ಬಿಸಿಸಿಐ ಇತ್ತೀಚೆಗಷ್ಟೇ ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗಲಿಲ್ಲ. ಇದರಿಂದ ಅವರ ಅಭಿಮಾನಿಗಳು ತೀವ್ರ ಕೋಪಗೊಂಡಿದ್ದರು. ಇದರ ನಂತರ, ನ್ಯೂಜಿಲೆಂಡ್ ಎ ವಿರುದ್ಧದ ಭಾರತ ಎ ತಂಡದ ನಾಯಕತ್ವವನ್ನು ಸಂಜು ಸ್ಯಾಮ್ಸನ್ ಹಸ್ತಾಂತರಿಸಲಾಯಿತು.
ಇದೀಗ ಸಂಜು ಸ್ಯಾಮ್ಸನ್ ಕಳೆದ ಕೆಲವು ವರ್ಷಗಳಿಂದ ತಮ್ಮನ್ನು ತಾವು ಯಾವುದೇ ಮಾದರಿಯ ಆಡುವ ಆಟಗಾರ ಎಂದು ಯಾರೂ ಕರೆಯದ ರೀತಿಯಲ್ಲಿ ತಯಾರಿ ನಡೆಸಿದ್ದೇನೆ ಎಂದು ಹೇಳಿದ್ದಾರೆ.
''ನಾನು ವರ್ಷಗಳಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುವಲ್ಲಿ ಕೆಲಸ ಮಾಡಿದ್ದೇನೆ. ಯಾವುದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ವಿಶ್ವಾಸವಿದೆ. ಯಾವುದೇ ಆಟಗಾರರು ಯಶಸ್ವಿಯಾಗಲು ಹೊಂದಿಕೊಳ್ಳುವುದು ಅಗತ್ಯ'' ಎಂದು ಹೇಳಿದರು.
ರೋಹಿತ್ ಶರ್ಮಾ ನಾಯಕತ್ವದ ಕುರಿತಾಗಿ ತೀವ್ರ ಟೀಕೆ: ಕೊಹ್ಲಿಯನ್ನ ಬೆಂಬಲಿಸಿದ ಅಭಿಮಾನಿಗಳು
ಮಾತನ್ನ ಮುಂದುವರಿಸುತ್ತಾ ''ನಿಮ್ಮನ್ನು ನೀವು ಒಂದೇ ಸ್ಥಳದಲ್ಲಿ ಇಟ್ಟುಕೊಳ್ಳಬಾರದು. ನಾನು ಓಪನರ್ ಅಥವಾ ನಾನು ಫಿನಿಶರ್ ಎಂದು ನೀವು ಜನರಿಗೆ ಹೇಳಲು ಸಾಧ್ಯವಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಅನೇಕ ಕ್ರಮಾಂಕದಲ್ಲಿ ಆಡಲು ನನ್ನ ಆಟಕ್ಕೆ ಹೊಸ ಆಯಾಮವನ್ನು ನೀಡುತ್ತಾ ಹೋಗಿದ್ದೇನೆ'' ಎಂದು ಸ್ಯಾಮ್ಸನ್ ಬುಧವಾರ ಹೇಳಿದರು.
ಸಂಜು ಸ್ಯಾಮ್ಸನ್ 19 ಜುಲೈ 2015 ರಂದು ಜಿಂಬಾಬ್ವೆ ವಿರುದ್ಧ ಟಿ20 ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. 27ರ ಹರೆಯದ ಸ್ಯಾಮ್ಸನ್ ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ 16 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ, ಅವರು 21.14 ರ ಸರಾಸರಿಯಲ್ಲಿ ಮತ್ತು 135.15 ರ ಸ್ಟ್ರೈಕ್ ರೇಟ್ನಲ್ಲಿ 296 ರನ್ ಗಳಿಸಿದ್ದಾರೆ. ಕ್ರಿಕೆಟ್ನ ಈ ಕಡಿಮೆ ಸ್ವರೂಪದಲ್ಲಿ ಅವರು ಅರ್ಧಶತಕವನ್ನೂ ಗಳಿಸಿದ್ದಾರೆ.
ಟೀಮ್ ಇಂಡಿಯಾದಲ್ಲಿ ಆಯ್ಕೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಯಾಮ್ಸನ್, ಇದು ನಿಜವಾಗಿಯೂ ಸವಾಲಿನ ಸಂಗತಿಯಾಗಿದೆ. ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ನಿಜಕ್ಕೂ ಸವಾಲಿನ ಸಂಗತಿ. ತಂಡದಲ್ಲಿರುವ ಆಟಗಾರರ ನಡುವೆ ಸಾಕಷ್ಟು ಪೈಪೋಟಿ ಇದೆ. ಈ ವಿಷಯಗಳು ಸಂಭವಿಸಿದಾಗ ನಿಮ್ಮ ಮೇಲೆ ಕೇಂದ್ರೀಕರಿಸುವುದು ಮುಖ್ಯ. ನಾನು ಪ್ರದರ್ಶನ ನೀಡುತ್ತಿರುವ ರೀತಿ ನನಗೆ ಖುಷಿ ತಂದಿದೆ ಎಂದರು. ಜೊತೆಗೆ ನಾನು ಸುಧಾರಿಸಲು ಬಯಸುತ್ತೇನೆ ಎಂದಿದ್ದಾರೆ. ಗುರುವಾರದಿಂದ ನ್ಯೂಜಿಲೆಂಡ್ ಎ ವಿರುದ್ಧದ ಮೂರು ಲಿಸ್ಟ್ ಎ ಪಂದ್ಯಗಳಲ್ಲಿ ಸ್ಯಾಮ್ಸನ್ ಭಾರತ ಎ ತಂಡದ ನಾಯಕತ್ವ ವಹಿಸಲಿದ್ದಾರೆ.