ಬೆಂಗಳೂರು, ನವೆಂಬರ್ 13: ದೆಹಲಿ ಹಾಗೂ ಕರ್ನಾಟಕ ನಡುವಿನ ರಣಜಿ ಪಂದ್ಯ ನಿರೀಕ್ಷೆಯಂತೆ ಡ್ರಾನಲ್ಲಿ ಅಂತ್ಯ ಕಂಡಿದೆ. ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಆರ್. ವಿನಯ್ ಕುಮಾರ್ ತಂಡಕ್ಕೆ ಮೂರು ಅಂಕಗಳು ಲಭಿಸಿವೆ. ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಕೆಎಲ್ ರಾಹುಲ್ 92 ರನ್ ಹಾಗೂ ಅಭಿಮನ್ಯು ಮಿಥುನ್ 5 ವಿಕೆಟ್ ಗಳಿಸಿ ಮಿಂಚಿದರು.
ರಿಷಭ್ ಪಂತ್ ಪಡೆ ತನ್ನ ಅಂತಿಮ ದಿನದಾಟದಲ್ಲಿ 4 ವಿಕೆಟ್ಗೆ 277 ರನ್ಗಳಿಂದ ಅಂತಿಮ ದಿನದಾಟ ಮುಂದುವರಿಸಿತು. ಮೊದಲ ಇನಿಂಗ್ಸ್ನಲ್ಲಿ 95 ಓವರ್ಗಳಲ್ಲಿ 301ರನ್ಗಳನ್ನು ಗಳಿಸಿತು. ಅಭಿಮನ್ಯು ಮಿಥುನ್ 70/5 ಪಡೆದರು. ದೆಹಲಿ ಪರ ಗೌತಮ್ ಗಂಭೀರ್ 144ರನ್ ಚೆಚ್ಚಿದರು.
