ಸೌರಾಷ್ಟ್ರ ತಂಡಕ್ಕೆ ಪೂಜಾರಾ ನಾಯಕ, ಉತ್ತಪ್ಪ ಸೇರ್ಪಡೆ
ಬೆಂಗಳೂರು, ಸೆ. 28:ಟೀಂ ಇಂಡಿಯಾ ಟೆಸ್ಟ್ ತಂಡದ ಪ್ರಮುಖ ಆಟಗಾರ ಚೇತೇಶ್ವರ್ ಪೂಜಾರಾ ಅವರನ್ನು ಸೌರಾಷ್ಟ್ರ ಕ್ರಿಕೆಟ್ ತಂಡದ ರಣಜಿ ಟ್ರೋಫಿ ಮೊದಲ ಪಂದ್ಯಕ್ಕೆ ನಾಯಕರಾಗಿದ್ದಾರೆ. ಕರ್ನಾಟಕದಿಂದ ವಲಸೆ ಹೋಗಿರುವ ರಾಬಿನ್ ಉತ್ತಪ್ಪ ಅವರು ಈ ಬಾರಿ ಸೌರಾಷ್ಟ್ರ ಪರ ಬ್ಯಾಟ್ ಬೀಸಲಿದ್ದಾರೆ.
ಬುಧವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೊದಲ ಪಂದ್ಯಕ್ಕಾಗಿ 15 ಆಟಗಾರರ ತಂಡವನ್ನು ಅಂತಿಮಗೊಳಿಸಿದೆ.

ಅಕ್ಟೋಬರ್ 6ರಿಂದ 9ರವರೆಗೆ ಸೌರಾಷ್ಟ್ರ ತಂಡ ತನ್ನ ಮೊದಲ ಪಂದ್ಯವನ್ನು ಹರಿಯಾಣದ ಎದುರು ಲಹಲಿಯಲ್ಲಿ ಆಡಲಿದೆ. ಜಯದೇವ್ ಷಾ ಅವರ ಅನುಪಸ್ಥಿತಿಯಲ್ಲಿ ಪೂಜಾರ ತಂಡವನ್ನು ಮುನ್ನಡೆಸಲಿದ್ದಾರೆ. ರಾಬಿನ್ ಉತ್ತಪ್ಪ ಮೊದಲ ಬಾರಿಗೆ ಈ ತಂಡದ ಪರ ಆಡುತ್ತಿದ್ದಾರೆ ಎಂದು ಎಸ್ಸಿಎ ಮ್ಯಾನೇಜರ್ ಹಿಮಾಂಶು ಷಾ ಮಾಹಿತಿ ನೀಡಿದ್ದಾರೆ.
ತಂಡ ಇಂತಿದೆ: ಚೇತೇಶ್ವರ ಪೂಜಾರ (ನಾಯಕ), ರಾಬಿನ್ ಉತ್ತಪ್ಪ, ಜಯದೇವ್ ಉನದ್ಕತ್, ಸ್ನೆಲ್ ಪಟೇಲ್ (ವಿಕೆಟ್ ಕೀಪರ್), ಪ್ರೇರಕ್ ಮನ್ಕಂದ್, ಚಿರಾಗ್ ಜನಿ, ದರ್ಮೇಂದ್ರ ಜಡೇಜ, ವಂದಿತ್ ಜೀವರಜನಿ, ಅವಿ ಬರೋತ್, ಕಿಶನ್ ಪರ್ಮರ್, ಕೃಶಂಗ್ ಪಟೇಲ್, ಶೌರ್ಯ ಸನಂದಿಯಾ, ಹಾರ್ದಿಕ್ ರಾಥೋಡ್.(ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications