2023ರ ಐಸಿಸಿ ಏಕದಿನ ವಿಶ್ವಕಪ್ನ ಅಗ್ರ ವಿಕೆಟ್ ಟೇಕರ್ ಆಗಿರುವ ಮೊಹಮ್ಮದ್ ಶಮಿ ಅವರು ಪಂದ್ಯಾವಳಿಯುದ್ದಕ್ಕೂ ಅಭಿಮಾನಿಗಳು ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ತಿಳಿಸಿದರು. ಇದೇ ವೇಳೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಆಟಗಾರರನ್ನು ಭೇಟಿ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದರು.
ಫೈನಲ್ ಪಂದ್ಯದವರೆಗೆ ಪಂದ್ಯಾವಳಿಯುದ್ದಕ್ಕೂ ಅಜೇಯ ಓಟವನ್ನು ಹೊಂದಿದ್ದ ಭಾರತ ತಂಡ ತಮ್ಮ ಮೂರನೇ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವ ಸಮೀಪಕ್ಕೆ ಬಂದಿದ್ದರು.

ಆದರೆ, ಆಸ್ಟ್ರೇಲಿಯಾದ ಆರಂಭಿಕ ಟ್ರಾವಿಸ್ ಹೆಡ್ ಭಾರತ ತಂಡದ ಗೆಲುವಿಗೆ ಅಡ್ಡವಾಗಿ ನಿಂತರು ಮತ್ತು ಅದ್ಭುತ ಶತಕದೊಂದಿಗೆ ತಮ್ಮ ತಂಡವನ್ನು ಗೆಲ್ಲಿಸಿದರು. ಆಸ್ಟ್ರೇಲಿಯಾ ತಂಡ ತಮ್ಮ ಆರನೇ ಐಸಿಸಿ ಏಕದಿನ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳಲು ನೆರವಾದರು.
ಇದಾಗುತ್ತಿದ್ದಂತೆಯೇ, ಭಾನುವಾರದಂದು ಶತಕೋಟಿ ಭಾರತೀಯ ಹೃದಯಗಳು ಒಡೆದವು. ಆದರೆ ಒಂದು ತಿಂಗಳಿಗೂ ಹೆಚ್ಚು ಕಾಲ ಪಂದ್ಯಾವಳಿಯಲ್ಲಿ ತೀವ್ರ ಪೈಪೋಟಿ ನಡೆಸಿದ ನಂತರ, ಫೈನಲ್ ತಲುಪಲು ಮೈದಾನದಲ್ಲಿ ತಮ್ಮ ಸರ್ವಸ್ವವನ್ನು ನೀಡಿದ 11 ಆಟಗಾರರಿಗಿಂತ ಹೆಚ್ಚು ನೊಂದಿರಲು ಸಾಧ್ಯವಿಲ್ಲ.
ಭಾರತ ತಂಡವು 2023ರ ವಿಶ್ವಕಪ್ ಟ್ರೋಫಿಯನ್ನು ಸ್ವದೇಶದಲ್ಲಿ ಗೆಲ್ಲದಿದ್ದರೂ ಸಹ, ಅವರು ಸ್ಪರ್ಧೆಯ ಉದ್ದಕ್ಕೂ ಪ್ರದರ್ಶನ ನೀಡಿದ ರೀತಿ ಶತಕೋಟಿ ಭಾರತೀಯ ಬೆಂಬಲಿಗರಿಗೆ ಅಸಾಧಾರಣ ಪಂದ್ಯಾವಳಿಯಾಗಿತ್ತು.
ಪಂದ್ಯದ ನಂತರ ಮೊಹಮ್ಮದ್ ಶಮಿ ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಭಾರತೀಯ ಅಭಿಮಾನಿಗಳು ಅವರ ಅವಿರತ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಳ್ಳುವ ಫೋಟೋವನ್ನು ಹಂಚಿಕೊಂಡಿದ್ದಾರೆ.
"ದುರದೃಷ್ಟವಶಾತ್, ನಿನ್ನೆ ನಮ್ಮ ದಿನವಾಗಿರಲಿಲ್ಲ. ಪಂದ್ಯಾವಳಿಯುದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಾನು ಎಲ್ಲಾ ಭಾರತೀಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ವಿಶೇಷವಾಗಿ, ಡ್ರೆಸ್ಸಿಂಗ್ ಕೋಣೆಗೆ ಬಂದು ನಮ್ಮಲ್ಲಿ ಉತ್ಸಾಹ ತುಂಬಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ನಾವು ಮತ್ತೆ ಪುಟಿದೇಳುತ್ತೇವೆ," ಎಂದು ಮೊಹಮ್ಮದ್ ಶಮಿ ಬರೆದುಕೊಂಡಿದ್ದಾರೆ.
ವಿಶ್ವಕಪ್ ಪಂದ್ಯಾವಳಿಯಲ್ಲಿ ಹೆಚ್ಚಿನ ವಿಕೆಟ್ ಟೇಕರ್ ಆಗಿರುವ ಮೊಹಮ್ಮದ್ ಶಮಿ ಅವರು ಆರಂಭಿಕ ಕೆಲವು ಪಂದ್ಯಗಳಲ್ಲಿ ಭಾರತ ತಂಡಕ್ಕಾಗಿ ಆಡಲಿಲ್ಲ. ನಂತರ ಅಸಾಧಾರಣ ಪ್ರದರ್ಶನದ ಮೂಲಕ ಪ್ರಭಾವಶಾಲಿಯಾಗಿದ್ದರು.
ಪಂದ್ಯಾವಳಿಯ ಮೊದಲ ನಾಲ್ಕು ಪಂದ್ಯಗಳನ್ನು ಕಳೆದುಕೊಂಡ ನಂತರ, ಮೊಹಮ್ಮದ್ ಶಮಿ ಕೇವಲ 5.26ರ ಎಕಾನಮಿ ದರ ಮತ್ತು 10.70ರ ಸರಾಸರಿಯಲ್ಲಿ 24 ವಿಕೆಟ್ಗಳನ್ನು ಪಡೆಯುವ ಮೂಲಕ ಸ್ಟಾರ್ ಬೌಲರ್ ಆಗಿ ಹೊರಹೊಮ್ಮಿದರು.
ವಿಶ್ವಕಪ್ ಇತಿಹಾಸದಲ್ಲಿ ಕೇವಲ ನಾಲ್ವರು ಆಟಗಾರರು, ಲಸಿತ್ ಮಾಲಿಂಗ (56), ಮಿಚೆಲ್ ಸ್ಟಾರ್ಕ್ (65), ಮುತ್ತಯ್ಯ ಮುರಳೀಧರನ್ (68) ಮತ್ತು ಗ್ಲೆನ್ ಮೆಕ್ಗ್ರಾತ್ (71) ಮೊಹಮ್ಮದ್ ಶಮಿ (55) ಅವರಿಗಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಮೊಹಮ್ಮದ್ ಶಮಿ ಅವರ ರಿಟರ್ನ್ಗಳು ಪಟ್ಟಿಯಲ್ಲಿ ಅವರ ಮೇಲಿರುವ ಯಾವುದೇ ಆಟಗಾರರಿಗಿಂತ ಹತ್ತು ಕಡಿಮೆ ಪಂದ್ಯಗಳಲ್ಲಿ ಸಂಭವಿಸಿವೆ.
ಟೂರ್ನಮೆಂಟ್ನ ಐಸಿಸಿ ತಂಡದಲ್ಲಿ ಸ್ಥಾನ ಪಡೆದ ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಅಭಿಮಾನಿಗಳ ಬೆಂಬಲಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ, "ನಾವು ಉತ್ತಮ ಪಂದ್ಯಾವಳಿಯನ್ನು ಹೊಂದಿದ್ದೇವೆ. ಆದರೆ ನಿನ್ನೆ ಫೈನಲ್ನಲ್ಲಿ ನಾವು ಕಳಪೆ ಆಟಕ್ಕೆ ಕೊನೆಗೊಂಡಿದ್ದೇವೆ. ನಾವೆಲ್ಲರೂ ಎದೆಗುಂದಿದ್ದೇವೆ. ಆದರೆ ನಮ್ಮ ಜನರ ಬೆಂಬಲ ನಮ್ಮನ್ನು ಬಲಿಷ್ಠಗೊಳಿಸುತ್ತದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಡ್ರೆಸ್ಸಿಂಗ್ ರೂಮ್ಗೆ ಭೇಟಿ ನೀಡಿದ್ದು ವಿಶೇಷ ಮತ್ತು ಪ್ರೇರಕವಾಗಿತ್ತು," ಎಂದು ಬರೆದುಕೊಂಡಿದ್ದಾರೆ.