
ಎಂಎಸ್ ಧೋನಿ ಕ್ರೀಸ್ನಲ್ಲಿರುವವರೆಗೆ ಪಂದ್ಯವು ಮುಗಿಯುವುದಿಲ್ಲ
ವೀರೇಂದ್ರ ಸೆಹ್ವಾಗ್ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಾಯಕ ಎಂಎಸ್ ಧೋನಿಯೊಂದಿಗೆ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಟ್ವೀಟ್ ಮಾಡಿ, "ಫುಲ್ ಸ್ಟಾಪ್ ಬರದಿರುವವರೆಗೆ, ವಾಕ್ಯವು ಪೂರ್ಣಗೊಳ್ಳುವುದಿಲ್ಲ. ಎಂಎಸ್ ಧೋನಿ ಕ್ರೀಸ್ನಲ್ಲಿರುವವರೆಗೆ ಪಂದ್ಯವು ಮುಗಿಯುವುದಿಲ್ಲ, ಇದು ಪೂರ್ಣಗೊಂಡಿದೆ. ಎಲ್ಲಾ ತಂಡಗಳಿಗೂ ಧೋನಿಯಂತಹ ವ್ಯಕ್ತಿಯನ್ನು ಹೊಂದುವ ಭಾಗ್ಯವಿಲ್ಲ. ಒಬ್ಬ ವ್ಯಕ್ತಿ ಮತ್ತು ಆಟಗಾರನ ರತ್ನ ಎಂಎಸ್ ಧೋನಿಗೆ ಜನ್ಮದಿನದ ಶುಭಾಶಯಗಳು. ಓಂ ಹೆಲಿಕಾಪ್ಟರಾಯ ನಮಃ," ಎಂದು ಉಲ್ಲೇಖಿಸಿದ್ದಾರೆ.

ಜೀವನದ ಪ್ರತಿಯೊಂದು ಹಂತದಲ್ಲೂ ನನ್ನ ದೊಡ್ಡ ಬೆಂಬಲಿಗ
"ನನ್ನ ದೊಡ್ಡ ಸಹೋದರನಿಗೆ ಜನ್ಮದಿನದ ಶುಭಾಶಯಗಳು. ಜೀವನದ ಪ್ರತಿಯೊಂದು ಹಂತದಲ್ಲೂ ನನ್ನ ದೊಡ್ಡ ಬೆಂಬಲಿಗ ಮತ್ತು ಮಾರ್ಗದರ್ಶಕನಾಗಿದ್ದಕ್ಕಾಗಿ ಧನ್ಯವಾದಗಳು. ದೇವರು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯಾವಾಗಲೂ ಉತ್ತಮ ಆರೋಗ್ಯವನ್ನು ನೀಡಲಿ ಎಂದು," ಎಂಎಸ್ ಧೋನಿಯ ಆಡುವ 11ರ ಬಳಗದಲ್ಲಿ ಯಾವಾಗಲೂ ಕಾಣಿಸಿಕೊಳ್ಳುತ್ತಿದ್ದ ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.

ಮೆನ್ ಇನ್ ಬ್ಲೂ ತಂಡದ ಅತ್ಯಂತ ಯಶಸ್ವಿ ನಾಯಕ
ಎಂಎಸ್ ಧೋನಿ ಇನ್ನೂ ಮೆನ್ ಇನ್ ಬ್ಲೂ ತಂಡದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿ ಉಳಿದಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು 2011 ಏಕದಿನ ವಿಶ್ವಕಪ್, 2007ರ ಟಿ20 ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ದೊಡ್ಡ ಸಾಧನೆಯು ಸಾರ್ವಕಾಲಿಕ ಅತ್ಯುತ್ತಮ ನಾಯಕ ಎಂಬುದನ್ನು ತಿಳಿಸುತ್ತದೆ.
ಸೀಮಿತ ಓವರ್ಗಳ ಕ್ರಿಕೆಟಿಗರಲ್ಲಿ ಎಲ್ಲಾ ಮೂರು ಐಸಿಸಿ ಪ್ರಶಸ್ತಿಗಳನ್ನು ಗೆದ್ದ ತಂಡವನ್ನು ಮುನ್ನಡೆಸಿದ ಏಕೈಕ ನಾಯಕರಾಗಿದ್ದಾರೆ. ಎಂಎಸ್ ಧೋನಿ ಭಾರತ ಪರ 90 ಟೆಸ್ಟ್, 98 ಟಿ20 ಮತ್ತು 348 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 10,000 ಏಕದಿನ ರನ್ಗಳನ್ನು ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಸುಮಾರು 5,000 ರನ್ಗಳನ್ನು ಗಳಿಸಿದ್ದಾರೆ.


Click it and Unblock the Notifications












