2024ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ರಿವರ್ಸ್ ಸ್ವಿಂಗ್ ಮಾಡಿದ್ದಕ್ಕಾಗಿ ಭಾರತೀಯ ವೇಗಿ ಅರ್ಶ್ದೀಪ್ ಸಿಂಗ್ ಅವರನ್ನು ಪ್ರಶ್ನಿಸಿದ್ದ ಪಾಕಿಸ್ತಾನ ತಂಡದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ ನಡೆಸಿದ್ದಾರೆ.
ಟಿ20 ವಿಶ್ವಕಪ್ 2024ರ ಸಮಯದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಂಜಮಾಮ್-ಉಲ್-ಹಕ್ ಅವರು ಭಾರತೀಯ ವೇಗಿ ಅರ್ಶ್ದೀಪ್ ಸಿಂಗ್ ವಿರುದ್ಧ ವಿಚಿತ್ರವಾದ ಕಾಮೆಂಟ್ ಮಾಡಿದರು. ಎಡಗೈ ವೇಗಿ ಬಾಲ್ ಟ್ಯಾಂಪರಿಂಗ್ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದರು.

ಸೂಪರ್ 8ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ಪಂದ್ಯದಲ್ಲಿ 14 ಅಥವಾ 15ನೇ ಓವರ್ನಲ್ಲಿ ಬೌಲರ್ ರಿವರ್ಸ್ ಸ್ವಿಂಗ್ ಮಾಡುವುದು ಕಠಿಣವಾಗಿದೆ ಎಂದು ಪಂದ್ಯದ ನಂತರ ಇಂಜಮಾಮ್-ಉಲ್-ಹಕ್ ಸಂದೇಹಪಟ್ಟಿದ್ದರು.
ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರೂ, ಡೇವಿಡ್ ವಾರ್ನರ್, ಟಿಮ್ ಡೇವಿಡ್ ಮತ್ತು ಮ್ಯಾಥ್ಯೂ ವೇಡ್ ಅವರ ಮೂರು ನಿರ್ಣಾಯಕ ವಿಕೆಟ್ಗಳನ್ನು ಪಡೆದಿದ್ದಕ್ಕಾಗಿ ಅರ್ಶ್ದೀಪ್ ಸಿಂಗ್ ಪ್ರಶಂಸೆ ಗಳಿಸಿದರು.

ಅರ್ಶ್ದೀಪ್ ಸಿಂಗ್ ಅವರ ಸ್ಪೆಲ್ನ ಕಾರಣದಿಂದಾಗಿ ಭಾರತ ತಂಡ 205 ರನ್ಗಳನ್ನು ಯಶಸ್ವಿಯಾಗಿ ರಕ್ಷಿಸಿತು ಮತ್ತು 24 ರನ್ಗಳಿಂದ ಗೆದ್ದಿತು. ಶುಭಂಕರ್ ಮಿಶ್ರಾ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡುವಾಗ ಮೊಹಮ್ಮದ್ ಶಮಿ ಮಾತನಾಡಿದರು.
"ನಾನು ಬಾಲ್ ಕಟ್ ಮಾಡಲು ಸಾಧನವಿದೆಯೇ ಅಥವಾ ಇಲ್ಲವೇ ಎಂದು ತೋರಿಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದೇನ," ಎಂದು ಮೊಹಮ್ಮದ್ ಶಮಿ ತಿಳಿಸಿದರು.

ಆಸ್ಟ್ರೇಲಿಯಾ ವಿರುದ್ಧದ ಬೌಲಿಂಗ್ ಉಲ್ಲೇಖಿಸುತ್ತಾ ಇಂಜಮಾಮ್-ಉಲ್-ಹಕ್ ಹೀಗೆ ಹೇಳಿದರು, ""ಅರ್ಶ್ದೀಪ್ ಸಿಂಗ್ 15ನೇ ಓವರ್ ಬೌಲಿಂಗ್ ಮಾಡುವಾಗ, ಚೆಂಡು ರಿವರ್ಸ್ ಆಗುತ್ತಿತ್ತು. ರಿವರ್ಸ್ ಸ್ವಿಂಗ್ಗಾಗಿ ಹೊಸ ಚೆಂಡಿನೊಂದಿಗೆ ಇದು ತುಂಬಾ ಮುಂಚೆಯೇ? ಇದರರ್ಥ ಚೆಂಡು ರಿವರ್ಸ್ಗೆ ಸಿದ್ಧವಾಗಿದೆ''.
"ಅಂಪೈರ್ಗಳು ಈ ವಿಷಯಗಳನ್ನು ನೋಡಲು ತಮ್ಮ ಕಣ್ಣುಗಳನ್ನು ತೆರೆದಿರಬೇಕು... ಅದು ಪಾಕಿಸ್ತಾನಿ ಬೌಲರ್ಗಳಾಗಿದ್ದರೆ (ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡುವುದು) ಇದು ದೊಡ್ಡ ಸಮಸ್ಯೆಯಾಗುತ್ತಿತ್ತು. ನಮಗೆ ರಿವರ್ಸ್ ಸ್ವಿಂಗ್ ಚೆನ್ನಾಗಿ ತಿಳಿದಿದೆ ಮತ್ತು ಅರ್ಶ್ದೀಪ್ ಸಿಂಗ್ 15ನೇ ಓವರ್ನಲ್ಲಿ ಬಂದು ಚೆಂಡನ್ನು ರಿವರ್ಸ್ ಮಾಡಲು ಪ್ರಾರಂಭಿಸಿದರೆ, ಇದರರ್ಥ ಮೊದಲು ಕೆಲವು ಗಂಭೀರವಾದ ಕೆಲಸವನ್ನು ಮಾಡಲಾಗಿದೆ," ಎಂದು ಇಂಜಮಾಮ್-ಉಲ್-ಹಕ್ ಆರೋಪಿಸಿದ್ದರು.
"ಇಂಜಮಾಮ್ ಭಾಯ್ ಅವರಿಗೆ ನಾನು ಒಂದೇ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಅದೇ ಕೆಲಸ ಪಾಕಿಸ್ತಾನ ಬೌಲರ್ಗಳು ಮಾಡಿದರೆ ಅದು ಬಾಲ್ ಟ್ಯಾಂಪರಿಂಗ್ ಅಲ್ಲವೇ?, ಪಾಕಿಸ್ತಾನ ವಿರುದ್ಧ ಉತ್ತಮ ಪ್ರದರ್ಶನ ನೀಡಿದವರು ಅವರ ಗುರಿಯಾಗುತ್ತಾರೆ. ಭಾರತ ಮತ್ತು ಪಾಕಿಸ್ತಾನಗಳು ಸಾಂಪ್ರದಾಯಿಕ ಎದುರಾಳಿಗಳಾಗಿವೆ," ಎಂದು ಮೊಹಮ್ಮದ್ ಶಮಿ ತಿರುಗೇಟು ನೀಡಿದರು.
ವಿಲಕ್ಷಣವಾದ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಮರುಳು ಮಾಡಲು ಪ್ರಯತ್ನಿಸಬೇಡಿ ಎಂದು ಮೊಹಮ್ಮದ್ ಶಮಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗರಿಗೆ ಮನವಿ ಮಾಡಿದರು.
ಪಾಕಿಸ್ತಾನದ ಲೆಜೆಂಡರಿ ವೇಗಿ ವಾಸೀಮ್ ಅಕ್ರಂ ಅವರನ್ನು ಸಹ ಬೆಂಬಲಿಸಿದರು. ಅವರು ಕಳೆದ ವರ್ಷ ಚೆಂಡುಗಳಿಗೆ ಸಾಧನಗಳಿಲ್ಲ ಮತ್ತು ಯಾವುದೇ ಅನಗತ್ಯ ಪ್ರಯೋಜನವನ್ನು ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.
"ಮಾಜಿ ಆಟಗಾರರಾಗಿದ್ದರೂ ನೀವು ಈ ರೀತಿ ಹೇಳಬಹುದು ಎಂದು ನಾನು ನಿರೀಕ್ಷಿಸುವುದಿಲ್ಲ. ಅಂಪೈರ್ಗಳು ನಿಮಗೆ ಚೆಂಡನ್ನು ಹೇಗೆ ನೀಡುತ್ತಾರೆ ಮತ್ತು ಅದರಲ್ಲಿ ಯಾವುದೇ ಸಾಧನ ಇಡಲು ಸಾಧ್ಯವಿಲ್ಲ ಎಂದು ವಾಸಿಮ್ ಅಕ್ರಂ ಕೂಡ ಹೇಳಿದ್ದಾರೆ. ಈ ರೀತಿಯ ಕಾರ್ಟೂನ್ಗಿರಿ ಒಳ್ಳೆಯದಲ್ಲ. ಈ ಹೇಳಿಕೆಗಳು ಜನರನ್ನು ಮೂರ್ಖರನ್ನಾಗಿಸಲು ಇವೆ," ಎಂದು ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರತಿಕ್ರಿಯಿಸಿದರು.
ಅರ್ಶ್ದೀಪ್ ಸಿಂಗ್ ಭಾರತದ ಅಸಾಧಾರಣ ಬೌಲರ್ ಆಗಿದ್ದರು ಮತ್ತು 7.61ರ ಎಕಾನಮಿ ದರದಲ್ಲಿ ಆಡಿದ 8 ಪಂದ್ಯಗಳಿಂದ 17 ವಿಕೆಟ್ಗಳೊಂದಿಗೆ ಪಂದ್ಯಾವಳಿಯ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುಗಿಸಿದರು. ಯುಎಸ್ಎ ವಿರುದ್ಧ ನಾಲ್ಕು ವಿಕೆಟ್ ಕಬಳಿಸಿದ್ದರು.