
ಮಿಯಾಂದಾದ್ ಕಿಡಿ ಕಾರಲು ಕಾರಣ
ಮಿಯಾಂದಾದ್ ಭಾರತದ ಮೇಲೆ ಕಿಡಿ ಕಾರಲು ಮುಖ್ಯ ಕಾರಣ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಭಾರತದಾದ್ಯಂತ ಪ್ರತಿಭಟನೆ ನಡೆಯುತ್ತಿರುವುದು. ಹೀಗಾಗಿ ಪಾಕಿಸ್ಥಾನಕ್ಕೆ ಉಳಿದ ರಾಷ್ಟ್ರಗಳು ಪ್ರವಾಸ ಕೈಗೊಳ್ಳದಂತೆ ನಿರ್ಬಂಧ ಹೇರಿದಂತೆ ಭಾರತದ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಮಿಯಾಂದಾದ್ ಐಸಿಸಿಯನ್ನು ಕೇಳಿಕೊಂಡಿದ್ದಾರೆ.

ಭಾರತವನ್ನು ಐಸಿಸಿ ಬಹಿಷ್ಕರಿಸಬೇಕು
'ಭಾರತದಲ್ಲಿ ಸದ್ಯ ಏನು ನಡೆಯುತ್ತಿದೆ ಎಂಬುದನ್ನು ಜನ ಅರಿತುಗೊಳ್ಳಬೇಕು. ವಿದೇಶಿ ತಂಡಗಳು ಭಾರತಕ್ಕೆ ಪ್ರವಾಸ ಕೈಗೊಳ್ಳುವುದನ್ನು ಐಸಿಸಿ ಬಹಿಷ್ಕರಿಸಬೇಕೆಂದು ಬಯಸುತ್ತೇನೆ,' ಎಂದು ಪಾಕ್ಪ್ಯಾಶನ್.ಕಾಮ್ನಲ್ಲಿ ಹಾಕಿರುವ ವಿಡಿಯೋದಲ್ಲಿ ಮಿಯಾಂದಾದ್ ಹೇಳಿಕೊಂಡಿದ್ದಾರೆ.

ಯಾರಿಗೂ ಭಾರತ ಸುರಕ್ಷಿತ ರಾಷ್ಟ್ರವಲ್ಲ
ವಿಡಿಯೋದಲ್ಲಿ ಮಾತನಾಡುತ್ತ ಮಿಯಾಂದಾದ್, 'ಈಗ ಪಾಕಿಸ್ತಾನವಲ್ಲ; ಪ್ರವಾಸಿಗರಿಗೆ ಅಥವಾ ಭೇಟಿ ನೀಡಲಿರುವ ಯಾರಿಗೂ ಭಾರತ ಸುರಕ್ಷಿತ ರಾಷ್ಟ್ರವಲ್ಲ. ಮನುಷ್ಯರಾಗಿ, ಕ್ರೀಡಾಪಟುಗಳಾಗಿ ನಾವೂ ಅಲ್ಲಿನ ಪರಿಸ್ಥಿತಿಯನ್ನು, ಕಾಯ್ದೆ ತರುತ್ತಿರುವವರನ್ನು ಖಂಡಿಸಬೇಕು,' ಎಂದಿದ್ದಾರೆ.

ಭಾರತವನ್ನು ಇಡೀ ಜಗತ್ತು ನೋಡುತ್ತಿದೆ
'ಅಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಇಡೀ ಜಗತ್ತು ನೋಡುತ್ತಿದೆ ಮತ್ತು ಮಾತನಾಡುತ್ತಿದೆ. ಪಾಕಿಸ್ತಾನದ ಪರವಾಗಿ ನಾನು ಮಾತನಾಡುತ್ತಿದ್ದೇನೆ, ಅದೇನೆಂದರೆ; ಐಸಿಸಿಯು ಭಾರತದೊಂದಿಗೆ ಎಲ್ಲಾ ಕ್ರೀಡಾ ಸಂಬಂಧಗಳನ್ನು ಸ್ಥಗಿತಗೊಳಿಸಬೇಕು. ಅವರ ವಿರುದ್ಧ ಎಲ್ಲಾ ದೇಶಗಳು ಕ್ರಮ ಕೈಗೊಳ್ಳಬೇಕು,' ಎಂದು ಮಿಯಾಂದಾದ್ ವೀಡಿಯೋದಲ್ಲಿ ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications












