ಬೆಂಗಳೂರು, ಡಿ. 04: ಹಾಲಿ ಚಾಂಪಿಯನ್ ಕರ್ನಾಟಕ ತಂಡ ರಣಜಿ ಟ್ರೋಫಿಯಿಂದ ಹೊರಬಿದ್ದಿದೆ. ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 53ರನ್ ಗಳಿಂದ ವಿನಯ್ ಪಡೆ ಸೋಲು ಕಂಡಿದೆ. ಈ ಮೂಲಕ ಸತತವಾಗಿ 34 ಪಂದ್ಯಗಳ ಗೆಲುವಿನ ಅಭಿಯಾನಕ್ಕೆ ಬ್ರೇಕ್ ಬಿದ್ದಿದೆ.
ಪುಣೆಯಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ನೀಡಿದ್ದ ಗೆಲುವಿನ ಗುರಿ 293ರನ್ ತಲುಪಲಾಗದೆ ಕರ್ನಾಟಕ ತಂಡ 239ಸ್ಕೋರಿಗೆ ಸರ್ವ ಪತನಗೊಂಡಿತು. ಈ ಮೂಲಕ ನಾಕೌಟ್ ಹಂತ ಕೂಡಾ ತಲುಪದೆ ಪ್ರಸಕ್ತ ವರ್ಷದ ರಣಜಿ ಋತು ಮುಗಿಸಿದೆ. ವಿನಯ್ ಕುಮಾರ್ ಪಡೆ ಕಳೆದ ಎರಡು ವರ್ಷ ಸತತವಾಗಿ ರಣಜಿ ಟ್ರೋಫಿ ಎತ್ತಿ ಹಿಡಿದಿತ್ತು. [ರಾಹುಲ್ ದ್ರಾವಿಡ್ ದಾಖಲೆ ಸಮಕ್ಕೆ ನಿಂತ ರಾಬಿನ್ ಉತ್ತಪ್ಪ]

ಸಂಕ್ಷಿಪ್ತ ಸ್ಕೋರ್
ಮಹಾರಾಷ್ಟ್ರ : ಮೊದಲ ಇನ್ನಿಂಗ್ಸ್ 212 (ಭವಾನೆ 87)
ಎರಡನೇ ಇನ್ನಿಂಗ್ಸ್ 260 (ಮುಂಡೆ 81, ಆರ್ ತ್ರಿಪಾಠಿ 78, ವಿನಯ್ ಕುಮಾರ್ 4/71)
ಕರ್ನಾಟಕ
ಮೊದಲ ಇನ್ನಿಂಗ್ಸ್ 180 (ಸಕ್ಲೇಚ 4/58)
ಎರಡನೇ ಇನ್ನಿಂಗ್ಸ್ 239 (ಸಿಎಂ ಗೌತಮ್ 65, ಧುಮಾಳ್ 5/78, ಸಕ್ಲೇಚ 4/65)
ದೆಹಲಿ ವಿರುದ್ಧ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆಯಿಂದ 3 ಅಂಕಗಳನ್ನು ಪಡೆದಿದ್ದು, ಒಟ್ಟು ತನ್ನ ಅಂಕಗಳನ್ನು 24 ಕ್ಕೆ ಹೆಚ್ಚಿಸಿಕೊಂಡಿತ್ತು. ಆದರೆ, ಪ್ರಸಕ್ತ ಸಾಲಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ವಿರುದ್ಧ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿ ಟೂರ್ನಿಯಿಂದ ಹೊರ ನಡೆಯಬೇಕಾಗಿದೆ.