ಬೆಂಗಳೂರು, ಜನವರಿ 10: ಸಾಧನೆಗಾಗಿ ಜನಮನಗಳಲ್ಲಿ ಸ್ಥಾನ ಗಳಿಸಿರುವ ಅಪ್ಪನೊಬ್ಬನಿಗೆ, ತನ್ನ ಮಗ ತನ್ನದೇ ಸಾಧನೆಯ ಹಾದಿಯಲ್ಲಿ ಸಾಗಿ ನಾಳೆ ತನಗಿಂತಲೂ ದೊಡ್ಡ ಪ್ರತಿಭೆಯಾಗಿ ಬೆಳೆಯಲಿದ್ದಾನೆ ಅನ್ನೋ ಸುಳಿವು ಸಿಗುವಾಗ ಆಗೋ ಖುಷಿಗೆ ಪಾರವಿದೆಯಾ? ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಭಾರತದ ಕ್ರಿಕೆಟ್ ಅಭಿಮಾನಿಗಳ ಆರಾಧ್ಯ, ಕನ್ನಡಿಗ ರಾಹುಲ್ ದ್ರಾವಿಡ್ಗೆ ಅವರ ಪುತ್ರ ಸಮಿತ್ ದ್ರಾವಿಡ್ ಇಂಥದ್ದೊಂದು ಖುಷಿಯ ಗಿಫ್ಟ್ ಕೊಟ್ಟಿದ್ದಾರೆ.
ಮಿನುಗಿದ ನವದೀಪ, ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದ ಟೀಮ್ ಇಂಡಿಯಾ
'ಗ್ರೇಟ್ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಜನವರಿ 11ಕ್ಕೆ ತನ್ನ 47ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ. ದ್ರಾವಿಡ್ ಹುಟ್ಟು ಹಬ್ಬಕ್ಕೆ ಮುನ್ನಾದಿನ ಅಂದರೆ ಜನವರಿ 10ರಂದು ಸೌತ್ ಝೋನ್ ಅಂಡರ್ 14 ಟೂರ್ನಿಗಾಗಿ ಕರ್ನಾಟಕ ತಂಡ ಪ್ರಕಟಗೊಂಡಿದೆ. ರಾಜ್ಯ ತಂಡದಲ್ಲಿ ದ್ರಾವಿಡ್ ಮಗ ಸಮಿತ್ ದ್ರಾವಿಡ್ ಹೆಸರೂ ಇದೆ.
ಕೊಹ್ಲಿ ನನಗೆ ಸ್ಫೂರ್ತಿ ಎಂದ ಆಸ್ಟ್ರೇಲಿಯಾದ ಉದಯೋನ್ಮುಖ ಕ್ರಿಕೆಟರ್
ಸೌತ್ ಝೋನ್ ಅಂಡರ್ 14 ಟೂರ್ನಿ ಬೆಂಗಳೂರಿನಲ್ಲಿ ಜನವರಿ 16ರಿಂದ ಫೆಬ್ರವರಿ 8ರ ವರೆಗೆ ನಡೆಯಲಿದೆ. ಎರಡು ದಿನಗಳ ಪಂದ್ಯಗಳ ಟೂರ್ನಿಯಿದು. ಈ ಪಂದ್ಯಾಟಕ್ಕೆ ಸಂಬಂಧಿಸಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಶುಕ್ರವಾರ (ಜ.10) ತಂಡ ಪ್ರಕಟಿಸಿದೆ. ಪ್ರಕಟಿತ ತಂಡಲ್ಲಿ ದ್ರಾವಿಡ್ ಪುತ್ರ ಸಮಿತ್ ಸ್ಥಾನ ಗಿಟ್ಟಿಸಿ ಅಪ್ಪನಿಗೆ ಖುಷಿಯ ಗಿಫ್ಟ್ ಕೊಟ್ಟಿದ್ದಾರೆ.
ಲಕ್ಷ್ಮಣ್ ಆಯ್ಕೆಯ ಟಿ20 ವಿಶ್ವಕಪ್ ತಂಡದಲ್ಲಿ ಧೋನಿ, ಧವನ್ ಇಲ್ಲವೇಕೆ?
ಸೌತ್ ಝೋನ್ ಅಂಡರ್ 14 ಟೂರ್ನಿಗೆ ಆಯ್ಕೆ ಟ್ರಯಲ್ಸ್ ಆಗಿ ಇತ್ತೀಚೆಗೆ ಕೆಎಸ್ಸಿಎ ಇಂಟರ್ ಝೋನಲ್ ಅಂಡರ್ 14 ಟೂರ್ನಿ ನಡೆಸಿತ್ತು. ಈ ಟೂರ್ನಿ ವೇಳೆ ಒಂದೇ ಪಂದ್ಯದಲ್ಲಿ ಸಮಿತ್ ದ್ರಾವಿಡ್, ದ್ವಿಶತಕ (201 ರನ್) ಮತ್ತು ಅಜೇಯ 94 ರನ್ ಬಾರಿಸಿದ್ದರು. ಹೀಗಾಗಿ ಸೌತ್ ಝೋನ್ ಅಂಡರ್ 14 ಟೂರ್ನಿಗೆ ಪ್ರತಿಭಾನ್ವಿತ ಸಮಿತ್ನನ್ನು ಕೆಎಸ್ಸಿಎ ಆಯ್ಕೆ ಮಾಡಿದೆ.
ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ, ನಾಯಕನ ಬದಲಾವಣೆ!
ಸೌತ್ ಝೋನ್ ಅಂಡರ್ 14 ಟೂರ್ನಿಗೆ ಕರ್ನಾಟಕ ತಂಡ: ಕಾರ್ತಿಕೇಯ ಕೆಪಿ (ನಾಯಕ), ಶಿವಂ ಎಂಬಿ, ಸಮಿತ್ ದ್ರಾವಿಡ್, ರೋಹನ್ ಆರ್ ರೇವಂಕಾರ್, ರವಿ ಕೈರವ್ ರೆಡ್ಡಿ (ವಿಕೆ), ಸಮರ್ಥ್ ನಾಗರಾಜ್, ಕನಿಶ್ಕ್ ಎಂ (ವಿಕೆ), ರಾಹುಲ್ ಬೆಳ್ಳದ್, ಅನ್ಶ್ ಆಯ್ಮ, ಪ್ರಣವ್ ಅಶ್ವಥ್, ಹಾರ್ದಿಕ್ ರಾಜ್, ಶ್ರೀಧರ್ ಜೆ, ಪ್ರಣವ್ ಅಭಿಜಿತ್ ಭಟ್, ಆದೇಶ್ ಅರಸ್, ಆರ್ಯನ್ ಇಂಚಲ್.