For Quick Alerts
ALLOW NOTIFICATIONS  
For Daily Alerts
 

ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ನಿಲುವಿಗೆ ಮಾಜಿ ಪಿಸಿಬಿ ಮುಖ್ಯಸ್ಥ ಗರಂ

2023ರ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಭಾಗವಹಿಸುವಿಕೆಯನ್ನು ನಿರ್ಧರಿಸಲು ಅಲ್ಲಿನ ಸರ್ಕಾರವು ಇತ್ತೀಚೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಇದನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾಜಿ ಅಧ್ಯಕ್ಷ ಖಾಲಿದ್ ಮಹಮೂದ್ ಟೀಕಿಸಿದ್ದಾರೆ.

1999ರಲ್ಲಿ ಪಾಕಿಸ್ತಾನ ತಂಡ ಯಶಸ್ವಿಯಾಗಿ ಭಾರತ ಪ್ರವಾಸ ಕೈಗೊಂಡಾಗ ಪಿಸಿಬಿ ಚುಕ್ಕಾಣಿ ಹಿಡಿದಿದ್ದ ಖಾಲಿದ್ ಮಹಮೂದ್, ಭದ್ರತಾ ಪರಿಶೀಲನೆಗಾಗಿ ಸಮಿತಿ ಸ್ಥಾಪನೆಯಿಂದ ನಿರಾಶೆ ವ್ಯಕ್ತಪಡಿಸಿದ್ದಾರೆ.

ಈ ಸಮಿತಿಯು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಯಾವುದೇ ಪ್ರತಿನಿಧಿಗಳನ್ನು ಒಳಗೊಂಡಿಲ್ಲ. ಪಿಸಿಬಿ ಅಂತಹ ವಿಷಯಗಳಲ್ಲಿ ಪ್ರಮುಖ ಮಧ್ಯಸ್ಥಗಾರವಾಗಬೇಕು ಎಂದು ಸಂದರ್ಶನವೊಂದರಲ್ಲಿ ಹೇಳುವ ಮೂಲಕ ಗಮನಸೆಳೆದಿದ್ದಾರೆ.

World Cup 2023


ಭಾರತದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಭಾಗವಹಿಸುವಿಕೆಯನ್ನು ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾ ಕಪ್‌ಗೆ ಲಿಂಕ್ ಮಾಡುವುದರ ವಿರುದ್ಧ ಖಾಲಿದ್ ಮಹಮೂದ್ ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪಾಕಿಸ್ತಾನ ಪ್ರವಾಸವನ್ನು ನಿರಾಕರಿಸಿದ್ದಕ್ಕೆ ಭಾರತಕ್ಕೆ ಯಾವುದೇ ಸಮರ್ಥನೆ ಇರಬಾರದು ಎಂದು ಖಾಲಿದ್ ಮಹಮೂದ್ ಒಪ್ಪಿಕೊಂಡರು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯೊಂದಿಗೆ ರಾಜಕೀಯವನ್ನು ಬೆರೆಸುವುದು ಸೂಕ್ತವಲ್ಲ ಎಂದು ತಿಳಿಸಿದರು.

ಸಚಿವರ ಸಮಿತಿ ರಚಿಸುವ ಮೂಲಕ ಪಾಕಿಸ್ತಾನ ಸರ್ಕಾರ ತನ್ನದೇ ನೀತಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ ಮಹಮೂದ್, ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ದರೆ ಪಾಕಿಸ್ತಾನವು ತನ್ನ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸದೆ ಭದ್ರತಾ ಕಾಳಜಿ ಹೊರಹಾಕಿದೆ ಎಂದರು.

"ಭಾರತಕ್ಕೆ ತನ್ನ ತಂಡವನ್ನು ಕಳುಹಿಸಲು ನಿರ್ಧರಿಸುವ ಮೊದಲು ನಾವು ಭದ್ರತಾ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ ಎಂದು ನೀವು ಹೇಳಿದರೆ, ಅದು ಅರ್ಥಪೂರ್ಣವಾಗಿದೆ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ದರೆ ನಾವು ವಿಶ್ವಕಪ್‌ಗಾಗಿ ಭಾರತಕ್ಕೆ ತಂಡವನ್ನು ಕಳುಹಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳುತ್ತಿರುವುದು, ಎರಡೂ ವಿಷಯಗಳನ್ನು ಮಿಶ್ರಣ ಮಾಡುತ್ತಿದೆ," ಎಂದು ಖಾಲಿದ್ ಮಹಮೂದ್ ಹೇಳಿದರು.

ಪಿಸಿಬಿ ವ್ಯವಹಾರಗಳಲ್ಲಿ ಪಾಕಿಸ್ತಾನ ಸರ್ಕಾರದ ಹೆಚ್ಚಿನ ರೀತಿಯಲ್ಲಿ ಮೂಗು ತೂರಿಸುತ್ತಿದೆ ಮತ್ತು ವಿಶ್ವಕಪ್ ತಂಡದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಬಗ್ಗೆ ಖಾಲಿದ್ ಮಹಮೂದ್ ಪ್ರಶ್ನೆ ಎತ್ತಿದ್ದಾರೆ.

ಖಾಲಿದ್ ಮಹಮೂದ್ ತಮ್ಮ ಅಧಿಕಾರಾವಧಿಯ ಬಗ್ಗೆ ಮಾತನಾಡಿ, ಭಾರತದಲ್ಲಿನ ಭದ್ರತಾ ಪರಿಸ್ಥಿತಿಯನ್ನು ನಿರ್ಣಯಿಸುವ ರೀತಿಯಲ್ಲಿ ಪಿಸಿಬಿ ಹೇಗೆ ಸ್ವತಂತ್ರವಾಗಿತ್ತು ಮತ್ತು ಬೆದರಿಕೆಗಳ ಹೊರತಾಗಿಯೂ ತಮ್ಮ ತಂಡವನ್ನು ಪ್ರವಾಸಕ್ಕೆ ಕಳುಹಿಸಲು ಸಿದ್ಧವಿತ್ತು ಎಂದು ಸರ್ಕಾರಕ್ಕೆ ತಿಳಿಸಿದರು.

ಪಾಕಿಸ್ತಾನ ತಂಡವು ಭಾರತಕ್ಕೆ ಪ್ರಯಾಣಿಸಬೇಕು ಮತ್ತು ವಿಶ್ವಕಪ್‌ನಲ್ಲಿ ಭಾಗವಹಿಸಬೇಕು. ಏಕೆಂದರೆ ಪಿಸಿಬಿ ದೊಡ್ಡ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಇತರ ಮಂಡಳಿಗಳೊಂದಿಗಿನ ಅವರ ಸಂಬಂಧವೂ ಕುಸಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ಏಷ್ಯಾ ಕಪ್‌ಗೆ ಸಂಬಂಧಿಸಿದಂತೆ ಪಿಸಿಬಿ ಮಾಜಿ ಅಧ್ಯಕ್ಷ ನಜಮ್ ಸೇಥಿ ಅವರು ತೆಗೆದುಕೊಂಡ ನಿರ್ಧಾರಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ಖಾಲಿದ್ ಮಹಮೂದ್ ಹೊಸ ಪಿಸಿಬಿ ಆಡಳಿತ ಮಂಡಳಿಯನ್ನು ಒತ್ತಾಯಿಸಿದರು.

Story first published: Monday, July 10, 2023, 15:56 [IST]
Other articles published on Jul 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+