
ರಾಹುಲ್ ದ್ರಾವಿಡ್ ಉತ್ತಮವಾಗಿ ತಂಡವನ್ನು ಮುನ್ನಡೆಸಬೇಕಾಗಿದೆ
ರಾಹುಲ್ ದ್ರಾವಿಡ್ ಕೋಚ್ ಹುದ್ದೆಯ ಕುರಿತಾಗಿ ಮಾತನಾಡಿರುವ ಶೋಯಬ್ ಅಖ್ತರ್ ಜನರು ರಾಹುಲ್ ದ್ರಾವಿಡ್ ಅವರನ್ನು ಅತಿಯಾಗಿ ಹೊಗಳಲ್ಪಟ್ಟ ಕೆಲಸ ಮಾಡದ ಕೋಚ್ ಎಂದು ಕರೆಯಬಾರದೆಂದರೆ ರಾಹುಲ್ ದ್ರಾವಿಡ್ ಉತ್ತಮವಾಗಿ ತಂಡವನ್ನು ಮುನ್ನಡೆಸಬೇಕಿದೆ ಎಂದಿದ್ದಾರೆ. ಈ ರೀತಿ ಹೇಳಿಕೆ ನೀಡುವುದರ ಮೂಲಕ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಹೀಗೆ ಸರಣಿಗಳನ್ನು ಸೋತರೆ ಮುಂದೊಂದು ದಿನ ಜನರು ರಾಹುಲ್ ದ್ರಾವಿಡ್ ಅವರನ್ನು ಅತಿಯಾಗಿ ಹೊಗಳಲ್ಪಟ್ಟ ಕೋಚ್ ಎಂದು ಕರೆಯುತ್ತಾರೆ ಎಂದು ಶೋಯಬ್ ಅಖ್ತರ್ ಎಚ್ಚರಿಸಿದ್ದಾರೆ.

ಭಾರತ ಕ್ರಿಕೆಟ್ ಇಳಿಮುಖವಾಗಿಲ್ಲ
ಇನ್ನೂ ಮುಂದುವರಿದು ಮಾತನಾಡಿರುವ ಶೋಯಬ್ ಅಖ್ತರ್ ಭಾರತ ಕ್ರಿಕೆಟ್ ಇಳಿಕೆಯತ್ತ ಮುಖ ಮಾಡಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದಿಗೂ ಸಹ ಉನ್ನತ ಸ್ಥಾನದಲ್ಲಿರುವ ಭಾರತ ಕ್ರಿಕೆಟ್ ಮತ್ತಷ್ಟು ವೃದ್ಧಿಸಬೇಕೆಂದರೆ ರವಿಶಾಸ್ತ್ರಿ ನಿರ್ವಹಿಸಿದ್ದ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ರಾಹುಲ್ ದ್ರಾವಿಡ್ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಬೇಕಿದೆ ಎಂದು ಶೋಯಬ್ ಅಖ್ತರ್ ಹೇಳಿದ್ದಾರೆ.

ಟೀಂ ಇಂಡಿಯಾ ಸೋಲು ದ್ರಾವಿಡ್ ಹೆಸರು ಕೆಡಿಸುತ್ತಾ?
ಸದ್ಯ ರಾಹುಲ್ ದ್ರಾವಿಡ್ ಕುರಿತಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಅಕ್ತರ್ ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಟೀಮ್ ಇಂಡಿಯಾ ಇದೇ ರೀತಿ ಸಾಲುಸಾಲು ಸರಣಿಗಳನ್ನು ಸೋತರೆ ಕೋಚ್ ರಾಹುಲ್ ದ್ರಾವಿಡ್ ಕೆಟ್ಟ ಹೆಸರನ್ನು ಮತ್ತು ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಅಂಡರ್ 19 ಹಾಗೂ ಭಾರತ ಎ ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿರುವ ರಾಹುಲ್ ದ್ರಾವಿಡ್ ಸದ್ಯ ಭಾರತ ಅಂತರರಾಷ್ಟ್ರೀಯ ತಂಡದ ಕೋಚ್ ಆಗಿ ಕೆಟ್ಟ ಹೆಸರು ಹೊತ್ತುಕೊಳ್ಳುತ್ತಾರಾ ಎಂಬ ಅನುಮಾನಗಳು ಮೂಡತೊಡಗಿವೆ.


Click it and Unblock the Notifications












