For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ಕೋಚ್ ಮತ್ತು ನಾಯಕನಿಗೆ ವಿಶೇಷ ಹಕ್ಕು ಬೇಕಿದೆ: ರವಿಶಾಸ್ತ್ರಿ

Ravi shastri

ಕಳೆದ ಹಲವು ವರ್ಷಗಳಿಂದ ಭಾರತ ಕ್ರಿಕೆಟ್ ತಂಡ ಮತ್ತು ಆಯ್ಕೆ ಸಮಿತಿಯ ನಡುವೆ ವಿವಾದದ ಸುದ್ದಿ ಅಷ್ಟಾಗಿ ಕೇಳಿ ಬಂದಿರ್ಲಿಲ್ಲ. ಆದ್ರೆ ಇತ್ತೀಚಿನ ಪ್ರಕರಣವು ನಾಯಕ ವಿರಾಟ್ ಕೊಹ್ಲಿ ಅವರ ಬಗ್ಗೆ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗುವ ಮೊದಲು ಅವರು ತೆಗೆದುಹಾಕುವ ನಿರ್ಧಾರವನ್ನು ಬಹಿರಂಗಪಡಿಸಿದೆ.

ಕೊಹ್ಲಿ ಹೇಳಿದ ಪ್ರಕಾರ ಒಂದೂವರೆ ಗಂಟೆಯ ಹಿಂದೆ ಆಯ್ಕೆಗಾರರು ಅವರನ್ನ ಸಂಪರ್ಕಿಸಿದ್ದರು ಮತ್ತು ಏಕದಿನ ನಾಯಕತ್ವ ತ್ಯಜಿಸುವಂತೆ ತಿಳಿಸಿದ್ರು. ಇದ್ರ ಜೊತೆಗೆ ಟಿ20 ಮಾದರಿಯ ನಾಯಕತ್ವವನ್ನು ತೊರೆಯಬೇಡಿ ಎಂಬ ಬಗ್ಗೆ ಏನೂ ಮನವಿ ಮಾಡಿರಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿಯ ಈ ಹೇಳಿಕೆಯ ನಂತರ ವಿವಾದಕ್ಕೆ ಕಾರಣವಾಯಿತು. ಜೊತೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇದನ್ನು ಆಂತರಿಕವಾಗಿ ಪರಿಹರಿಸಬೇಕು ಎಂದು ಹೇಳುವ ಮೂಲಕ ವಿಷಯವನ್ನು ಶಾಂತಗೊಳಿಸಿದರು.

ಈ ನಡುವೆ ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ತಂಡದ ಆಯ್ಕೆಗೆ ಸಂಬಂಧಿಸಿದಂತೆ ಹೊಸ ಹೇಳಿಕೆ ನೀಡಿದ್ದು, ತಂಡದ ಮುಖ್ಯ ಕೋಚ್ ಮತ್ತು ನಾಯಕನಿಗೆ ವಿಶೇಷ ಹಕ್ಕು ನೀಡುವಂತೆ ಒತ್ತಾಯಿಸಿದ್ದಾರೆ. ರವಿಶಾಸ್ತ್ರಿ ಪ್ರಕಾರ, ತಂಡದ ಆಯ್ಕೆಯ ಸಂದರ್ಭದಲ್ಲಿ ನಾಯಕ ಮತ್ತು ಕೋಚ್‌ನ ಅಭಿಪ್ರಾಯಗಳಿಗೆ ಪ್ರಾಮುಖ್ಯತೆ ನೀಡುವಂತೆ ಬಿಸಿಸಿಐಗೆ ಕೇಳಲಾಗಿದೆ. ಆಯ್ಕೆಗಾರರನ್ನು ಹೊರತುಪಡಿಸಿ, ತಂಡದ ಮುಖ್ಯ ಕೋಚ್ ಮತ್ತು ನಾಯಕನಿಗೆ ತಂಡದ ಆಯ್ಕೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ನೀಡಬೇಕು ಎಂದು ಅವರು ನಂಬುತ್ತಾರೆ.

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ರವಿಶಾಸ್ತ್ರಿ, "ತಂಡದ ಆಯ್ಕೆಯ ಸಮಯದಲ್ಲಿ ಕೋಚ್ ಮತ್ತು ನಾಯಕನ ಅಭಿಪ್ರಾಯಕ್ಕೆ ಆದ್ಯತೆ ನೀಡಬೇಕು, ವಿಶೇಷವಾಗಿ ನೀವು ತುಂಬಾ ಅನುಭವಿ ಕೋಚ್ ಹೊಂದಿದ್ದರೆ, ಆಯ್ಕೆದಾರರು ಅಧಿಕೃತ ತಂಡವನ್ನು ಘೋಷಿಸಿದಾಗ, ಅವರು ಕೋಚ್ ಮತ್ತು ನಾಯಕನ ಮಾತನ್ನು ಕೇಳಬೇಕು. ನಾಯಕ ಕೂಡ ಆಯ್ಕೆಯ ಸಮಯದಲ್ಲಿ ಅವರ ಮಾತನ್ನು ಕೇಳಬೇಕು ಎಂದಿದ್ದಾರೆ.

2019ರ ವಿಶ್ವಕಪ್‌ನ ಸೋಲಿನ ಬಗ್ಗೆ ರವಿಶಾಸ್ತ್ರಿ ಇತ್ತೀಚೆಗೆ ಹೇಳಿಕೆ ನೀಡಿದ್ದು, 3 ವಿಕೆಟ್‌ ಕೀಪರ್‌ಗಳನ್ನು ತಂಡಕ್ಕೆ ಸೇರಿಸಿಕೊಳ್ಳುವುದರ ಅರ್ಥ ನನಗೆ ಅರ್ಥವಾಗಲಿಲ್ಲ, ಬದಲಿಗೆ ನಾವು ಹೆಚ್ಚುವರಿ ಬ್ಯಾಟ್ಸ್‌ಮನ್‌ಗಳನ್ನು ತೆಗೆದುಕೊಂಡು ತಂಡಕ್ಕೆ ಯಶಸ್ಸು ನೀಡಬಹುದಿತ್ತು ಎಂದು ಹೇಳಿರುವುದು ಗಮನಾರ್ಹ. ಇಲ್ಲದಿದ್ದನ್ನು ಪಡೆಯಬಹುದಿತ್ತು, ಆದರೆ ಆಯ್ಕೆಯಲ್ಲಿ ಕೋಚ್ ಮತ್ತು ನಾಯಕನ ಯಾವುದೇ ಪಾತ್ರವಿಲ್ಲ, ಇದರಿಂದಾಗಿ ನಾವು ಆ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ತಮ್ಮ ಅಭಿಪ್ರಾಯವನ್ನು ಒಪ್ಪಿಕೊಂಡರೆ 2019ರ ವಿಶ್ವಕಪ್‌ನಲ್ಲಿ ಮೂವರು ವಿಕೆಟ್‌ಕೀಪರ್‌ಗಳ ಬದಲಿಗೆ ಅಂಬಾಟಿ ರಾಯುಡು ಅಥವಾ ಶ್ರೇಯಸ್ ಅಯ್ಯರ್ ಅವರನ್ನು ಹೆಚ್ಚುವರಿ ಬ್ಯಾಟ್ಸ್‌ಮನ್‌ಗಳಾಗಿ ತಂಡದಲ್ಲಿ ಸೇರಿಸಿಕೊಳ್ಳುವುದಾಗಿ ರವಿಶಾಸ್ತ್ರಿ ಹೇಳಿರುವುದು ಗಮನಿಸಬೇಕಾದ ಸಂಗತಿ.

ರವಿಶಾಸ್ತ್ರಿ ಅವರ ಅವಧಿಯಲ್ಲಿ ಬ್ಯಾಟಿಂಗ್ ಕೋಚ್ ಪಾತ್ರ ನಿರ್ವಹಿಸಿದ್ದ ಸಂಜಯ್ ಬಂಗಾರ್ ಕೂಡ ಭಾರತ ತಂಡದ ಆಯ್ಕೆಯನ್ನು ನೋಡಿದಾಗ ಆಯ್ಕೆದಾರರು ಯಾವಾಗಲೂ ಕೊನೆಯ ಕರೆಯನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದರು ಎಂಬುದು ಗಮನಾರ್ಹ.

ಕೋಚ್ ರವಿಶಾಸ್ತ್ರಿ ಅವರು 2021 ರ ಟಿ 20 ವಿಶ್ವಕಪ್ ನಂತರವೇ ತಮ್ಮ 7 ವರ್ಷಗಳ ಕೋಚಿಂಗ್ ವೃತ್ತಿಜೀವನವನ್ನು ಕೊನೆಗೊಳಿಸಿದರು. ಈ ಅವಧಿಯಲ್ಲಿ ಅವರು ಭಾರತ ತಂಡವನ್ನು ಅನೇಕ ಐತಿಹಾಸಿಕ ವಿಜಯಗಳಿಗೆ ತೆಗೆದುಕೊಂಡು ಹೋಗಿದ್ದರೂ, ಈ ಅವಧಿಯಲ್ಲಿ ಭಾರತ ತಂಡದ ಐಸಿಸಿ ಪ್ರಶಸ್ತಿ ಗೆಲ್ಲುವ ಬರ ಮುಂದುವರೆಯಿತು.

Story first published: Thursday, December 30, 2021, 9:30 [IST]
Other articles published on Dec 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+