
'ನಾನು ವಿಕೆಟ್ ತ್ಯಾಗ ಮಾಡಬೇಕಿತ್ತು'
ರನ್ ಔಟ್ ವೇಳೆ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಬೇಕಿತ್ತು. ರೋಹಿತ್ ಉತ್ತಮ ಲಯದಲ್ಲಿದ್ದ ಕಾರಣ ನಾಯಕನಿಗಾಗಿ ತನ್ನ ವಿಕೆಟ್ ಒಪ್ಪಿಸಿದ್ದರು ಸೂರ್ಯ ಕುಮಾರ್. ಈ ಕುರಿತು ಪ್ರಶಸ್ತಿ ಸಮಾರಂಭದಲ್ಲಿ ಪ್ರತಿಕ್ರಿಯೆ ನೀಡಿದ ರೋಹಿತ್ ಶರ್ಮಾ, ''ಸೂರ್ಯ ಕುಮಾರ್ ಟೂರ್ನಿಯಲ್ಲಿ ಇದ್ದ ಲಯ ಗಮನಿಸಿದರೆ ನಾನು ವಿಕೆಟ್ ತ್ಯಾಗ ಮಾಡಬೇಕಿತ್ತು. ಸೂರ್ಯ ಕುಮಾರ್ ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು'' ಎಂದಿದ್ದಾರೆ.

ಸೂರ್ಯ ವಿಕೆಟ್ ತ್ಯಾಗ ವ್ಯರ್ಥವಾಗಲಿಲ್ಲ
ಸೂರ್ಯ ಕುಮಾರ್ ಯಾದವ್ ತಂಡಕ್ಕಾಗಿ ಆಡುವ ಆಟಗಾರ ಎಂದು ಈ ರನ್ ಔಟ್ನಲ್ಲಿ ಸಾಬೀತು ಪಡಿಸಿದ್ದಾರೆ. ಟೂರ್ನಿಯಲ್ಲಿ ಸೂರ್ಯ ಒಳ್ಳೆಯ ಲಯದಲ್ಲಿದ್ದರು. ರೋಹಿತ್ ಶರ್ಮಾ ಫಾರ್ಮ್ನಲ್ಲಿ ಇರಲಿಲ್ಲ. ಅದೃಷ್ಟವಶಾತ್ ಫೈನಲ್ ಪಂದ್ಯದಲ್ಲಿ ರೋಹಿತ್ ಉತ್ತಮ ಆಟ ಆಡಿದರು. ತಂಡವನ್ನು ಗೆಲುವಿನ ದಡಕ್ಕೆ ತಂದು ಬಿಟ್ಟರು. ಸೂರ್ಯ ವಿಕೆಟ್ ತ್ಯಾಗ ಮಾಡಿದ್ದು ವ್ಯರ್ಥ ಆಗಲಿಲ್ಲ.

ನೆಟ್ಟಿಗರಿಂದ ಭಾರಿ ಮೆಚ್ಚುಗೆ
ರೋಹಿತ್ ಶರ್ಮಾಗಾಗಿ ಸೂರ್ಯ ಕುಮಾರ್ ಯಾದವ್ ವಿಕೆಟ್ ತ್ಯಾಗ ಮಾಡಿದ್ದಕ್ಕಾಗಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಯಕ ಒಳ್ಳೆಯ ಲಯದಲ್ಲಿದ್ದರು. ಸ್ವಾರ್ಥಕ್ಕೆ ಬಲಿಯಾಗದೆ, ನಾಯಕನಿಗೆ ಅವಕಾಶ ಕೊಡುವ ಉದ್ದೇಶದಿಂದ ವಿಕೆಟ್ ಒಪ್ಪಿಸಿದ್ದು ನಿಜಕ್ಕೂ ಸ್ವಾಗತರ್ಹ ಎಂದಿದ್ದಾರೆ.

ದಾಖಲೆ ಮಿಸ್ ಆಯ್ತು
ಸೂರ್ಯ ಕುಮಾರ್ ಈ ಹೀಗೆ ವಿಕೆಟ್ ಒಪ್ಪಿಸುವ ಮೂಲಕ ಮಹತ್ವದ ಮೈಲಿಗಲ್ಲೊಂದನ್ನು ಕೂಡ ತಪ್ಪಿಸಿಕೊಂಡಿದ್ದಾರೆ. ಐಪಿಎಲ್ನ ಈ ಬಾರಿಯ ಆವೃತ್ತಿಯಲ್ಲಿ 500+ ರನ್ ಗಳಿಸುವ ಅವಕಾಶ ಸೂರ್ಯಕುಮಾರ್ ಯಾದವ್ ಮುಂದಿತ್ತು. ಆದರೆ ಕೇವಲ 20 ರನ್ಗಳಿಂದ ಇದನ್ನು ತಪ್ಪಿಸಿಕೊಂಡರು. 2020ನೇ ಐಪಿಎಲ್ನಲ್ಲಿ 480 ರನ್ ಬಾರಿಸಿದ್ದರು.


Click it and Unblock the Notifications











