ಕ್ರಿಕೆಟ್ ಸಮಿತಿಯಲ್ಲಿ ಜಾವಗಲ್ ಸಮಿತಿಯಲ್ಲಿರಬೇಕು : ಗುಹಾ
ಬೆಂಗಳೂರು, ಜೂನ್ 02: ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ನಡುವಿನ ಕಿತ್ತಾಟದ ನಡುವೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಡಳಿತ ಅಧಿಕಾರಿ ಸ್ಥಾನವನ್ನು ತೊರೆದಿರುವ ಗುಹಾ ಬಾಂಬ್ ಸಿಡಿಸುತ್ತಿದ್ದಾರೆ.
ಎಂಎಸ್ ಧೋನಿ, ಗವಾಸ್ಕರ್ ವಿರುದ್ಧ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವ ಗುಹಾ ಅವರು ಬಿಸಿಸಿಐ ಆಡಳಿತ ಮಂಡಳಿಯಿಂದ ಹೊರ ನಡೆದಿರುವ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರು ಕ್ರಿಕೆಟ್ ಸಮಿತಿ(ಸಿಒಎ) ಯಲ್ಲಿ ಕರ್ನಾಟಕದ ವೇಗಿ, ಮಾಜಿ ಕ್ರಿಕೆಟರ್ ಜಾವಗಲ್ ಶ್ರೀನಾಥ್ ಇರಬೇಕು ಎಂದಿದ್ದಾರೆ.[ಧೋನಿ ಗವಾಸ್ಕರ್ ಜನ್ಮ ಜಾಲಾಡಿದ ರಾಮಚಂದ್ರ ಗುಹಾ]

ಜಾವಗಲ್ ಶ್ರೀನಾಥ್ ಅವರು ಸಿಒಎ ಸೇರಲು ಸೂಕ್ತವಾದ ವ್ಯಕ್ತಿ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್(ಕೆಎಸ್ ಸಿಎ) ಕಾರ್ಯದರ್ಶಿಯಾಗಿ ಹಗರಣ ಮುಕ್ತ ವಾತಾವರಣ ಸೃಷ್ಟಿಸಿದರು. ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಿದರು. ಪ್ರಸ್ತುತ ಐಸಿಸಿ ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕವಾಗಿ, ತಾಂತ್ರಿಕವಾಗಿ ಕೂಡಾ ಕ್ರಿಕೆಟ್ ಬಗ್ಗೆ ಜ್ಞಾನವುಳ್ಳವರು ಎಂದು ರಾಮಚಂದ್ರ ಗುಹಾ ಅಭಿಪ್ರಾಯಪಟ್ಟಿದ್ದಾರೆ.[ಬಿಸಿಸಿಐ ಆಡಳಿತ ಸಮಿತಿಗೆ ರಾಮಚಂದ್ರ ಗುಹಾ ರಾಜೀನಾಮೆ!]
ಶ್ರೀನಾಥ್ ಅವರ ಆಯ್ಕೆ ಬಗ್ಗೆ ಸಿಒಎ ಮುಖ್ಯಸ್ಥ ವಿನೋದ್ ಹಾಗೂ ಇತರೆ ಸದಸ್ಯರಿಗೆ ತಿಳಿಸುತ್ತೇನೆ ಎಂದಿದ್ದಾರೆ. ಶ್ರೀನಾಥ್ ಅವರು ಭಾರತ ಪರ 67 ಟೆಸ್ಟ್ ಹಾಗೂ 229 ಏಕದಿನ ಪಂದ್ಯಗಳನ್ನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications