ಆರಂಭಿಕ ವಿಕೆಟ್ ಕಾವಲು ಕಾಯಬೇಕು
ಆರಂಭಿಕ 1, 2 ಮತ್ತು 3ನೇ ಬ್ಯಾಟ್ಸ್ಮನ್ಗಳು ಕನಿಷ್ಠ 30ನೇ ಓವರ್ ಮುಗಿಯುವವರೆಗಾದರೂ ವಿಕೆಟ್ ಕಾವಲು ಕಾಯಬೇಕು. 30 ಓವರ್ ಒಳಗಾಗಿ ವಿಕೆಟ್ ಒಪ್ಪಿಸಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮೇಲೆ ಹೊರೆ ಬೀಳಲು ಅವಕಾಶ ಮಾಡಿಕೊಡಬಾರದು. ಆಗ ತಂಡಕ್ಕೆ ಗೆಲುವಿನ ದಾರಿ ಸುಲಭವಾಗುತ್ತದೆ' ಎಂದು ಸಚಿನ್ ಹೇಳಿದ್ದಾರೆ.
ಚೆಂಡಿನ ಒರಟುತನದ ಗುಟ್ಟು
'ನಾನಿದನ್ನು ಇಂಗ್ಲೆಂಡ್ ಪ್ರವಾಸ ವೇಳೆಯೂ ಹೇಳಿಕೊಂಡಿದ್ದೆ. ಮೊದಲ ಮೂರು ಬ್ಯಾಟ್ಸ್ಮನ್ಗಳು 40 ಓವರ್ ವರೆಗೂ ವಿಕೆಟ್ ಉಳಿಸಿಟ್ಟುಕೊಳ್ಳಬೇಕು. ಅನಂತರ ಕ್ರಮೇಣ ಚೆಂಡಿನ ಒರಟುತನ ಕಳೆದುಹೋಗುತ್ತದೆ. ಆಗ ರನ್ ಕದಿಯಲು ತಂಡಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದೆ' ಎಂದು ತೆಂಡೂಲ್ಕರ್ ವಿವರಿಸಿದರು.
ಹೊರೆ ಬೀಳದಂತೆ ನೋಡಿಕೊಳ್ಳಿ
ಮಾತು ಮುಂದುವರೆಸಿದ ಸಚಿನ್, 'ಇಂಗ್ಲೆಂಡ್ ವಾತಾವರಣಕ್ಕೆ ತಕ್ಕಂತೆ 40 ಓವರ್ ವರೆಗೆ ಮೊದಲ ಮೂರು ವಿಕೆಟ್ ಕಾವಲು ಮುಖ್ಯವೆನಿಸಿದರೆ, ಆಸ್ಟ್ರೇಲಿಯಾ ನೆಲಕ್ಕೆ ತಕ್ಕಂತೆ ಆರಂಭಿಕ 35 ಓವರ್ ಗಳ ವರೆಗೂ ನಮ್ಮ ತಂಡದ ಬ್ಯಾಟ್ಸ್ಮನ್ಗಳು 4ನೇ ಕ್ರಮಾಂಕದ ಬ್ಯಾಟ್ಸ್ಮನ್ ಮೇಲೆ ಹೊರೆ ಬೀಳದಂತೆ ನೋಡಿಕೊಳ್ಳಬೇಕು' ಎಂದರು.
ಬೌಲರ್ಗಳಿಗೂ ಅನುಕೂಲ!
'30-35 ಓವರ್ ವರೆಗೆ ವಿಕೆಟ್ ಉರುಳದಂತೆ ನೋಡಿಕೊಂಡರೆ ಚೆಂಡು ಸವೆದು ತಂಡದ ಉಳಿದ ಬ್ಯಾಟ್ಸ್ಮನ್ಗಳಿಗೆ ನೆರವಾದಂತೆ ಎದುರಾಳಿ ಬೌಲರ್ಗಳಿಗೂ ಅನುಕೂಲ ಒದಗಿಸುತ್ತೆ. ಯಾಕೆಂದರೆ 30-35 ಓವರ್ ಗಳ ಬಳಿಕ ಚೆಂಡು ಕೊಂಚ ಸ್ವಿಂಗ್ಗೆ ಅನುಕೂಲ ಮಾಡುತ್ತದೆ. ಆದರೆ ಭಾರತದ ಬ್ಯಾಟ್ಸ್ಮನ್ಗಳು ಆ ವೇಳೆ ಅಂಥ ಎಸೆತಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ' ಎಂದು ಸಚಿನ್ ತಿಳಿಸಿದ್ದಾರೆ.