For Quick Alerts
ALLOW NOTIFICATIONS  
For Daily Alerts
 

ಕನ್ನಡಿಗರಿಗೆ ಮಹೇಂದ್ರ ಸಿಂಗ್ ಧೋನಿ ಟಿಪ್ಸ್‌: ಕ್ರೀಡಾ ಸ್ಫೂರ್ತಿ ಮೆರೆದ ಎಂ.ಎಸ್. ಧೋನಿ

ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ತಂಡದ ನಾಯಕ ಎಂ.ಎಸ್​.ಧೋನಿ ಪಂದ್ಯ ಗೆದ್ದ ಬಳಿಕವೂ ಕ್ರೀಡಾ ಸ್ಫೂರ್ತಿ ಮೆರೆದು ಸುದ್ದಿಯಾಗಿದ್ದಾರೆ.

ಕೆ.ಎಲ್​.ರಾಹುಲ್​ ನೇತೃತ್ವದ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಸಿಎಸ್​ಕೆ ವಿರುದ್ಧ 10 ವಿಕೆಟ್​ಗಳ ಅಂತರದಿಂದ ಭಾರೀ ಸೋಲು ಅನುಭವಿಸಿತು. ಈ ಸೋಲಿನ ಆಘಾತವು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಭಾರೀ ಆಘಾತ ಮೂಡಿಸಿತು.

MSD Tips For KL Rahul And Mayank Agarwal: Post Match Interactions

ಈ ಸೋಲಿನ ಆಘಾತದಲ್ಲಿದ್ದ ತಂಡದ ನಾಯಕ ಕೆ.ಎಲ್​.ರಾಹುಲ್​ ಹಾಗೂ ಪ್ರಮುಖ ಬ್ಯಾಟ್ಸ್​ಮನ್​ ಮಾಯಾಂಕ್​ ಅಗರ್ವಾಲ್​ ಅವರನ್ನು ಧೋನಿ ಪಂದ್ಯದ ನಂತರ ಕ್ರೀಡಾಂಗಣದಲ್ಲಿ ಪ್ರತ್ಯೇಕವಾಗಿ ಭೇಟಿಯಾದರು. ಒಂದಷ್ಟು ಹೊತ್ತು ಗಂಭೀರ ಚರ್ಚೆ ನಡೆಸಿದರು. ಈ ವೇಳೆ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಇಬ್ಬರಿಗೂ ಉಪಯುಕ್ತ ಟಿಪ್ಸ್​ ನೀಡಿದರು.

MSD Tips For KL Rahul And Mayank Agarwal: Post Match Interactions

ಒಂದು ತಂಡವಾಗಿ ಪಂಜಾಬ್​ ಹೇಗೆ ಆಡಬೇಕಿತ್ತು?, ಎಲ್ಲಿ ಎಡವಿತು? ಮಾಡಿದ ತಪ್ಪುಗಳೇನು? ಏನು ಮಾಡಿದ್ದರೆ ಏನಾಗುತ್ತಿತ್ತು ಎನ್ನುವ ಬಗ್ಗೆ ಧೋನಿ ಮಾತನಾಡಿದ್ದಾರೆ. ಮುಂದೆ ಇದನ್ನೆಲ್ಲಾ ಯಾವ ರೀತಿ ಸರಿಪಡಿಸಿಕೊಳ್ಳಬಹುದು ಎನ್ನುವುದರ ಕುರಿತು ಟಿಪ್ಸ್​ ನೀಡಿದ್ದಾರೆ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಧೋನಿ ಕರ್ನಾಟಕದ ಪ್ರತಿಭಾವಂತ ಕ್ರಿಕೆಟಿಗರ ಜತೆಗೆ ಸಂಭಾಷಣೆ ನಡೆಸುತ್ತಿರುವ ವೀಡಿಯೋ ವೈರಲ್​ ಆಗಿದೆ. ಐಪಿಎಲ್​ ಟ್ವಿಟ್ಟರ್​ನಲ್ಲಿ ಈ ವಿಡಿಯೋವನ್ನು ಪ್ರಕಟಿಸಲಾಗಿದೆ. ಸದ್ಯ ನಿರಂತರ ಸೋಲಿಗೆ ಕಾರಣವಾಗಿರುವ ಕಿಂಗ್ಸ್‌ ಇಲೆವೆನ್ ಪಂಜಾಬ್‌ ಚಿಂತೆಗೆ ಕಾರಣವಾಗಿದೆ.

Story first published: Tuesday, October 6, 2020, 9:43 [IST]
Other articles published on Oct 6, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+