ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 32.1 ಕೋಟಿ ರೂಪಾಯಿಗಳ ದೊಡ್ಡ ಮೊತ್ತದ ಪರ್ಸ್ನೊಂದಿಗೆ ಮುಂಬರುವ 2024ರ ಐಪಿಎಲ್ ಆವೃತ್ತಿಗಾಗಿ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿಗೆ ಹೋಗಲಿದೆ.
ಕಳೆದ ಮೆಗಾ ಹರಾಜಿನಲ್ಲಿ 16.25 ಕೋಟಿ ರೂ.ಗಳಿಗೆ ಖರೀದಿಯಾಗಿದ್ದ ಇಂಗ್ಲೆಂಡ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಸಿಎಸ್ಕೆ ಮಿನಿ ಹರಾಜಿಗೆ ಮುಂಚಿತವಾಗಿ ಬಿಡುಗಡೆ ಮಾಡಿತು.

ಎಂಎಸ್ ಧೋನಿ ನಾಯಕತ್ವದ ಸಿಎಸ್ಕೆ ತಂಡವು ಈ ಬಾರಿಯ ಮಿನಿ ಹರಾಜಿನಲ್ಲಿ ಕೆಲವು ಉತ್ತಮ ಬೌಲರ್ಗಳನ್ನು ಖರೀದಿಸಲು ಎದುರು ನೋಡುತ್ತದೆ. ಏಕೆಂದರೆ ಸಿಸಂಡ ಮಗಲಾ, ಡ್ವೈನ್ ಪ್ರಿಟೋರಿಯಸ್ ಅವರಂತಹ ಬೌಲರ್ಗಳನ್ನು ಬಿಡುಗಡೆ ಮಾಡಿದೆ.
17ನೇ ಆವೃತ್ತಿಯ ಐಪಿಎಲ್ಗೆ ಮುನ್ನ ಎಲ್ಲಾ ತಂಡಗಳು ತಮ್ಮ ತಂಡವನ್ನು ಬಲಪಡಿಸಲು ಸಜ್ಜಾಗುತ್ತಿದ್ದಂತೆ, ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಸಿಎಸ್ಕೆ ತಂಡಕ್ಕೆ ಕೆಲವು ಸಲಹೆಯನ್ನು ನೀಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಬಿಡುಗಡೆ ಮಾಡಿದ ವೇಗಿ ಹರ್ಷಲ್ ಪಟೇಲ್ ಅವರನ್ನು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಖರೀದಿಸಬೇಕು ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

"ಸಿಎಸ್ಕೆ ನಿಯಮಿತವಾಗಿ ಗಾಯಗೊಳ್ಳುವ ದೀಪಕ್ ಚಹಾರ್ನಂತಹ ಹಲವು ವೇಗದ ಬೌಲರ್ಗಳನ್ನು ಹೊಂದಿದ್ದಾರೆ. ಆದರೂ, ಸಿಎಸ್ಕೆ ದೀಪಕ್ ಚಹಾರ್ನಲ್ಲಿ ಹೆಚ್ಚಿನ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಆತ ಫಿಟ್ ಮತ್ತು ಲಭ್ಯವಿಲ್ಲದಿದ್ದರೆ, ಸಿಎಸ್ಕೆ ಗೊಂದಲಕ್ಕೊಳಗಾಗಬಹುದು".
"ಹೀಗಾಗಿ, ಅವರಿಗೆ ಬೇಕಾಗಿರುವುದು, ಬಹುಶಃ ಹರ್ಷಲ್ ಪಟೇಲ್ ಅವರಂತಹ ಬೌಲರ್. ಆರ್ಸಿಬಿ ಕೂಡ ಅವರನ್ನು ಪಡೆಯಲು ಬಿಡ್ ಮಾಡಲಿದೆ. ಆದ್ದರಿಂದ ಕೇವಲ ಐದು ಗಂಟೆಗಳ ಸಣ್ಣ ರೈಡ್ನೊಂದಿಗೆ ಹರ್ಷಲ್ ಪಟೇಲ್ ಅವರನ್ನು ಪಡೆಯಿರಿ ಮತ್ತು ಅವರನ್ನು ಸಿಎಸ್ಕೆಗೆ ಕರೆದುಕೊಳ್ಳಿ," ಎಂದು ಇರ್ಫಾನ್ ಪಠಾಣ್ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೇಳಿದ್ದಾರೆ.
ಅಜಿಂಕ್ಯ ರಹಾನೆಯನ್ನು ಸಂಪೂರ್ಣವಾಗಿ ಅವಲಂಬಿಸಲಾಗದ ಕಾರಣ ಸಿಎಸ್ಕೆ ತಮ್ಮ ಅಗ್ರ ಕ್ರಮಾಂಕದಲ್ಲಿ ಉತ್ತಮ ಬ್ಯಾಟರ್ ಪಡೆಯುವ ಅಗತ್ಯವಿದೆ ಎಂದು ಇರ್ಫಾನ್ ಪಠಾಣ್ ತಿಳಿಸಿದರು.
"ಅಜಿಂಕ್ಯ ರಹಾನೆ ಅವರು ವಾಂಖೆಡೆ ಪಿಚ್ನಲ್ಲಿ ಸಿಎಸ್ಕೆ ತಂಡದ ಪರ ಆಡಲು ಪ್ರಾರಂಭಿಸಿದರು. ಅದು ಅವರ ಮೊದಲ ಪಂದ್ಯ ಮತ್ತು ಅಲ್ಲಿ ನಿಜವಾಗಿಯೂ ಉತ್ತಮವಾಗಿ ಆಡಿದರು. ಆ ಬಳಿಕ ತಮ್ಮ ವೇಗವನ್ನು ಮುಂದುವರೆಸಿದರು".
"ಆದರೆ ನಿಧಾನಗತಿಯ ಪಿಚ್ಗಳಲ್ಲಿ ರಹಾನೆ ಸ್ವಲ್ಪ ನಿಧಾನಗತಿಯಾಗುತ್ತಾರೆ ಎಂದು ಅವರು ತಿಳಿದಿದ್ದಾರೆ. ಆದ್ದರಿಂದ ಸಿಎಸ್ಕೆ ರಹಾನೆಗೆ ಬ್ಯಾಕ್ಅಪ್ ಹೊಂದಲು ಬಯಸುತ್ತಾರೆ. ಎಂಎಸ್ ಧೋನಿ ತಮ್ಮ ಉತ್ತುಂಗ ಫಾರ್ಮ್ನಲ್ಲಿಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು ಮತ್ತು ಅವರು ನಿಯಮಿತವಾಗಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು," ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟರು.
"ಎಲ್ಲರೂ ಎಂಎಸ್ ಧೋನಿ ಬ್ಯಾಟಿಂಗ್ ಮಾಡಬೇಕೆಂದು ಬಯಸಿದ್ದರು, ಆದರೆ ಹೆಚ್ಚು ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೆ, ಸಿಎಸ್ಕೆಗೆ ಖಂಡಿತವಾಗಿಯೂ ಅಂಬಟಿ ರಾಯುಡು ಅವರ ಬದಲಿ ಆಟಗಾರನ ಅಗತ್ಯವಿದೆ, ಆದರೆ ಅವರಿಗೆ ಉತ್ತಮ ನಂ.3 ಬ್ಯಾಟರ್ ಕೂಡ ಬೇಕು," ಎಂದು ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಹೇಳಿದರು.