
ಬೂಮ್ರಾ ಬಳಸಿಕೊಂಡಿದ್ದೇಕೆ?
ಪಾಕಿಸ್ತಾನದಲ್ಲಿ ಕೊರನಾವೈರಸ್ ಬಗ್ಗೆ ಜನಜಾಗೃತಿ ಮೂಡಿಸಲು ಪಾಕಿಸ್ತಾನ ಕ್ರಿಕೆಟ್ ಆಟಗಾರರನ್ನು ಬಳಸಿಕೊಳ್ಳಬಹುದಿತ್ತು. ಆದರೆ ಜಸ್ಪ್ರೀತ್ ಬೂಮ್ರಾ ಅವರ ಮುಖಾಂತರ ಜನರಿಗೆ ಸಂದೇಶ ತಲುಪಿಸಲು ಮುಂದಾಗುವ ಮೂಲಕ ಪಾಕ್ ಅಚ್ಚರಿ ಮೂಡಿಸಿದೆ. ಬಹುಶಃ ಹೆಚ್ಚು ಜನರಿಗೆ ಸಂದೇಶ ತಲುಪಲು ಪಾಕ್ ಇಂಥ ವಿಭಿನ್ನ ಮಾರ್ಗ ಕಂಡುಕೊಂಡಿರಬಹುದು.

ಪಾಕ್ನಲ್ಲಿ ಸೋಂಕಿತರು
ಸೋಮವಾರ (ಏಪ್ರಿಲ್ 6) ಪಾಕಿಸ್ತಾನದಲ್ಲಿ ಕೊರೊನಾ ಸೋಂಕು ದೃಢಪಟ್ಟವರ ಸಂಖ್ಯೆ 3,277 ಇತ್ತು. ಇದರಲ್ಲಿ 50 ಮಂದಿ ಸಾವನ್ನಪ್ಪಿದ್ದರೆ, 257 ಮಂದಿ ಗುಣಮುಖರಾಗಿದ್ದರು. ಭಾರತದಲ್ಲಿ 4,281 ಸೋಂಕು ದೃಢಪಟ್ಟಿದ್ದರೆ, 111 ಮಂದಿ ಮೃತರಾಗಿ, 319 ಮಂದಿ ಚೇತರಿಸಿಕೊಂಡಿದ್ದರು.

ಬೂಮ್ರಾ ಚಿತ್ರ ಹಾಕಿ ಸಂದೇಶ
ಪಾಕಿಸ್ತಾನ್ ಸೂಪರ್ಲೀಗ್ (ಪಿಎಸ್ಎಲ್)ನ ಫ್ರಾಂಚೈಸಿ, ಇಸ್ಲಮಾಬಾದ್ ಯುನೈಟೆಡ್ (ಐಯು) ಜನಜಾಗೃತಿಗಾಗಿ ವಿಭಿನ್ನ ಮಾರ್ಗ ಕಂಡುಕೊಂಡಿದೆ. ಟ್ವೀಟ್ ಮಾಡಿರುವ ಐಯು ಜಸ್ಪ್ರೀತ್ ಬೂಮ್ರಾ ಅವರು ನೋ ಬಾಲ್ ಎಸೆಯುತ್ತಿರುವ ಚಿತ್ರ ಹಾಕಿ ಸಂದೇಶ ಬರೆದುಕೊಂಡಿದೆ.
ಗೆರೆ ದಾಟಬೇಡಿ ಎಂದು ಎಚ್ಚರಿಕೆ
ಇಸ್ಲಮಾಬಾದ್ ಯುನೈಟೆಡ್ ಮಾಡಿರುವ ಟ್ವೀಟ್ನಲ್ಲಿ, 'ಗೆರೆ ದಾಟಬೇಡಿ. ಗೆರೆ ದಾಟಿದರೆ ಬೆಲೆ ತೆರಬೇಕಾದೀತು. ಅನಗತ್ಯವಾಗಿ ನಿಮ್ಮ ಮನೆ ಬಿಟ್ಟು ಹೊರಗೆ ಬರಬೇಡಿ. ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳಿ. ವ್ಯಕ್ತಿ ವ್ಯಕ್ತಿಗಳ ಮಧ್ಯೆ ಅಂತವಿದ್ದರೂ ಹೃದಯ, ಮನಸ್ಸುಗಳು ಹತ್ತಿರಲಿರಲಿ' ಎಂದು ಅರ್ಥಪೂರ್ಣ ಸಂದೇಶ ಬರೆದುಕೊಳ್ಳಲಾಗಿದೆ.


Click it and Unblock the Notifications
