ಆಲ್ರೌಂಡರ್ ಕಡೆಗೆ ಗಮನ ನೀಡಲು ಸಲಹೆ
ನ್ಯೂಜಿಲೆಂಡ್ ವಿರುದ್ಧದ ಸೋಲಿನ ಬಳಿಕ ಮಾತನಾಡಿದ ಸಬಾ ಕರೀಮ್ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆಲ್ರೌಂಡರ್ಗಳ ಕಡೆಗೆ ಗಮನಹರಿಸುವಂತೆ ಕೇಳಿಕೊಂಡಿದ್ದಾರೆ. ಆಡುವ ಹನ್ನೊಂದರ ಬಳಗದಲ್ಲಿ ಹೆಚ್ಚುವರಿ ಬ್ಯಾಟ್ಸ್ಮನ್ಗಳನ್ನು ಸೇರ್ಪಡೆಗೊಳಿಸುವ ಬದಲಾಗಿ ಆಲ್ರೌಂಡರ್ಗಳನ್ನು ಸೇರ್ಪಡೆಗೊಳಿಸಲು ಗಮನಗರಿಸಬೇಕಿದೆ ಎಂದಿದ್ದಾರೆ ಸಬಾ ಕರೀಮ್.
6ನೇ ಬೌಲರ್ನ ಅಗತ್ಯವಿತ್ತು
ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 6 ಮಂದಿ ಬೌಲರ್ಗಳೊಂದಿಗೆ ಕಣಕ್ಕಿಳಿಯಬೇಕಾಗಿತ್ತು ಎಂದಿದ್ದಾರೆ ಸಬಾ ಕರೀಮ್. ಭಾರತದ ಆಡುವ ಬಳಗದಲ್ಲಿ ದೀಪಕ್ ಹೂಡಾಗೆ ಅವಕಾಶ ನೀಡಿದ್ದರೆ ಅವರು ಆರನೇ ಬೌಲರ್ ಆಗಿ ದಾಳಿ ನಡೆಸಬಹುದಾಗಿತ್ತು ಎಂದಿದ್ದಾರೆ.
ಭಾರತಕ್ಕೆ ಬೌಲಿಂಗ್ನಲ್ಲಿ ಆಯ್ಕೆಯೇ ಇಲ್ಲ
"ಟೀಮ್ ಇಂಡಿಯಾ ಆರನೇ ಬೌಲರ್ನನ್ನು ಹೊಂದಿಲ್ಲದ ಕಾರಣ ಹೆಚ್ಚಿನ ಆಯ್ಕೆಯೇ ಇಲ್ಲದಂತಾಗಿದೆ. ಇದು ನಿಜಕ್ಕೂ ಕಠಿಣವಾದ ವಿಚಾರವಾಗಿದೆ. ಭಾರತದ ಮ್ಯಾನೇಜ್ಮೆಂಟ್ ಖಂಡಿತವಾಗಿಯೂ ಆರನೇ ಬೌಲಿಂಗ್ ಆಯ್ಕೆಯನ್ನು ನೀಡುವುದು ಅಗತ್ಯವಾಗಿದೆ. ವೈಟ್ಬಾಲ್ ಕ್ರಿಕೆಟ್ನಲ್ಲಿ ನಾವು ಐವರು ಬೌಲರ್ಗಳೊಮದಿಗೆ ಯಾವಾಗಲೂ ಕಣಕ್ಕಿಳಿಯುತ್ತೇವೆ. ಈ ಯೋಚನೆಯೇ ನಗೆ ಅಚ್ಚರಿ ಮೂಡಿಸುತ್ತದೆ" ಎಂದಿದ್ದಾರೆ ಸಬಾ ಕರೀಮ್.
ಮೊದಲ ಪಂದ್ಯದಲ್ಲಿ ಸೋಲಿನ ರುಚಿ ಕಂಡ ಭಾರತ
ಇನ್ನು ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾಗೆ 7 ವಿಕೆಟ್ಗಳ ಅಂತರದ ಬೃಹತ್ ಸೋಲು ಎದುರಾಗಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಶಿಖರ್ ಧವನ್, ಶುಬ್ಮನ್ ಗಿಲ್, ಹಾಗೂ ಶ್ರೇಯಸ್ ಐಯ್ಯರ್ ಅವರ ಅರ್ಧ ಶತಕದ ನೆರವಿನಿಂದ 306 ರನ್ಗಳಿಸಿತ್ತು. ಟೀಮ್ ಇಂಡಿಯಾ ಪರವಾಗಿ ಸಂಜು ಸ್ಯಾಮ್ಸನ್ ಹಾಗೂ ವಾಶಿಂಗ್ಟನ್ ಸುಂದರ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಟೀಮ್ ಇಂಡಿಯಾ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಸಾಧಾರಣ ಆರಂಭವನ್ನು ಪಡೆಯಿತು. ಮೊದಲ ಮೂರು ವಿಕೆಟ್ಗಳನ್ನು 88 ರನ್ಗಳನ್ನು ಗಳಿಸುವಷ್ಟರಲ್ಲಿ ಕಿವೀಸ್ ಪಡೆ ಕಳೆದುಕೊಂಡಿತ್ತು. ಆದರೆ ಬಳಿಕ ಜೊತೆಯಾದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಟಾಮ್ ಲ್ಯಾಥಮ್ ಅಜೇಯ ಪ್ರದರ್ಶನ ನೀಡಿದರು. ಟಾಮ್ ಲಾಥಮ್ 145 ರನ್ಗಳ ಅಮೋಘ ಪ್ರದರ್ಶನ ನೀಡಿದರೆ ಕೇನ್ ವಿಲಿಯಮ್ಸನ್ 94 ರನ್ಗಳಿಸಿದರು. ಈ ಮೂಲಕ 7 ವಿಕೆಟ್ಗಳ ಅಂತರದ ಗೆಲುವು ಸಾಧಿಸಿದೆ.