ನಾವು ಒಂದು ತಿಂಗಳು ಕಾಯೋಣ
ನಾನು ಈ ಕ್ಷಣದಲ್ಲಿ (ಭಾರತದ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ಟೂರ್ನಿಯನ್ನು ಬೇಕಾದರೆ ಆಯೋಜಿಸುತ್ತೇವೆ) ಶ್ರೀಲಂಕಾದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಸದ್ಯ ಆಸ್ಟ್ರೇಲಿಯಾ ಅಲ್ಲಿ ಆಡುತ್ತಿದೆ. ಶ್ರೀಲಂಕಾ ತಂಡ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನಾನು ಈ ಕ್ಷಣದಲ್ಲಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ನಾವು ಒಂದು ತಿಂಗಳು ಕಾಯೋಣ,'' ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು.
ಶ್ರೀಲಂಕಾ ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡದ ವಿರುದ್ಧ ಬಹು ಸ್ವರೂಪದ ಸರಣಿಯನ್ನು ಆಯೋಜಿಸಿತ್ತು ಎಂಬುದನ್ನು ಮರೆಯುವಂತಿಲ್ಲ. ಸರಣಿಯು ಹೆಚ್ಚು ಸ್ಪರ್ಧಾತ್ಮಕವಾಗಿತ್ತು ಮತ್ತು ಎರಡೂ ಕಡೆಯಿಂದ ಉತ್ತಮ ಕ್ರಿಕೆಟ್ ಕಂಡಿತು. ಟಿ20 ಸರಣಿಯನ್ನು ಆಸ್ಟ್ರೇಲಿಯಾ 2-1 ರಿಂದ ಗೆದ್ದುಕೊಂಡಿರೆ, ಏಕದಿನ ಸರಣಿಯನ್ನು ಶ್ರೀಲಂಕಾ 3-2 ರಿಂದ ಗೆದ್ದುಕೊಂಡಿತು.
ಏಷ್ಯಾ ಕಪ್ 6 ತಂಡಗಳನ್ನು ಹೊಂದಿರುತ್ತದೆ
ಆದರೆ ಎರಡು ಪಂದ್ಯಗಳ ಟೆಸ್ಟ್ ಸರಣಿಯು 1-1 ಡ್ರಾದಲ್ಲಿ ಕೊನೆಗೊಂಡ ನಂತರ ಟೆಸ್ಟ್ನಲ್ಲಿ ವಾರ್ನ್-ಮುರಳಿ ಟ್ರೋಫಿಯನ್ನು ಹಂಚಿಕೊಳ್ಳಲಾಗಿದೆ. ಜುಲೈ 16ರಂದು ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರಾರಂಭವಾಗುವ ಎರಡು ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನಕ್ಕೆ ಆತಿಥ್ಯ ವಹಿಸಲಿದೆ.
ಈ ಸರಣಿಯು ಕೇವಲ 2 ತಂಡಗಳನ್ನು ಒಳಗೊಂಡಿರುತ್ತದೆ, ಆದರೆ ಏಷ್ಯಾ ಕಪ್ 6 ತಂಡಗಳನ್ನು ಹೊಂದಿರುತ್ತದೆ. ಶ್ರೀಲಂಕಾ, ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಹಾಗೂ ಇನ್ನೂ ಒಂದು ಏಷ್ಯನ್ ತಂಡ-ಪ್ರಾಯಶಃ ಯುಎಇ, ಕುವೈತ್, ಸಿಂಗಾಪುರ್, ಅಥವಾ ಹಾಂಗ್ ಕಾಂಗ್. ಶ್ರೀಲಂಕಾ ದೇಶದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿರುವಾಗ ಈ ತಂಡಗಳ ಸುರಕ್ಷತೆಯನ್ನು ಯಾರು ಖಾತರಿಪಡಿಸುತ್ತಾರೆ ಎಂಬುದು ಸದ್ಯ ದೊಡ್ಡ ಪ್ರಶ್ನೆಯಾಗಿದೆ.
ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಲೀನ್ ಪ್ಯಾಚ್ (ಕಳಪೆ ಫಾರ್ಮ್) ಮೂಲಕ ಹೋಗುತ್ತಿದ್ದಾರೆ ಮತ್ತು ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿ ನಡುವೆ ತೊಡೆಸಂದು ಗಾಯವು ರನ್ ಮಷಿನ್ಗೆ ಇನ್ನಷ್ಟು ತಲೆನೋವು ತರಿಸಿದೆ.
33 ವರ್ಷ ವಯಸ್ಸಿನ ಭಾರತದ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕೊನೆಯ ಅಂತಾರಾಷ್ಟ್ರೀಯ ಶತಕವು 2019ರಲ್ಲಿ ಬಂದಿತ್ತು. ಸದ್ಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಮತ್ತು ಟಿ20 ಸರಣಿಗಳಲ್ಲಿ ಅವರ ನಿರಾಶಾದಾಯಕ ಫಾರ್ಮ್ ಮುಂದುವರೆದಿದೆ. ಏಕೆಂದರೆ ಕೊಹ್ಲಿ ಎಡ್ಜ್ಬಾಸ್ಟನ್ ಟೆಸ್ಟ್ನಲ್ಲಿ ಕೇವಲ 11 ಮತ್ತು 20 ರನ್ಗಳನ್ನು ಮಾತ್ರ ಗಳಿಸಿದರು. ನಂತರದ ಟಿ20 ಪಂದ್ಯಗಳಲ್ಲಿ ಅವರ ಎರಡು ಇನ್ನಿಂಗ್ಸ್ಗಳಲ್ಲಿ ಕೇವಲ 12 ರನ್ ಬಾರಿಸಿದರು.
ವಿರಾಟ್ ಕೊಹ್ಲಿ ಸ್ವತಃ ಶ್ರೇಷ್ಠ ಆಟಗಾರರಾಗಿದ್ದಾರೆ
ಎಲ್ಲಾ ವೈಫಲ್ಯಗಳ ಹೊರತಾಗಿಯೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರು ತಮ್ಮ ಸ್ಕೋರಿಂಗ್ ವಿಧಾನಕ್ಕೆ ಮರಳಲು ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ್ದಾರೆ. "ಖಂಡಿತವಾಗಿಯೂ, ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಡೆದ ಅಂಕಗಳನ್ನು ನೋಡಿ. ಅದು ಸಾಮರ್ಥ್ಯ ಮತ್ತು ಗುಣಮಟ್ಟವಿಲ್ಲದೆ ನಡೆಯುವುದಿಲ್ಲ. ಹೌದು, ಅವರು ಕಠಿಣ ಸಮಯವನ್ನು ಹೊಂದಿದ್ದಾರೆ ಮತ್ತು ಅದು ಅವರಿಗೆ ತಿಳಿದಿದೆ. ಅವರು ಸ್ವತಃ ಶ್ರೇಷ್ಠ ಆಟಗಾರರಾಗಿದ್ದಾರೆ," ಎಂದು ಬೆಂಬಲಕ್ಕೆ ನಿಂತಿದ್ದಾರೆ.