾಯಿಸಲು ಬಳಸುವ ಅಕ್ರಮ ವಿಧಾನ ಎಂದು ಪರಿಗಣಿಸಲಾಗುವುದು. ಹೀಗಾಗಿ ಅಕ್ಟೋಬರ್ ೧ರಿಂದ ನಡೆಯಲಿರುವ ಪಂದ್ಯಗಳಲ್ಲಿ ಯಾವುದೇ ಆಟಗಾರ ಕೂಡ ಚೆಂಡಿಗೆ ಎಂಜಲನ್ನು ಸವರುವ ಹಾಗಿಲ್ಲ.

2. ನಾನ್-ಸ್ಟ್ರೈಕ್ ಬ್ಯಾಟ್ಸ್ಮನ್ನ್ನು ರನ್ಔಟ್ ಮಾಡುವ ಹಾಗಿಲ್ಲ
ನಾನ್ ಸ್ಟ್ರೈಕ್ ಎಂಡ್ನಲ್ಲಿರುವ ಬ್ಯಾಟ್ಸ್ಮನ್ನ್ನು ಬಾಲನ್ನು ಎಸೆಯುವ ಮುನ್ನವೇ ಬೌಲರ್ ರನ್ಔಟ್ ಮಾಡುವ ಯತ್ನ ಈ ಹಿಂದೆ ಸಾಕಷ್ಟು ದೊಡ್ಡ ಮಟ್ಟದ ವಿವಾದಗಳನ್ನು ಹುಟ್ಟುಹಾಕಿತ್ತು. ಈ ವಿವಾದಕ್ಕೆ ಇದೀಗ ಫುಲ್ಸ್ಟಾಪ್ ಇಟ್ಟಿರುವ ಎಂಸಿಸಿ ಈ ರೀತಿಯ ಮಂಕಡ್ ರನ್ಔಟ್ ಇನ್ನುಮುಂದೆ ಅಕ್ರಮವಲ್ಲ ಬದಲಾಗಿ ಅದೊಂದು ಔಟ್ ಎಂದು ಬದಲಾಯಿಸಿದೆ. ಈ ಮೂಲಕ ವಿಕೆಟ್ ತೆಗೆಯಲು ಮಾಡುವ ಬೌಲರ್ ಬದಲು ಆತುರವಾಗಿ ರನ್ ಕದಿಯಲು ಯತ್ನಿಸುವ ಬ್ಯಾಟ್ಸ್ಮನ್ನದ್ದೇ ತಪ್ಪು ಎಂಬಂತೆ ಎಂಸಿಸಿ ಬದಲಾವಣೆ ತಂದಿದೆ.

3. ನೂತನ ಬ್ಯಾಟ್ಸ್ಮನ್ಗೆ ಸ್ಟ್ರೈಕ್
ಇನ್ನು ಈ ಹಿಂದೆ ಬ್ಯಾಟ್ಸ್ಮನ್ ಓರ್ವ ಔಟ್ ಆದರೆ ಮತ್ತೋರ್ವ ಬ್ಯಾಟ್ಸ್ಮನ್ ರನ್ ಓಡಿದ್ದರೆ ಆತ ಸ್ಟ್ರೈಕ್ ತೆಗೆದುಕೊಳ್ಳಬಹುದು ಎಂಬ ನಿಯಮವಿತ್ತು. ಅದರಲ್ಲಿಯೂ ಕ್ಯಾಚ್ ಔಟ್ ಆದ ಸಂದರ್ಭದಲ್ಲಿ ಈ ರೀತಿ ಸ್ಟ್ರೈಕ್ ಬದಲಾವಣೆ ಹೆಚ್ಚಾಗಿ ಆಗುತ್ತಿತ್ತು. ಆದರೆ ಇದೀಗ ಈ ನಿಯಮಕ್ಕೆ ಬದಲಾವಣೆ ತಂದಿರುವ ಎಂಸಿಸಿ ಬ್ಯಾಟ್ಸ್ಮನ್ ಓರ್ವ ಔಟ್ ಆದ ನಂತರ ಬರುವ ಹೊಸ ಬ್ಯಾಟ್ಸ್ಮನ್ ಬ್ಯಾಟಿಂಗ್ ಮಾಡಬೇಕು ಹಾಗೂ ನಾನ್ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ ರನ್ ಓಡಿದ್ದರೂ ಸಹ ಬ್ಯಾಟಿಂಗ್ ಮಾಡಬಾರದು ಎಂದಿದೆ. ಈ ನಿಯಮದಿಂದ ಪಂದ್ಯದ ಅಂತಿಮ ನಿರ್ಣಾಯಕ ಹಂತದಲ್ಲಿ ಬೌಲಿಂಗ್ ವಿಭಾಗಕ್ಕೆ ಹೆಚ್ಚು ಅನುಕೂಲವಾಗಲಿದೆ.


Click it and Unblock the Notifications
